ಮಡಂತ್ಯಾರು: ಮಡಂತ್ಯಾರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸೆ.6ರಂದು ಸಂಘದ ಕಚೇರಿಯಲ್ಲಿ ಸಂಘದ ಅಧ್ಯಕ್ಷ ರವಿರಾಜ್ ಶೆಟ್ಟಿ ಇವರ ಅಧ್ಯಕ್ಷತೆ ಯಲ್ಲಿ ಜರಗಿತು.



ಸಂಘದ ಉಪಾಧ್ಯಕ್ಷ ಅಶೋಕ್ ಕೆ. ಎಸ್. , ನಿರ್ದೇಶಕರಾದ ಮಂಜಯ ಶೆಟ್ಟಿ, ರಾಮ ಕೃಷ್ಣ ಹೆಬ್ಬಾರ್,ಸದಾಶಿವ ಶೆಟ್ಟಿ, ವೆಂಕ್ಕಪ್ಪ ಪೂಜಾರಿ, ಕೇಶವ ಮೂಲ್ಯ, ಸುನಿಂದ್ರ ಪೂಜಾರಿ, ಪ್ರವೀಣ್ ಚಂದ್ರ ಶೆಟ್ಟಿ, ಅಗ್ನೆಸ್ ಎಂ ಫ್ರಾಂಕ್, ಸವಿತಾ ಯು ಬಂಗೇರ, ಗಿರಿಯಪ್ಪ ನಾಯ್ಕ, ಸವಿತಾ ಸುರೇಶ್ ದ.ಕ.ಜಿಲ್ಲಾ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಡಾ. ಚಂದ್ರ ಶೇಖರ್ ಭಟ್ ರಾಸುಗಳ ಬಗ್ಗೆ ಮಾಹಿತಿ ನೀಡಿದರು. ದನ ಗಳಿಗೆ ಇನ್ಶುರೆನ್ಸ್ ಮಾಡಿಸಿಕೊಳ್ಳಲು ಕರೆ ನೀಡಿದರು. ಇದರಿಂದ ಯಾವುದೇ ಖಾಯಿಲೆಗೆ ತುತ್ತಾಗಿ ದನ ಸತ್ತರೆ ಅದಕ್ಕೆ ಇನ್ಶುರೆನ್ಸ್ ದೊಯೆಯುತ್ತದೆ.
ವೇದಿಕೆಯಲ್ವಿ ವಿಸ್ತರಣಾಧಿಕಾರಿ ರಾಜೇಶ್ ಕಾಮತ್, ಗ್ರಾಮ ಪಂಚಾಯತ್ ಸದಸ್ಯರು ಗಳಾದ ಶೈಲೇಶ್ ಕುಮಾರ್, ಕಿಶೋರ್ ಶೆಟ್ಟಿ, ಹರೀಶ್ ಶೆಟ್ಟಿ ಪದೆಂಜಿಲ, ಉಮೇಶ್ ಸುವರ್ಣ, ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕಾಂತಪ್ಪ ಗೌಡ ಹಟ್ಟತೋಡಿ , ಮಾಜಿ ಉಪಾಧ್ಯಕ್ಷ ಸಂಜೀವ ಶೆಟ್ಟಿ ಉರೆಸಾಗು , ಗ್ರಾಮ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಜಿ.ಬಾಲಕೃಷ್ಣ ವರದಿ ಮಂಡಿಸಿದರು. ಅಶೋಕ್ ಗುಂಡಿಯಲ್ಕೆ ಕಾರ್ಯಕ್ರಮ ನಿರೂಪಿಸಿದರು. ಸಂಘದಲ್ಲಿ 2021-2 2ಸಾಲಿನಲ್ಲಿ ಒಟ್ಟು 1207848ಲಕ್ಷ ಲಾಭ ಗಳಿಸಿ ಸದಸ್ಯರಿಗೆ ಷೇರು ಡಿವಿಡೆಂಟ್ 25% ಬೋನಸ್ 65% ಘೋಷಿಸಲಾಯಿತು.












