Friday, February 14, 2025

ಬೇಡಿಕೆಗಳಿಗೆ ಮತ್ತು ಸಮಸ್ಯೆ ಗಳ ಪರಿಹಾರಕ್ಕಾಗಿ ಗ್ರಾಮ ಸ್ಪಂದನ ಕಾರ್ಯಕ್ರಮ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ನಾನು ನಿಮ್ಮ ಧ್ವನಿ ಯಾಗಿದ್ದೇನೆ , ಕಷ್ಟಗಳಿಗೆ ಸ್ಷಂದನೆ ನೀಡುತೇನೆ, ನಿಮ್ಮ ಸಲಹೆ ಮತ್ತು ಬೇಡಿಕೆಗಳಿಗೆ ಸದಾ ಜೊತೆಗಿರುತ್ತೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಅವರು ಜೂ. 28 ರಂದು ಅಮ್ಟಾಡಿ ಗ್ರಾ.ಪಂ.ನಲ್ಲಿ ” ಗ್ರಾಮದ ಕಡೆ ಶಾಸಕರ ನಡೆ” ಗ್ರಾಮ ಸ್ಪಂದನ ಕಾರ್ಯಕ್ರಮ ದಲ್ಲಿ ಮಾತನಾಡಿದ ದರು.

1ಕೋಟಿ 20 ಲಕ್ಷ ಅನುದಾನ ಈ ಗ್ರಾ.ಪಂ.ಗೆ ಬಂದಿದ್ದು ಕಾಮಗಾರಿಗಳು ನಡೆಯುತ್ತಿವೆ.
ಉಳಿದಂತೆ ಗ್ರಾಮದ ಜನರಲ್ಲಿ ಇರುವ ಬೇಡಿಕೆಗಳಿಗೆ ಮತ್ತು ಸಮಸ್ಯೆ ಗಳ ಪರಿಹಾರಕ್ಕಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇನೆ.
ಸರಕಾರದ ಯೋಜನೆ ಪ್ರತಿಯೋಬ್ಬರಿಗೂ ತಲುಪಬೇಕು ಮತ್ತು ಜನರಿಗೆ ಯೋಜನೆಗಳ ಮಾಹಿತಿ ಸಿಗಬೇಕು ಎಂದು ಒತ್ತುನೀಡಿ ಅಧಿಕಾರಿಗಳ ಜೊತೆ ನಿಮ್ಮ ಬಳಿ ಬಂದಿದ್ದೇನೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಪಂ.ಅನುದಾನದಲ್ಲಿ ಕುರಿಯಾಳ ಕುಟಿಲ ನಿವಾಸಿ ವಿಕಲಾಂಗೆ ಭವಾನಿ ಅವರಿಗೆ ವೀಲ್ ಚೇರ್ ನ್ನು ಶಾಸಕರು ನೀಡಿದರು.

ಕಾರ್ಯಕ್ರಮಕ್ಕೆ ಅಗಮಿಸಿದ ಸಾರ್ವಜನಿಕ ರಿಂದ ಅಹವಾಲು ಸ್ವೀಕರಿಸಿದ ಅವರು ಕೆಲವೊಂದು ಸಮಸ್ಯೆ ಗಳಿಗೆ ಸ್ಥಳದಲ್ಲಿ ಪರಿಹಾರ ನೀಡಿದರು.

ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ನಡೆದ ಕಾಮಗಾರಿಗಳ ವೀಕ್ಷಣೆ ನಡೆಸಿದ ಬಳಿಕ ರಸ್ತೆಗಳ ಉದ್ಘಾಟನೆ ನಡೆಸಲಾಯಿತು.ಕಾರ್ಯಕ್ರಮ ದ ಬಳಿಕ ಅಧಿಕಾಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.ಸಮಸ್ಯೆ ಗಳಿಗೆ ಶೀಘ್ರವಾಗಿ ಮುಕ್ತಿ ನೀಡುವಂತೆ ತಿಳಿಸಿದರು. ‌
ಸ್ವಚ್ಚಗೆ ಆದ್ಯತೆ ನೀಡಿ, ‌ಬಹಳ ಪ್ರಮುಖವಾಗಿ ಬರುವ ವರ್ಷದಿಂದ ಕುಡಿಯುವ ನೀರಿನ‌ ಸಮಸ್ಯೆ ಉಂಟಾಗದಂತೆ ಬೇಕಾದ ಕ್ರಮಗಳನ್ನು ನಾವು ಮಾಡಬೇಕಾಗಿದೆ. ಪ್ರತಿ ಗ್ರಾ.ಪಂ.ನವರು ಈ ಕಾರ್ಯಕ್ರಮ ಕ್ಕೆ ಕೈಜೋಡಿಸಬೇಕು ಎಂದರು.

ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷ ಹರೀಶ್ ಶೆಟ್ಟಿ ಪಡು, ತಾ.ಪಂ.ಸದಸ್ಯೆ ಮಲ್ಲಿಕಾ ವಿ.ಶೆಟ್ಟಿ ಉಪಾಧ್ಯಕ್ಷ ಯಶೋಧ, ಗ್ರಾ.ಪಂ.ಸದಸ್ಯ ರಾದ ಶೇಖರ್ ಶೆಟ್ಟಿ, ಬಬಿತಾ ಕೋಟ್ಯಾನ್, ಚೇತನಾ, ಪೂರ್ಣಿಮಾ, ಶ್ರೀಮತಿ ಶೆಟ್ಟಿ, ಐರಿನ್ ಡಿಸೋಜ, ಮೋಹಿನಿ, ವಿಶ್ವನಾಥ, ದೇವದಾಸ್, ಚಂದ್ರಾವತಿ ನಾಯ್ಕ, ಸುನಿಲ್ ಕೆ., ಸುರೇಂದ್ರ, ಸುಧಾಕರ ಶೆಟ್ಟಿ, ರತಿ ಭಂಡಾರಿ,

ಪಿ.ಡಿ.ಒ. ಮಹಮ್ಮದ್ ಬಿ.ಕಂದಾಯ ಅಧಿಕಾರಿ ನವೀನ್ ,ಗ್ರಾಮ ಕರಣೀಕ ರಾದ ಶಶಿ ಕುಮಾರ್, ಅಮೃತಾಂಶಿ, ಸಿ.ಡಿ.ಪಿ.ಒ.ಗಾಯತ್ರಿ ಬಾಯಿ , ಪಂ.ಕಾರ್ಯದರ್ಶಿ ಲಕ್ಮೀನಾರಾಯಣ ಕೆ.

ಬಿಜೆಪಿ ಪ್ರಮುಖರಾದ ಹರಿಕೃಷ್ಣ ಬಂಟ್ವಾಳ, ದೇವದಾಸ ಶೆಟ್ಟಿ, ರಾಮ್ ದಾಸ ಬಂಟ್ವಾಳ,ಶ್ರೀ ಕಾಂತ ಶೆಟ್ಟಿ ಸಜೀಪ, ಸೀತಾರಾಮ ಪೂಜಾರಿ, ರಮಾನಾಥ ರಾಯಿ, ಪುರುಷೋತ್ತಮ ವಾಮದಪದವು, ನಂದರಾಮ್ ರೈ, ಪ್ರದೀಪ್ ಅಜ್ಜಿಬೆಟ್ಟು, ಸುದರ್ಶನ ಬಜ, ಗಣೇಶ್ ರೈ ಮಾಣಿ, ಮತ್ತಿತರರು ಉಪಸ್ಥಿತರಿದ್ದರು.
ಗ್ರಾ.ಪಂ.ಅಧ್ಯಕ್ಷ ಹರೀಶ್ ಶೆಟ್ಟಿ ಪಡು ಸ್ವಾಗತಿಸಿದರು.
ಪಿ.ಡಿಒ ಮಹಮ್ಮದ್ ವಂದಿಸಿ , ಕಾರ್ಯಕ್ರಮ ನಿರೂಪಿಸಿದರು

 

More from the blog

ಕೆ.ಎನ್.ಆರ್.ಸಿ.ಕಂಪೆನಿ ಅಧಿಕಾರಿಗಳ ವಿರುದ್ದ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು..

ಬಂಟ್ವಾಳ: ಖಾಸಗಿ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಮಣ್ಣು ಅಗೆದು ನಷ್ಟ ಮಾಡಿದ್ದಾರೆ ಎಂದು ಖಾಸಗಿ ಕಂಪೆನಿ ಮೇಲೆ ಬಂಟ್ವಾಳ ‌ನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‌ರಾಷ್ಟ್ರೀಯ ಹೆದ್ದಾರಿ ಬಿಸಿರೋಡು- ಅಡ್ಡಹೊಳೆ ಚತುಷ್ಪತ...

ಡೆತ್ ನೋಟ್ ನೀಡಿದ ಮಹತ್ವದ ಸುಳಿವು: ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್

ಡೆತ್ ನೊಟ್ ನೀಡಿದ ಸುಳಿವು ಸ್ನೇಹಿತರ ಪಾಲಿಗೆ ಯಮಸ್ವರೂಪಿಯಾದರೆ , ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬಹುದಾ? ..... ಕಳೆದ ಮೂರು ದಿನಗಳ ಹಿಂದೆ ನಡೆದ ಅವಿವಾಹಿತ ಯುವಕನ ಆತ್ಮಹತ್ಯೆ ಹಿಂದೆ ಲಕ್ಷಾಂತರ ರೂ ಹಣದ ವಹಿವಾಟಿನ...

ಮಾ.1 ರಿಂದ 7 ರ ವರೆಗೆ ಪೊಳಲಿಯಲ್ಲಿ ಶತಚಂಡಿಕಾಯಾಗ ಹಾಗೂ ದೊಡ್ಡರಂಗ ಪೂಜೆ

ಬಂಟ್ವಾಳ: ಲೋಕಕಲ್ಯಾಣಾರ್ಥ ಹಾಗೂ ಸಾನಿಧ್ಯ ವೃದ್ದಿಗಾಗಿ ಮಾ.1 ರಿಂದ ಮಾ.07 ರ ವರೆಗೆ ಪೊಳಲಿ ಶ್ರೀ ದುರ್ಗಾಪರಮೇಶ್ವರಿ ರಾಜರಾಜೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಬ್ರಹ್ಮ ಶ್ರೀ ವೇದಮೂರ್ತಿ ಪೊಳಲಿ ಶ್ರೀ ಕೃಷ್ಣ ತಂತ್ರಿಗಳ ಮಾರ್ಗರ್ಶನದಲ್ಲಿ...

ಫೆ.18. ರಿಂದ 22 ರವರೆಗೆ ಕುಪ್ಪೆಟ್ಟು ಬರ್ಕೆ ಪ್ರತಿಷ್ಠಾ ಮಹೋತ್ಸವ ಮತ್ತು ನೇಮ

ಶ್ರೀ ಕೊಡಮಣಿತ್ತಾಯ ,ಲೆಕ್ಕೆಸಿರಿ, ಮೈಸಂದಾಯ , ಹಿರಿಯಜ್ಜ, ಕುಪ್ಪೆಟ್ಟು ಪಂಜುರ್ಲಿ, ಮಂತ್ರಜಾವದೆ ,ಬಂಟ ಪಂಜುರ್ಲಿ ಮತ್ತು ಗಡುಪಾಡಿ ಜಾಗದ ಕಲ್ಲುರ್ಟಿ ಪಂಜುರ್ಲಿ ದೈವಗಳ ಪುನರ್ ಪ್ರತಿಷ್ಢಾ ಮಹೋತ್ಸವ ಮತ್ತು ನೇಮೋತ್ಸವ ಫೆ.18 ರಿಂದ...