ಬಂಟ್ವಾಳ: ಚೀಟಿ ಬರೆದಿಟ್ಟು ಯುವತಿಯೋರ್ವಳು ಸಂಬಂಧಿ ಕರ ಮನೆಯಿಂದ ನಾಪತ್ತೆಯಾದ ಘಟನೆ ಪುಂಜಾಲಕಟ್ಟೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.
ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ದಡ್ಡು ನಿವಾಸಿ ಉದಯಕುಮಾರ್ ಅವರ ಪುತ್ರಿ ದಿವ್ಯ ಶ್ರೀ (19) ಎಂಬ ಯುವತಿ ಕಾಣೆಯಾಗಿದ್ದಾಳೆ.
ಪಿ.ಯು.ಸಿ. ವಿದ್ಯಾಭ್ಯಾಸ ಮುಗಿಸಿದ ಬಳಿಕ ಶಿಕ್ಷಣ ಮುಂದುವರಿಸದ ದಿವ್ಯ ಕಳೆದ ಎರಡು ತಿಂಗಳಿನಿಂದ ಪುಂಜಾಲಕಟ್ಟೆಯ ಮೂಡುಪಡುಕೋಡಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಳು.
ಎಂದಿನಂತೆ ಮನೆಯಲ್ಲಿದ್ದ ದಿವ್ಯ ಇಂದು ಬೆಳಿಗ್ಗೆ ಯಿಂದ ಮನೆಯಲ್ಲಿ ಇರದೆ ಕಾಣೆಯಾಗಿದ್ದಾಳೆ.
ಇವಳು ಮನೆ ಬಿಟ್ಟು ಹೋಗುವ ವೇಳೆ ಚೀಟಿಯೊಂದನ್ನು ಬರೆದಿಟ್ಟಿದ್ದು ಮನೆಯವರಿಗೆ ಸಿಕ್ಕಿದೆ. ಅದರಲ್ಲಿ ನಾನು ಮನೆ ಬಿಟ್ಟು ಹೋಗುವುದಾಗಿಯೂ ನನ್ನ ನ್ನು ಹುಡುಕುವ ಪ್ರಯತ್ನ ಬೇಡ , ನಾನು ಪ್ರೀತಿಯನ್ನು ಹುಡುಕಿಕೊಂಡು ಹೋಗುತ್ತಿದ್ದೇನೆ ಎಂದು ಬರೆಯಲಾಗಿದೆ ಎಂದು ಹೇಳಲಾಗಿದೆ.
ಪುಂಜಾಲಕಟ್ಟೆ ಠಾಣೆಯಲ್ಲಿ ದಿವ್ಯಳಾ ತಾಯಿ ಅನಿತಾ ನೀಡಿದ ದೂತಿನಂತೆ ಎಸ್.ಐ.ಸೌಮ್ಯ ಅವರು ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

