ಬಂಟ್ವಾಳ: ಕೆಲಸಕ್ಕೆ ತೆರಳಿದವರು ಮನೆಗೆ ಹಿಂತಿರುಗಿ ಬಾರದೆ ನಾಪತ್ತೆಯಾದ ಘಟನೆ ಜ. ೨೩ರಂದು ಸಜೀಪನಡು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮೇಲ್ಮನೆ ನಿವಾಸಿ ಮೊಹಮ್ಮದ್ ಕುಂಞ(೫೦) ಅವರು ನಾಪತ್ತೆಯಾದವರು.
ನಾಪತ್ತೆಯಾದವರ ಪುತ್ರ ಮೊಹಮ್ಮದ್ ಹಫೀಜ್ ಅವರು ಪೊಲೀಸರಿಗೆ ದೂರು ನೀಡಿದ್ದು, ಮೊಹಮ್ಮದ್ ಕುಂಞÂ ಅವರು ಕಳೆದ ಒಂದು ತಿಂಗಳಿನಿ೦ದ ಅನಾರೋಗ್ಯದಿಂದ ಮಂಗಳೂರಿನ ವಿನಯ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದು, ಜ. ೨೩ರಂದು ಬೆಳಗ್ಗೆ ೬ಕ್ಕೆ ಮನೆಯಿಂದ ಕೆಲಸಕ್ಕೆ ಹೋದವರು ಹಿಂತಿರುಗಿ ಬಂದಿಲ್ಲ ಎಂದು ತಿಳಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
