Sunday, July 6, 2025

ಮಿತ್ತ ಪೆರಾಜೆ: ವರ್ಷಾವಧಿ ಗುಡ್ಡೆಚಾಮುಂಡಿ ವಲಸರಿ ಜಾತ್ರೆ

ಬಂಟ್ವಾಳ: ಮಿತ್ತ ಪೆರಾಜೆ ಶ್ರೀ ಗುಡ್ಡೆಚಾಮುಂಡಿ ದೈವದ ವರ್ಷಾವಧಿ ವಲಸರಿ ಜಾತ್ರೆ ಬುಧವಾರ ರಾತ್ರಿ ನಡೆಯಿತು. ಪೆರಾಜೆ ಗ್ರಾಮದಲ್ಲಿ ನಡೆಯುವ ಕೊನೆಯ ಜಾತ್ರೆಯಾದ ಮಿತ್ತಪೆರಾಜೆ ವಲಸರಿ ಜಾತ್ರೆಯಲ್ಲಿ ಊರಿನ ಹಾಗೂ ಪರ ಊರ ಭಕ್ತರ ಪಾಲ್ಗೊಂಡು ದೈವದ ಗಂಧ ಪ್ರಸಾದ ಸ್ವೀಕರಿಸಿದರು.
ಎ.18 ರಂದು ಪೆರಾಜೆ ಗುತ್ತುವಿನ ಮನೆಯಲ್ಲಿ ಪೂರ್ವ ಕಟ್ಟುಕಟ್ಟಲೆಗಳಂತೆ ಧಾರ್ಮಿಕ ವಿಧಿವಿಧಾನಗಳ ಬಳಿಕ ಗೊನೆ ಕಡಿದು ಎ.24 ರಂದು ರಾತ್ರಿ ಭಂಡಾರಿ ಬಂದು ಬಳಿಕ ದೈವದ ವಲಸರಿ ನೇಮ ನಡೆಯಿತು.

                   

ಕಂಬಳದ ಗದ್ದೆಗೆ ದೈವ ಇಳಿದು ಗದ್ದೆಯ ಕೊನೆಯಲ್ಲಿರುವ ಕಟ್ಟೆಯ ಸುತ್ತ ಮೂರು ಸುತ್ತು ಬಂದು ಬಳಿಕ ಗದ್ದೆಯಿಂದ ವಲಸರಿ ಮೇಲೆ ಬರುವ ವೇಳೆ ಭಕ್ತರು ಹಾಕಿದ ಧರಿಗುಂಟದ ಬಳಿ ನಿಂತು ದೈವ ಭಕ್ತರಿಗೆ ಅಭಯ ನೀಡುತ್ತದೆ, ಆ ಸಮಯದಲ್ಲಿ ದೈವಕ್ಕೆ ಧರಿಗುಂಟ ಹಾಕಿದ ಭಕ್ತರು ಸೀಯಾಳ ಹಿಡಿಯುತ್ತಾರೆ.‌

ಕೊನೆಯ ನೇಮ‌ ಇದಾಗಿರುವುದರಿಂದ ಗ್ರಾಮದಲ್ಲಿನ ಭಕ್ತರ ಸಮಸ್ಯೆ ಗಳಿಗೆ ಇತ್ಯರ್ಥ ಮಾಡಲು ಇಲ್ಲಿ ಅವಕಾಶ ಗಳಿರುತ್ತದೆ.
ಈ ನೇಮದಲ್ಲಿ ದೈವದ ನುಡಿಗೆ ಬಹಳ ಪ್ರಾಮುಖ್ಯತೆ ಇದ್ದು ಭಕ್ತರು ಭಯಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಅದೇ ದಿನ ಸಂಜೆಯಿಂದ ನೇಮ‌ ನಡೆಯುವ ಜಾಗದ ಬಳಿಯಲ್ಲಿ ಸಭಾ ಕಾರ್ಯಕ್ರಮ ಹಾಗೂ ಪುಟಾಣಿ ಮಕ್ಕಳಿಂದ ಮನೋರಂಜನೆ ಹಾಗೂ ನಾಟಕ ನಡೆಯಿತು.
ಬಂಟ್ವಾಳ ಶಾಸಕ ‌ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅಗಮಸಿ ಪ್ರಸಾದ ಸ್ವೀಕರಿಸಿದರು.

More from the blog

ಬೆಂಜನಪದವು ಪ್ರೌಢಶಾಲೆ : ಶಾಲಾ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆ..

ಬಂಟ್ವಾಳ: ಇಂದು ಸರಕಾರಿ ಪದವಿಪೂರ್ವ ಕಾಲೇಜು ಬೆಂಜನಪದವು ಪ್ರೌಢಶಾಲಾ ವಿಭಾಗದಲ್ಲಿ ಶಾಲಾ ಸರಕಾರ ಹಾಗೂ ವಿವಿಧ ಸಂಘಗಳ ಉದ್ಘಾಟನೆ ನಡೆಯಿತು. ಶಾಲಾ ಸಂಸತ್ತಿನ ಮುಖ್ಯ ಮಂತ್ರಿ ಸೇರಿದಂತೆ ವಿವಿಧ ಇಲಾಖೆಗಳ ಮಂತ್ರಿಗಳಿಗೆ ರಾಜ್ಯಪಾಲರು ಪ್ರಮಾಣ...

ಮುಂದುವರಿದ ಮಳೆ ಅಬ್ಬರ : ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ..

ಬಂಟ್ವಾಳ : ಶನಿವಾರವೂ ಮಳೆಗೆ ತಾಲೂಕಿನ ಅಲ್ಲಲ್ಲಿ ಹಾನಿಯಾಗಿದ್ದು, ಕಡೇಶ್ವಾಲ್ಯ ಗ್ರಾಮದ ನಡ್ಯೇಲು ಎಂಬಲ್ಲಿ ಕಾಲುಸಂಕ ಮುರಿದು ಬಿದ್ದಿರುತ್ತದೆ. ಇಲ್ಲಿನ ಗ್ರಾಮಪಂಚಾಯತ್ ಪೂರ್ವದಲ್ಲಿಯೇ ಎಚ್ಚರಿಕೆ ಫಲಕ ಅಳವಡಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿರುವುದಿಲ್ಲ. ತೋಡಿನಲ್ಲಿ...

ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನಾ ಕಾರ್ಯಕ್ರಮ..

ಮಂಗಳೂರು: ಕೊಟ್ಟಾರ ಚೌಕಿ ಹೆದ್ದಾರಿ 66ರ ಬಳಿ ಮಂಗಳೂರು ಮಹಾನಗರ ಪಾಲಿಕೆಯ 16ನೇ ಬಂಗ್ರಕೂಳೂರು ವಾರ್ಡ್ನಲ್ಲಿ ಮಂಗಳೂರು ನಗರ ಅಭಿವೃದ್ಧಿ ಪ್ರಾಧಿಕಾರ ಇದರ ವತಿಯಿಂದ ನಿರ್ಮಾಣಗೊಂಡಿರುವ ನೂತನ ಸಿಂಧೂರ ವಿಜಯ ಉದ್ಯಾನವನದ ಉದ್ಘಾಟನೆ...

Puttur : ಯುವತಿಗೆ ವಂಚಿಸಿದ ಪ್ರಕರಣ – ತಲೆಮರೆಸಿಕೊಂಡಿದ್ದ ಆರೋಪಿ ಪೊಲೀಸ್‌ ವಶಕ್ಕೆ

ಪುತ್ತೂರು: ಯುವತಿಯೊಂದಿಗೆ ಮದುವೆಯಾಗುವುದಾಗಿ ದೈಹಿಕ ಸಂಪರ್ಕ  ನಡೆಸಿ ಗರ್ಭವತಿಯನ್ನಾಗಿಸಿ ಬಳಿಕ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡಿರುವ ಪ್ರಕರಣದ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ. ತನ್ನ ವಿರುದ್ಧ ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿ ಶ್ರೀಕೃಷ್ಣ...