ಬಂಟ್ವಾಳ: ಪರಿಶಿಷ್ಟ ಜಾತಿ ಕಾಲೋನಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದ ಗ್ರಾ.ಪಂ.ನ ಕೋಪದಿಂದ ಈ ಬಾರಿಯ ಲೋಕಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡುವ ಎಚ್ಚರಿಕೆಯ ಬ್ಯಾನರ್ ನ್ನು ತಾಲೂಕಿನ ಬಾಯಿಲದಲ್ಲಿ ಹಾಕಲಾಗಿದೆ.

ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮಪಂಚಾಯತ್ ವ್ಯಾಪ್ತಿಯ ಬಾಯಿಲ ಪರಿಶಿಷ್ಟ ಜಾತಿ ಕಾಲೋನಿಯ ಸುಮಾರು ಐದು ಮನೆಗಳಿಗೆ ಕಳೆದ ಮೂರು ವರ್ಷಗಳಿಂದ ಕುಡಿಯಲು ಶುದ್ಧ ನೀರಿಲ್ಲ, ರಾತ್ರಿ ಹೊತ್ತಿನಲ್ಲಿ ಹೊರಗೆ ಹೋಗಲು ದಾರಿದೀಪದ ವ್ಯವಸ್ಥೆ ಇಲ್ಲ, ರಸ್ತೆಯಂತೂ ಇಲ್ಲವೆ ಇಲ್ಲ, ಇದನ್ನು ಕೇಳುವವರು ಯಾರೂ ಇಲ್ಲ .
ಹಾಗಾಗಿ ಈ ಬಾರಿಯ ಮತದಾನ ಬಹಿಷ್ಕಾರದ ನಿರ್ಧಾರ ಮಾಡಿದ್ದೇವೆ ಎಂದು ಬಾಯಿಲ ನಿವಾಸಿ ಶರತ್ ಅವರು ಮಾಧ್ಯಮರಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಈ ಬಗ್ಗೆ ಗ್ರಾಮ ಸಭೆ, ಗ್ರಾಮ ಪಂಚಾಯತ್ , ಪಿಡಿಒ, ಗ್ರಾ.ಪಂ.ಅದ್ಯಕ್ಷ ಹಾಗೂ ಸದಸ್ಯರು ಗಳಲ್ಲಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾದಿಕಾರಿಯವರಲ್ಲಿ ಲಿಖಿತ ದೂರು ನೀಡುತ್ತಲೆ ಬಂದರೂ ಯಾವುದೇ ಪ್ರಯೋಜನ ವಾಗಿಲ್ಲ. ಕೊನೆಗೆ ಬೆಸೆತ್ತ ಇಲ್ಲಿನ ನಿವಾಸಿಗಳು ಈ ನಿರ್ಧಾರ ಕ್ಕೆ ಬಂದಿದ್ದೇವೆ ಎಂದು ಅವರು ಹೇಳುತ್ತಿದ್ದಾರೆ.