ಬಂಟ್ವಾಳ: ಮಾಣಿ ಹಾಲು ಉತ್ಪಾದಕರ ಸಹಕಾರ ಸಂಘದ 2020-2021 ರಿಂದ ಮುಂದಿನ ಐದು ವರ್ಷಗಳಿಗೆ ಅವಿರೋಧವಾಗಿ ಆಯ್ಕೆಯಾದ ನಿರ್ದೇಶಕರಾಗಿ ಸಾಮಾನ್ಯ ಕ್ಷೇತ್ರದಿಂದ ಕೆ. ಜನಾರ್ಧನ ಗೌಡ, ಕೆ. ನಾರಾಯಣ ಶೆಟ್ಟಿ, ಸಿ.ಹೆಚ್. ನಾರಾಯಣ ಭಟ್, ಕೆ. ಸದಾನಂದ ರೈ, ಎಲ್. ಶಿವಶಂಕರ ಭಟ್, ಕೆ. ಬಾಬು ಶೆಟ್ಟಿ ಆಯ್ಕೆಯಾಗಿದ್ದಾರೆ. ಹಿಂದುಳಿದ ವರ್ಗ ’ಎ’ಕ್ಣೇತ್ರದಿಂದ ಪಿ. ಚಂದ್ರಶೇಖರ ಕರ್ಕೆರಾ, ಪರಿಶಿಷ್ಟ ಪಂಗಡದಿಂದ ಜನಾರ್ಧನ ಪೆರಾಜೆ, ಪರಿಶಿಷ್ಟ ಜಾತಿಯಿಂದ ಎಂ. ಕೃಷ್ಣ ಹಾಗೂ ಮಹಿಳಾ ಸದಸ್ಯರಾದ ಪ್ರಪುಲ್ಲ ರೈ ಹಾಗೂ ಲಲಿತಾ ನಾಯ್ಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಫೆ.13 ರಂದು ಚುನಾವಣೆ ನಡೆಯಬೇಕಿತ್ತು. ಅದರೆ ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಫೆ. 7 ರಂದು ಸಂಘದ ಕಚೇರಿಯಲ್ಲಿ ಸಹಕಾರಿ ಸಂಘಗಳ ಸಹಾಯಕ ಉಪನಿಬಂಧಕರ ಕಚೇರಿಯ ಹಿರಿಯ ಅಧಿಕಾರಿ ಗೋಪಾಲ ಅವರು ಈ ಪ್ರಕ್ರಿಯೆ ನಡೆಸಿ ಫಲಿತಾಂಶ ಘೋಷಣೆ ಮಾಡಿದ್ದಾರೆ.
