Saturday, January 31, 2026

ಮಿತ್ತ ಪೆರಾಜೆ: ವರ್ಷಾವಧಿ ಗುಡ್ಡೆಚಾಮುಂಡಿ ವಲಸರಿ ಜಾತ್ರೆ

ಬಂಟ್ವಾಳ: ಮಿತ್ತ ಪೆರಾಜೆ ಶ್ರೀ ಗುಡ್ಡೆಚಾಮುಂಡಿ ದೈವದ ವರ್ಷಾವಧಿ ವಲಸರಿ ಜಾತ್ರೆ ಬುಧವಾರ ರಾತ್ರಿ ನಡೆಯಿತು. ಪೆರಾಜೆ ಗ್ರಾಮದಲ್ಲಿ ನಡೆಯುವ ಕೊನೆಯ ಜಾತ್ರೆಯಾದ ಮಿತ್ತಪೆರಾಜೆ ವಲಸರಿ ಜಾತ್ರೆಯಲ್ಲಿ ಊರಿನ ಹಾಗೂ ಪರ ಊರ ಭಕ್ತರ ಪಾಲ್ಗೊಂಡು ದೈವದ ಗಂಧ ಪ್ರಸಾದ ಸ್ವೀಕರಿಸಿದರು.
ಎ.18 ರಂದು ಪೆರಾಜೆ ಗುತ್ತುವಿನ ಮನೆಯಲ್ಲಿ ಪೂರ್ವ ಕಟ್ಟುಕಟ್ಟಲೆಗಳಂತೆ ಧಾರ್ಮಿಕ ವಿಧಿವಿಧಾನಗಳ ಬಳಿಕ ಗೊನೆ ಕಡಿದು ಎ.24 ರಂದು ರಾತ್ರಿ ಭಂಡಾರಿ ಬಂದು ಬಳಿಕ ದೈವದ ವಲಸರಿ ನೇಮ ನಡೆಯಿತು.

                   

ಕಂಬಳದ ಗದ್ದೆಗೆ ದೈವ ಇಳಿದು ಗದ್ದೆಯ ಕೊನೆಯಲ್ಲಿರುವ ಕಟ್ಟೆಯ ಸುತ್ತ ಮೂರು ಸುತ್ತು ಬಂದು ಬಳಿಕ ಗದ್ದೆಯಿಂದ ವಲಸರಿ ಮೇಲೆ ಬರುವ ವೇಳೆ ಭಕ್ತರು ಹಾಕಿದ ಧರಿಗುಂಟದ ಬಳಿ ನಿಂತು ದೈವ ಭಕ್ತರಿಗೆ ಅಭಯ ನೀಡುತ್ತದೆ, ಆ ಸಮಯದಲ್ಲಿ ದೈವಕ್ಕೆ ಧರಿಗುಂಟ ಹಾಕಿದ ಭಕ್ತರು ಸೀಯಾಳ ಹಿಡಿಯುತ್ತಾರೆ.‌

ಕೊನೆಯ ನೇಮ‌ ಇದಾಗಿರುವುದರಿಂದ ಗ್ರಾಮದಲ್ಲಿನ ಭಕ್ತರ ಸಮಸ್ಯೆ ಗಳಿಗೆ ಇತ್ಯರ್ಥ ಮಾಡಲು ಇಲ್ಲಿ ಅವಕಾಶ ಗಳಿರುತ್ತದೆ.
ಈ ನೇಮದಲ್ಲಿ ದೈವದ ನುಡಿಗೆ ಬಹಳ ಪ್ರಾಮುಖ್ಯತೆ ಇದ್ದು ಭಕ್ತರು ಭಯಭಕ್ತಿಯಿಂದ ಪಾಲ್ಗೊಳ್ಳುತ್ತಾರೆ. ಅದೇ ದಿನ ಸಂಜೆಯಿಂದ ನೇಮ‌ ನಡೆಯುವ ಜಾಗದ ಬಳಿಯಲ್ಲಿ ಸಭಾ ಕಾರ್ಯಕ್ರಮ ಹಾಗೂ ಪುಟಾಣಿ ಮಕ್ಕಳಿಂದ ಮನೋರಂಜನೆ ಹಾಗೂ ನಾಟಕ ನಡೆಯಿತು.
ಬಂಟ್ವಾಳ ಶಾಸಕ ‌ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅಗಮಸಿ ಪ್ರಸಾದ ಸ್ವೀಕರಿಸಿದರು.

More from the blog

ಫೆ.3 ಮತ್ತು 17ರಂದು ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಸೇವೆ ಇಲ್ಲ 

ಬಂಟ್ವಾಳ : ತಾಲೂಕಿನ ಸಜೀಪಮೂಡ ಗ್ರಾಮದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆಬ್ರವರಿ ತಿಂಗಳಿನಲ್ಲಿ ತಾ03 ಮತ್ತು17ರಂದು ಅಗೆಲು ಸೇವೆ ಇರುವುದಿಲ್ಲ ಉಳಿದ ಆದಿತ್ಯವಾರ ಮಂಗಳವಾರ ಶುಕ್ರವಾರ ಅಗೇಲು ಸೇವೆ...

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ : ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ 

ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಬಿ.ಸಿ.ರೋಡ್ ಸರಕಾರಿ ನೌಕರರ ಭವನದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಿ .ಲೋಕನಾಥ ಶೆಟ್ಟಿ ಇವರ...

ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ..

ಬಂಟ್ವಾಳ : ಬಿ ವಿ ಕಾರಂತ ರಂಗ ಭೂಮಿಕಾ ಟ್ರಸ್ಟ್ ವತಿಯಿಂದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ಮಂಚಿ ಕುಕ್ಕಾಜೆಯ ಸಿದ್ಧಿ ವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ಎರಡು ದಿವಸಗಳ ಈ...

ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ತೆರವಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಾರಿಗೆ ಬಸ್, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ...