ಬಂಟ್ವಾಳ: ನವೋದಯ ಯುವಕ ಸಂಘ (ರಿ) ಮೈರಾನ್ ಪಾದೆ, ಕಾಮಾಜೆ ಬಂಟ್ವಾಳ ಇದರ 29ನೇ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ದಿನಾಂಕ ಫೆ.2ರ ಶನಿವಾರ ನವೋದಯ ರಂಗಮಂದಿರ, ಮೈರಾನ್ ಪಾದೆ, ಕಾಮಾಜೆಯಲ್ಲಿ ನಡೆಯಲಿದೆ. ಫೆ.2ರಂದು ಶನಿವಾರ ಬೆಳಿಗ್ಗೆ 6 ಗಂಟೆಗೆ ಗಣಹೋಮ, 8 ಗಂಟೆಗೆ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, 12.30ಕ್ಕೆ ಮಹಾಪೂಜೆ ಪ್ರಸಾದ ವಿತರಣೆ ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ ಸಂಜೆ 5 ಗಂಟೆಗೆ ಅಂಗನವಾಡಿ ಮಕ್ಕಳಿಂದ ವಿವಿಧ ವಿನೋದಾವಳಿಗಳು. ನಂತರ ಸಂಘದ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯಲಿದೆ. ಸಂಜೆ 6.30 ಕ್ಕೆ ಸಭಾ ಕಾರ್ಯಕ್ರಮ, ರಾತ್ರಿ 10.30ಕ್ಕೆ ಶಾರದಾ ಕಲಾವಿದರು ಮಂಜೇಶ್ವರ(ರಿ.) ಇದರ ಸದಸ್ಯರಿಂದ ಗಡಿನಾಡ ಕಲಾನಿಧಿ ಕೃಷ್ಣ ಜಿ. ಮಂಜೇಶ್ವರ ಸಾರಥ್ಯದ ತುಳುನಾಡ ಕಲಾಬಿರ್ಸೆ, ದೀಪಕ್ ರೈ ಪಾಣಾಜೆ ಅಭಿನಯದ ಇತ್ತ್ ನಾತ್ ದಿನ ತುಳು ಹಾಸ್ಯ ನಾಟಕ ನಡೆಯಲಿದೆ.
