Wednesday, July 9, 2025

ನಿನ್ನೆ ಕಳೆದುಕೊಂಡ ಪರ್ಸ್ ಇಂದು ವಾರಸುದಾರರಿಗೆ ಹಸ್ತಾಂತರ

ಬಂಟ್ವಾಳ:  ಕಲ್ಲಡ್ಕ ನಿವಾಸಿ ಮಹಿಳೆಯೊಬ್ಬರು ತಮ್ಮ ಪರ್ಸನ್ನು ಮೆಲ್ಕಾರ್-ಬೋಳಂಗಡಿ ಮಧ್ಯೆ ಕಳೆದುಕೊಂಡಿದ್ದು, ಅದು ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯ ಮಹಿಳೆ ಸಿಬಂದಿಯೊಬ್ಬರಿಗೆ ಸಿಕ್ಕಿದ್ದು, ಗುರುವಾರ ಅದನ್ನು ಠಾಣೆಯಲ್ಲಿ ವಾರಿಸುದಾರ ಮಹಿಳೆಗೆ ಹಸ್ತಾಂತರಿಸಲಾಯಿತು.
ಸಂಚಾರಿ ಪೊಲೀಸ್ ಠಾಣೆಯ ಸಿಬಂದಿ ವಿದ್ಯಾ ಅವರು ಜು. 15ರ ಸಂಜೆ ಸಂಚಾರಿ ಠಾಣೆಗೆ ತೆರಳುತ್ತಿದ್ದಾಗ ಅವರಿಗೆ ಮೆಲ್ಕಾರ್ ಸಮೀಪ ಪರ್ಸ್ವೊಂದು ಸಿಗುತ್ತದೆ. ಅದನ್ನು ಠಾಣೆಗೆ ತಂದು ನೋಡಿದಾಗ ಸುಮಾರು 15 ಸಾವಿರದಷ್ಟು ಹಣ ಇರುವುದು ಗಮನಕ್ಕೆ ಬರುತ್ತದೆ. ತಕ್ಷಣ ಅವರು ಪತ್ರಕರ್ತರಿಗೆ ಮಾಹಿತಿ ನೀಡಿದ್ದು, ಮಾಧ್ಯಮಗಳಲ್ಲಿ ಆ ಸುದ್ದಿ ಪ್ರಕಟಗೊಳ್ಳುತ್ತದೆ.
ಕಲ್ಲಡ್ಕ ನಿವಾಸಿ, ಟೈಲರ್ ವೃತ್ತಿ ನಿರ್ವಹಿಸುತ್ತಿದ್ದ ಗೀತಾ ಕೊಟ್ಟಾರಿ ಅವರಿಗೆ ಸೇರಿದ ಪರ್ಸ್ ಅದಾಗಿದ್ದು, ಅವರ ಸಂಬಂಧಿಕ ಸುಜೀತ್ ಕೊಟ್ಟಾರಿ ಅವರ ಮೂಲಕ ಪರ್ಸ್ ಠಾಣೆಯಲ್ಲಿ ಇರುವುದು ಗೊತ್ತಾಗುತ್ತದೆ. ಗುರುವಾರ ಗೀತಾ ಅವರು ಪೊಲೀಸ್ ಸಿಬಂದಿ ಗೀತಾ ಅವರಿಂದ ಪರ್ಸ್ ಸ್ವೀಕರಿಸಿ ಧನ್ಯವಾದ ತಿಳಿಸಿದರು.

ಪರ್ಸ್ ಕಳೆದುಕೊಂಡಿದ್ದು ಹೇಗೆ.?
ಪಾಣೆಮಂಗಳೂರಿನಲ್ಲಿ ಟೈಲರ್ ಅಂಗಡಿ ಹೊಂದಿದ್ದ ಗೀತಾ ಅವರು, ಜು. 15ರಂದು ಸಂಜೆ ತಮ್ಮ ಅಂಗಡಿಯನ್ನು ಮುಚ್ಚಿ ಆಟೋದಲ್ಲಿ ಸಾಮಾನುಗಳನ್ನು ತುಂಬಿಕೊಂಡು  ಮನೆಗೆ ಮರಳುತ್ತಿದ್ದ ವೇಳೆ ಮೆಲ್ಕಾರ್-ಬೋಳಂಗಡಿ ಮಧ್ಯೆ ಪರ್ಸ್ ಕಳೆದುಕೊಳ್ಳುತ್ತಾರೆ. ಆ ವೇಳೆ ಜೋರಾಗಿ ಮಳೆ ಬರುತ್ತಿದ್ದು, ಪರ್ಸ್ ಬಿದ್ದದ್ದು ಗೊತ್ತೇ ಆಗಲಿಲ್ಲ.
ಆದರೆ ಆಟೋ ನರಹರಿ ಪರ್ವತದ ಬಳಿ ತಲುಪುತ್ತಿದ್ದಂತೆ ಪರ್ಸ್ ಬಿದ್ದಿರುವುದು ಗಮನಕ್ಕೆ ಬಂದು, ಮತ್ತೆ ಪಾಣೆಮಂಗಳೂರುವರೆಗೆ ತೆರಳಿ ಹುಡುಕಾಟ ನಡೆಸುತ್ತಾರೆ. ಆದರೆ ಪರ್ಸ್ ಸಿಗುವುದಿಲ್ಲ. ಈ ವಿಚಾರವನ್ನು ಸುಜೀತ್ ಕೊಟ್ಟಾರಿ ಅವರಿಗೆ ತಿಳಿಸಿದ್ದು, ಅವರು ಪರ್ಸ್ ಠಾಣೆಯಲ್ಲಿರುವ ಮಾಹಿತಿಯನ್ನು ಗೀತಾ ಅವರಿಗೆ ತಿಳಿಸಿದ್ದಾರೆ.

More from the blog

ಭಾರೀ ಮಳೆ ಮುನ್ಸೂಚನೆ : ಒಂದು ವಾರ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..

ಮಂಗಳೂರು : ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 14ರವರೆಗೆ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು,...

ಕುಡ್ತಮುಗೇರು: ಬಸ್ಸಿನಿಂದ ರಸ್ತೆಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು 

ವಿಟ್ಲ: ಖಾಸಗಿ ಬಸ್ಸಿನಿಂದ ಬಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43 ವ.) ಮೃತಪಟ್ಟವರು. ಜು.7ರಂದು ಬೆಳಗ್ಗೆ...

ನಾಯಕತ್ವ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ, ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ : ರೋ. ರಾಘವೇಂದ್ರ ಭಟ್

ಬಂಟ್ವಾಳ : ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು...

ಜು.10ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಯೋಜನೆ

ಬಿ.ಸಿ. ರೋಡ್ : ಸಮಸ್ತ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ, ಭಾರತವನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣನಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ...