Thursday, February 13, 2025

ಸಿದ್ಧಕಟ್ಟೆಯ ಮದುವೆ ಮಂಟಪವೊಂದರಲ್ಲಿ ವಿಶೇಷ ರೀತಿಯಲ್ಲಿ ಮತದಾನ ಜಾಗೃತಿ

ಬಂಟ್ವಾಳ: ನಮ್ಮನ್ನು ನೀವು ಹರಸಿ ಹಾರೈಸುವ ರೀತಿಯಲ್ಲಿ ನಾಳೆ ನಡೆಯುವ ಮತದಾನ ದೇಶಕ್ಕಾಗಿ ಮಾಡಬೇಕು ಎಂಬ ಬಿತ್ತಿಪತ್ರ ಹಾಗೂ ನೃತ್ಯ ದ ಮೂಲಕ  ಗಮನ ಸೆಳೆದದ್ದು ಸಿದ್ದಕಟ್ಟೆಯ ಮದುವೆ ಮಂಟಪ.

ಮತದಾನ ಕಡ್ಡಾಯವಾಗಿ ಮಾಡಿ ಎಂಬ ಘೋಷ ವಾಕ್ಯದ ನೃತ್ಯ ವಿಶೇಷ ರೀತಿಯಲ್ಲಿ ಕಂಡು ಬಂದದ್ದು ಮದುವೆ ಸಮಾರಂಭವೊಂದರಲ್ಲಿ.
ಇವತ್ತು ಪೂಜೆ ಹೋಮ ಕನ್ಯಾದಾನ ನಡೆಯಿತು ನಾಳೆ ಮತದಾನ ಮಾಡಿ ಎಂದು ಬರೆಯಲಾಗಿತ್ತು..
ಬಂಟ್ವಾಳ ತಾಲೂಕಿನ ಹರ್ಷಲಿ ಸಭಾ ಭವನದಲ್ಲಿ ಇಂದು ನಡೆದ ಸಂತೋಷ್ ಬಂಗೇರ, ಪ್ರಮೀಳಾ ಮದುವೆ ಸಮಾರಂಭದಲ್ಲಿ ಮದುಮಗ ಕೈಯಲ್ಲಿ ಕಡ್ಡಾಯ ಮತದಾನ ಮಾಡಿ ಎಂಬ ಘೋಷಣೆಯ ಬಿತ್ತಿಪತ್ರವನ್ನು ಹಿಡಿದು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ.
ಜೊತೆಗೆ ಮದುಮಕ್ಕಳು ಆರತಕ್ಷತೆಗೆ ಮಂಟಪಕ್ಕೆ ಬರುವ ಮುನ್ನ ಮದುಮಗನ ಸ್ನೇಹಿತರು ಸೇರಿ ನೃತ್ಯ ಕೂಡ ಮಾಡಿದ್ದರು. ಬಾರತದ ಬಾವುಟ ಹಿಡಿದು ವಂದೇ ಮಾತರಂ ಗೀತೆಯ ಮೂಲಕ ಮತದಾನ ಮಾಡುವ ಜಾಗೃತಿ ಮೂಡಿಸಿದರು. ರಾಯಿ ಗ್ರಾಮದ ಶಾಂತಿಪಲ್ಕೆಯ ಯುವಕ, ಪುತ್ತೂರಿನ ಯುವತಿಗೆ ಇಂದು ಮದುವೆ ಸಮಾರಂಭ ನಡೆದಿತ್ತು.

More from the blog

ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರಕ್ಕೆ ಶಾಸಕ ರಾಜೇಶ್ ನಾಯ್ಕ್ ಬೆಂಬಲ

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರು ಗ್ರಾಮ ಆಡಳಿತ ಅಧಿಕಾರಿಗಳು ಸತತ ಮೂರನೇ ದಿನ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. ಬಂಟ್ವಾಳ ತಾಲೂಕು ಆಡಳಿತ ಸೌಧದ ಮುಂಭಾಗ ಮುಷ್ಕರದ ಸ್ಥಳಕ್ಕೆ ಭೇಟಿ ನೀಡಿದ...

ಫೆ.15 ರಂದು ಕಮಲಾಶ್ರಯ ಮನೆಯ ಹಸ್ತಾಂತರ ಹಾಗೂ ಗೃಹಪ್ರವೇಶ

ಬಂಟ್ವಾಳ: ಬಿಜೆಪಿ ಮಹಾಶಕ್ತಿ ಕೇಂದ್ರ ಮಾಣಿ ಮತ್ತು ಬಿಜೆಪಿ ಶಕ್ತಿ ಕೇಂದ್ರ ಅನಂತಾಡಿ ಇದರ ಸಹಕಾರದಿಂದ ಅನಂತಾಡಿ ಗ್ರಾಮದ ಬಾಬನಕಟ್ಟೆ ಎಂಬಲ್ಲಿ ಬಲ್ಲು ಕೊರಗ ಇವರ ಕುಟುಂಬಕ್ಕೆ ನಿರ್ಮಿಸಲಾದ ನೂತನ ಮನೆಯನ್ನು ಫೆ.15...

ಬೇಲಿ ವಿವಾದ : ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಅಳವಡಿಸಿ ಬೇಲಿ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ತಾ.ಪಂ.ಗೆ ಹಠಾತ್...

ವಿಟ್ಲ ಪಿಎಂ ಶ್ರೀ ಸರಕಾರಿ ಪ್ರೌಢ ಶಾಲೆಯಲ್ಲಿ ಮೆಟ್ರಿಕ್ ಮೇಳ

ವಿಟ್ಲ: ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢ ಶಾಲೆ (ಆರ್ ಎಂ ಎಸ್ ಎಂ)ವಿಟ್ಲ ಇದರ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಬುಧವಾರ ಮೆಟ್ರಿಕ್ ಮೇಳ ಕಾರ್ಯಕ್ರಮ ನಡೆಯಿತು. ಮೆಟ್ರಿಕ್ ಮೇಳವನ್ನು ವಿಟ್ಲ ಪಟ್ಟಣ...