ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ಶಿಫಾರಸ್ಸಿನ ಮೇರೆಗೆ ಬಂಟ್ವಾಳ ತಾಲೂಕಿನ ವಿಧಾನಸಭಾ ಕ್ಷೇತ್ರದ ಮಳೆಹಾನಿ ಯೋಜನೆಯಲ್ಲಿ ಕ್ಷೇತ್ರದ ವಿವಿಧ ರಸ್ತೆಗಳ ಮರು ಡಾಮರೀಕರಣ ಕಾಮಗಾರಿಗಳಿಗೆ 14 ಕೋಟಿ 79 ಲಕ್ಷ ಅನುದಾನ ಮಂಜೂರು ಆಗಿರುತ್ತದೆ. ಈ ಕೆಳಗಿನ ಕಾಮಗಾರಿಗಳಿಗೆ ಮಾ.14 ಶನಿವಾರ ಮತ್ತು ಮಾ.15 ಆದಿತ್ಯವಾರದಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಶಿಲಾನ್ಯಾಸ ನೆರೆವೇರಿಸಲಿದ್ದಾರೆ.
ಮಾ.14 ಶನಿವಾರದಂದು ಬೆಳಿಗ್ಗೆ ಕರಿಯಂಗಳ ಗ್ರಾಮದ ಪುಂಚಮೆ-ಪಲ್ಲಿಪಾಡಿ ರಸ್ತೆ ಶಿಲಾನ್ಯಾಸ (86 ಲಕ್ಷ), ಕಳ್ಳಿಗೆ ಗ್ರಾಮದ ಬ್ರಹ್ಮರಕೊಟ್ಲು-ಕಳ್ಳಿಗೆ ರಸ್ತೆ ಶಿಲಾನ್ಯಾಸ (80 ಲಕ್ಷ), ಬಾಳ್ತಿಲ ಗ್ರಾಮದ ಸಣ್ಣಕುಕ್ಕು-ದಾಸಕೋಡಿ ರಸ್ತೆ ಶಿಲಾನ್ಯಾಸ (1.50 ಕೋಟಿ), ಅನಂತಾಡಿ ಗ್ರಾಮದ ಅನಂತಾಡಿ-ಕೊಂಬಿಲ ರಸ್ತೆ ಶಿಲಾನ್ಯಾಸ (1.50 ಕೋಟಿ), ಮಧ್ಯಾಹ್ನ ನಾವೂರು, ಸರಪಾಡಿ ಗ್ರಾಮದ ಮಣಿಹಳ್ಳ-ಅಲ್ಲಿಪಾದೆ-ಅಜಿಲಮೊಗರು ರಸ್ತೆ ಶಿಲಾನ್ಯಾಸ (1.70 ಕೋಟಿ), ಸರಪಾಡಿ ಗ್ರಾಮದ ಕುಂಟಾಲಪಲ್ಕೆ ರಸ್ತೆ ಶಿಲಾನ್ಯಾಸ (98 ಲಕ್ಷ), ಮಣಿನಾಲ್ಕೂರು ಗ್ರಾಮದ ಗಂಡಿ ಕೊಟ್ಟಿಂಜ ರಸ್ತೆ ಶಿಲಾನ್ಯಾಸ (65 ಲಕ್ಷ), ಬಡಗಕಜೆಕಾರು ಗ್ರಾಮದ ನರ್ಸಿರಕುಮೇರು-ಪಾಂಡವರಕಲ್ಲು ರಸ್ತೆ ಶಿಲಾನ್ಯಾಸ (1.35 ಕೋಟಿ) ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಿದ್ದಾರೆ

ಮಾ.15 ಆದಿತ್ಯವಾರ ಬೆಳಿಗ್ಗೆ ಕರೋಪಾಡಿ ಗ್ರಾಮದ ಒಡಿಯೂರು ಪಲ್ಲದಕೋಡಿ ಪದ್ಯಾಣ ರಸ್ತೆ ಶಿಲಾನ್ಯಾಸ (2.25 ಕೋಟಿ), ಮಧ್ಯಾಹ್ನ ಕರೋಪಾಡಿ ಗ್ರಾಮದ ಅರಸೋಳಿಗೆ ರಸ್ತೆ ಶಿಲಾನ್ಯಾಸ (60 ಲಕ್ಷ), ಕೊಳ್ನಾಡು ಗ್ರಾಮದ ಕುಳಾಲು ರಸ್ತೆ ಶಿಲಾನ್ಯಾಸ ((2.50 ಕೋಟಿ) ಶಿಲಾನ್ಯಾಸ ಮಾಡಲಿದ್ದಾರೆ.

