ಬಂಟ್ವಾಳ : ಭಾರತೀಯ ಜನತಾ ಪಕ್ಷದ ಸಂಗಬೆಟ್ಟು ಶಕ್ತಿಕೇಂದ್ರದ ಪಂಜಿಕಲ್ಲು ಪಂಚಾಯತ್ ವ್ಯಾಪ್ತಿಯ ಮೂರು ಗ್ರಾಮಗಳ 5 ಬೂತ್ ಸಮಿತಿಗಳ ಗ್ರಾ.ಪಂ. ಚುನಾವಣಾ ಪೂರ್ವ ಸಿದ್ಧತೆಯ ಬಗ್ಗೆ ಪ್ರಮುಖರು ಹಾಗೂ ಹಿರಿಯ ಕಾರ್ಯಕರ್ತರ ಸಭೆಯು ನಿನ್ನೆ ಪಂಜಿಕಲ್ಲು ಅಮೈ ಬಳಿ ನಡೆಯಿತು.


ಬಿಜೆಪಿ ಪ್ರಮುಖ ನಾರಾಯಣ ಭಂಡಾರಿ ಮಾತನಾಡಿ, ದೀನದಯಾಳ್ ಉಪಾಧ್ಯಾಯರು ರಾಷ್ಟ್ರೀಯ ಧ್ಯೇಯ ಧೋರಣೆಗಳ ಆಧಾರದ ಮೇಲೆ ಭಾರತೀಯ ಜನಸಂಘ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಅವರು ರೂಪಿಸಿದ ಸಿದ್ಧಾಂತದ ಮೇಲೆ ಇಂದು ಭಾರತೀಯ ಜನತಾ ಪಾರ್ಟಿಯು ಕಾರ್ಯನಿರ್ವಹಿಸುವ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸುವ ಅವರ ಕನಸನ್ನು ಇಂದು ಸಾಕಾರಗೊಳಿಸುತ್ತಿದೆ ಎಂದರು.

ಪಂಜಿಕಲ್ಲು ಪಂಚಾಯತ್ ವ್ಯಾಪ್ತಿಯ ಚುನಾವಣಾ ಪ್ರಭಾರಿ ರಮೇಶ್ ಕುಡುಮೇರ್ ರವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಭಾಜಪ ಜಿಲ್ಲಾ ರೈತ ಮೋರ್ಚಾದ ಕಾರ್ಯದರ್ಶಿ ಸಂಜೀವ ಪೂಜಾರಿ ಪಿಲಿಂಗಾಲ್, ಬಂಟ್ವಾಳ ಬಿಜೆಪಿ ಕ್ಷೇತ್ರದ ಕೋಶಾಧಿಕಾರಿ ಪ್ರಕಾಶ್ ಅಂಚನ್, ಪಂಜಿಕಲ್ಲು ಪಂಚಾಯತ್ ಚುನಾವಣಾ ಸಹ ಪ್ರಭಾರಿ ಚಿದಾನಂದ ಕುಜ್ಲುಬೆಟ್ಟು, ನಿಕಟಪೂರ್ವ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ಗೌಡ, ಹಿರಿಯ ಕಾರ್ಯಕರ್ತ, ನಿವೃತ್ತ ಉಪನ್ಯಾಸಕ ನಾರಾಯಣ ಭಂಡಾರಿ, ಬೂತ್ ಸಮಿತಿಯ ಅಧ್ಯಕ್ಷರುಗಳಾದ ಪ್ರವೀಣ್ ಅಮೈ, ಆನಂದ ಪೂಜಾರಿ ಕೇಲ್ದೋಡಿ, ಶಶಿಧರ ಕೈಲಾರು, ಅಶ್ವಿನ್ ದಡ್ಡಲಕಾಡು, ಅಶೋಕ್ ಕೋಡಿಬೆಟ್ಟು, ಕರುಣೇಂದ್ರ ಪೂಜಾರಿ ಹಾಗೂ ಪಂಜಿಕಲ್ಲು ಪಂಚಾಯತ್ ಮಾಜಿ ಅಧ್ಯಕ್ಷೆ ಹರಿಣಾಕ್ಷಿ ಹಾಗೂ ಕೆ.ಎನ್.ಶೇಖರ್, ಕ್ಷೇತ್ರ ಹಿಂದುಳಿದ ವರ್ಗದ ಮೋರ್ಚಾದ ಕಾರ್ಯದರ್ಶಿ ಸಂತೋಷ್, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯ ಜೋಕಿಂ ಮಿನೇಜಸ್ ಹಾಗೂ ಪಂಚಾಯತ್ನ ಮಾಜಿ ಸದಸ್ಯರುಗಳು, ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಡೆಯಿತು.
ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ಪ್ರಾರಂಭವಾದ ಸಭೆಯಲ್ಲಿ ಇತ್ತೀಚೆಗೆ ಅಗಲಿದ ಪಕ್ಷದ ಹಿರಿಯ ನಾಯಕರ ಸದ್ಗತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಸಂಜೀವ ಪೂಜಾರಿ ಪಿಲಿಂಗಾಲ್, ಪ್ರಕಾಶ್ ಅಂಚನ್, ನಾರಾಯಣ ಭಂಡಾರಿ, ಚಿದಾನಂದ ಕುಜ್ಲುಬೆಟ್ಟು ಮಾತನಾಡಿದರು.
ರಮೇಶ್ ಕುಡುಮೇರ್ ರವರು ಪಂಚಾಯತ್ ಚುನಾವಣೆಯ ಪೂರ್ವಭಾವಿಯ ಬಗ್ಗೆ ಮಾಹಿತಿವಿತ್ತು, ಮುಂದಿನ ರವಿವಾರ ದೊಳಗೆ ಎಲ್ಲಾ ಬೂತ್ ಸಮಿತಿಯ ಸಭೆ ಕರೆಯಲು ಕಾರ್ಯಕರ್ತರೊಂದಿಗೆ ಚರ್ಚಿಸಿ ದಿನ ನಿಗದಿಪಡಿಸಿದರು.












