ಬಂಟ್ವಾಳ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಪುಣ್ಯತಿಥಿಯ ಅಂಗವಾಗಿ ಹುತಾತ್ಮರ ದಿನಾಚರಣೆಯನ್ನು ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಜ.30ರ ಬುಧವಾರ ಬೆಳಿಗ್ಗೆ 111 ಗಂಟೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್ ರವರ ನೇತೃತ್ವದಲ್ಲಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಪಂಚಾಯತ್ ಉಪಾಧ್ಯಕ್ಷರು ಅಬ್ಬಾಸ್ ಆಲಿ, ಪುರಸಭೆ ಸದಸ್ಯರು ಜನಾರ್ಧನ ಚೆಂಡ್ತಿಮಾರ್, ಮಾಜಿ ಬಂಟ್ವಾಳ ಬ್ಲಾಕ್ ಅಧ್ಯಕ್ಷರು ಮಾಯಿಲಪ್ಪ ಸಾಲಿಯಾನ್, ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷರು ವಿಶ್ವನಾಥ ಗೌಡ ಮಣ ಪ್ರಮುಖರಾದ ವಲಾರಿ, ಚಂದ್ರಶೇಖರ ಆಚಾರ್ಯ, ಅಮ್ಮು, ಬೋಜ ಪೂಜಾರಿ ಇನ್ನಿತರರು ಹಾಜಾರಿದ್ದರು.
