ವಿಟ್ಲ ಪಡ್ನೂರು ಗ್ರಾಮದ ಕಡಂಬುವಿನಲ್ಲಿ ಪುನರ್ ನಿರ್ಮಿಸಲ್ಪಟ್ಟ ಕಡಂಬು ಜುಮ್ಮ ಮಸೀದಿಯ ಉದ್ಘಾಟನೆಯನ್ನು ಕಾಸರಗೋಡು ಸಂಯುಕ್ತ ಖಾಝಿ ಶೈಖುನಾ ಆಲಿಕುಟ್ಟಿ ನೆರವೇರಿಸಿದರು. ಬಳಿಕ ನಡೆದ ಧಾರ್ಮಿಕ ಕಾರ್ಯಕ್ರಮವನ್ನು ಶೈಖುನಾ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಸಂಯುಕ್ತ ಖಾಝಿ ಉಡುಪಿ ಜಿಲ್ಲೆ ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ಚೆಂಗಳ ಅಬ್ದುಲ್ಲಾ ಫೈಝಿ ಮುಖ್ಯ ಪ್ರಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಅಬ್ದುಲ್ ಖಾದರ್ ಸಖಾಫಿ ಕಡಂಬು, ಕುಕ್ಕಿಲ ಅಬ್ದುಲ್ಖಾದರ್ ದಾರಿಮಿ ಮತ್ತು ಅಬ್ದುಲ್ ರಶೀದ್ ಸಖಾಫಿ ಇವರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ ಅವರನ್ನು ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷ ಜನಾಬ್ ಹಾಜಿ ಅಬ್ದುಲ್ಖಾದರ್ ಪೀಲಿವಲಚ್ಚಿಲ್ ಅವರು ಸನ್ಮಾನಿಸಿದರು.
ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಬಂಟ್ವಾಳ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಾಧವ ಮಾವೆ, ಜೆಡಿಎಸ್ ಜಿಲ್ಲಾಧ್ಯಕ್ಷ ಹಾಜಿ ಮಹಮ್ಮದ್ ಕುಂಞಿ, ಪಿಎಫ್ಐ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ ಷರೀಫ್, ಎಸ್ಡಿಪಿಐ ರಾಷ್ಟ್ರೀ ಪ್ರಧಾನ ಕಾರ್ಯದರ್ಶಿ ಅಲ್ಫಾನ್ಸೊ ಫ್ರಾಂಕೊ ಮೊದಲಾದವರು ಭಾಗವಹಿಸಿದ್ದರು.
ಬಿ.ಕೆ ಅಬ್ದುಲ್ಖಾದರ್ ಅಲ್ಖಾಸಿಮಿ ಬಂಬ್ರಾಣ ಸ್ವಾಗತಿಸಿದರು. ಕಡಂಬು ಜುಮ್ಮಾ ಮಸೀದಿಯ ಖತೀಬ ಅಬ್ದುಲ್ರಹಿಮಾನ್ ಸಹದಿ ಪ್ರಸ್ತಾವಿಸಿದರು. ಯುಸೂಫ್ ಮುಸ್ಲಿಯಾರ್ ಎ ಬಿ ಕಡಂಬು ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

