ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ವತಿಯಿಂದ ತೌಹಿದ್ ಆಂಗ್ಲ ಮಾಧ್ಯಮ ಶಾಲೆ ಬಂಟ್ವಾಳದಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಪರೀಕ್ಷೆ ತಯಾರಿ ಕಾರ್ಯಾಗಾರವನ್ನು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಜೇಸೀ ವಲಯ ತರಬೇತುದಾರ ಉಮೇಶ್ ನಿರ್ಮಲ್ ಮತ್ತು ಸಂಪನ್ಮೂಲ ವ್ಯಕ್ತಿ ಗೋಪಾಲ ಅಂಚನ್ ನಡೆಸಿಕೊಟ್ಟರು.
ನೂತನವಾಗಿ ಆರಂಭವಾದ ತೌಹಿದ್ ಆಂಗ್ಲ ಮಾಧ್ಯಮ ಶಾಲೆಯ ಇಂಟರಾಕ್ಟ್ ಕ್ಲಬ್ ಗೆ ಸನ್ನದು ಪ್ರಧಾನ ಮಾಡಲಾಯಿತು. ಸಮಾರಂಭದಲ್ಲಿ ಶಾಲಾ ಸಂಚಾಲಕರಾದ ಮಹಮ್ಮದ್ ಸಗೀರ್, ಅಧ್ಯಕ್ಷರಾದ ಬಿ.ಎ ಸುಲೇಮಾನ್, ಕಾರ್ಯದರ್ಶಿ ಬಿ ಎ ಮಹಮ್ಮದ್, ಶಾಲಾ ಮುಖ್ಯೋಪಾಧ್ಯಾಯಿನಿ ಮೆಟಿಲ್ಡಾ ಡಿಕೋಸ್ತ, ಇಂಟರಾಕ್ಟ್ ಸಂಯೋಜಕಿ ರಚನ
ಉಪಸ್ತಿತರಿದ್ದರು. ರೋಟರಿ ಕ್ಲಬ್ ಬಂಟ್ವಾಳ ಟೌನ್ ಇದರ ಅಧ್ಯಕ್ಷರಾದ ಉಮೇಶ್ ನಿರ್ಮಲ್, ನಿರ್ದೇಶಕರಾದ ಮಹಮ್ಮದ್ ಹನೀಫ್, ಮಹಮ್ಮದ್ ಮುನೀರ್ , ಶನ್ ಪತ್ ಷರೀಪ್ ಕಾರ್ಯಕ್ರಮ ಸಂಯೋಜಿಸಿದರು. ವಿದ್ಯಾರ್ಥಿಗಳಾದ ರಶ್ಮಿ ಸ್ವಾಗತಿಸಿ ಜಶೀಲ ಪರ್ವಿನ್ ವಂದನಾರ್ಪಣೆ ಮಾಡಿದರು.

