Monday, January 26, 2026

ಲೊರೆಟ್ಟೊ ಲಯನ್ಸ್ ಪದಗ್ರಹಣ

ಬಂಟ್ವಾಳ : ಸೇವೆ ಮತ್ತು ಭಾತೃತ್ವ ಲಯನ್ ಚಳುವಳಿಯಲ್ಲಿ ಒಟ್ಟೊಟ್ಟಿಗೆ ಬರುವಂತವುಗಳು. ಹಾಲಿ ವರ್ಷದ ಧ್ಯೇಯ ಸೇವೆಯನ್ನು ಪ್ರೀತಿಯಿಂದ ಮಾಡಿ ಎಂಬುದಾಗಿದೆ. ಎಂದು ಲಯನ್ ಜಿಲ್ಲೆ 217 ಡಿ. ಉಪಗವರ್ನರ್- 2 ಲ| ಎಂ.ಜೆ.ಎಫ್ ವಸಂತ ಕುಮಾರ್ ಶೆಟ್ಟಿ ಹೇಳಿದರು.
ಆದುದರಿಂದ ನೀವು ಕೂಡ ಸೇವೆಯನ್ನು ಪ್ರೀತಿ ಪೂರ್ವಕವಾಗಿ ಸಮರ್ಪಕವಾಗಿ ಮಾಡಿ ಹಾಗೂ ಭಾತೃತ್ವ ವನ್ನು ಪ್ರೀತಿಯಿಂದಲೇ ವ್ಯಕ್ತಪಡಿಸಿ ಹಾಗೂ ಜೀವನದಲ್ಲಿ ಆಳವಡಿಸಿ ಅವರು ಲೊರೆಟ್ಟೊ ಅಗ್ರಾರ್ ಲಯನ್ಸ್ ಕ್ಲಬ್ 2019-20 ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಲಿಗೋರಿ ಲೋಬೋ ನೂತನ ಅಧ್ಯಕ್ಷರಾಗಿ, ಐರಿನ್ ಡಿ’ಸೋಜ ಕಾರ್ಯದರ್ಶಿಯಾಗಿ, ಗ್ರೇಟ್ಟಾ ಫೆರ್ನಾಂಡಿಸ್ ಖಜಾಂಚಿಯಾಗಿ ಹಾಗೂ ವಿವಿಧ ಪದಾಧಿಕಾರಿಗಳು ಪ್ರತಿಗೈದು ಆಯಾ ಹುದ್ದೆಗಳನ್ನು ಸ್ವೀಕರಿಸಿದರು.
ಲೊರೆಟ್ಟೊ ಪ್ರಾಥಮಿಕ ಶಾಲಾ 25 ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ, ಅಗ್ರಾರ್ ಹೋಲಿ ಸೇವಿಯರ್ ಶಾಲಾ ವಿದ್ಯಾರ್ಥಿಗಳು ಹಾಗೂ ಇತರ ಮೂವರು ವಿದ್ಯಾರ್ಥಿಗಳಿಗೆ ಒಟ್ಟು ರೂ. ಒಂದು ಲಕ್ಷದಷ್ಟು ಶಾಲಾ ಶುಲ್ಕ ವಿತರಣೆ, ನಲ್ಕೆಮಾರು ಶಾಲೆಗೆ ಸುಣ್ಣ ಬಳಿಯಲು ಆರ್ಥಿಕ ಸಹಾಯ, ಆಲ್ಬರ್ಟ್ ಪಿರೇರಾ ಅವರ ಮನೆಗೆ ಸಿಡಿಲು ಬಡಿದು ಆದ ನಷ್ಟಕ್ಕೆ ಆರ್ಥಿಕ ಸಹಾಯ ಇತ್ಯಾದಿ ಸೇವಾ ಚಟುವಿಕೆಗಳನ್ನು ನಿರ್ವಹಿಸಿದರು.
ವಿವಿಧ ಲಯನ್ ಕ್ಲಬ್ ಹಾಗೂ ರೋಟರಿ ಕ್ಲಬ್‌ನ ಪ್ರತಿನಿಽಗಳು ಉಪಸ್ಥಿತರಿದ್ದರು. ನಿರ್ಗಮನ ಅಧ್ಯಕ್ಷೆ ಲಯನ್ ಮಾರ್ಲಿನ್ ಮಾರ್ಟಿಸ್ ಸ್ವಾಗತಿಸಿ, ಲ| ಐರಿನ್ ಡಿ’ಸೋಜ ವಂದಿಸಿದರು. ಲ|ಆಂಟೋನಿ ಮಾರ್ಟಿಸ್ ಕಾರ್ಯಕ್ರಮ ನಿರ್ವಹಿಸಿದರು.

More from the blog

ಉಸ್ತುವಾರಿ ಸಚಿವರು ಗಣರಾಜ್ಯೋತ್ಸವ ವೇದಿಕೆಯನ್ನು ಸುಳ್ಳು ಹರಡಲು ಬಳಸಿಕೊಂಡಿರುವುದು ಖೇದಕರ : ಸಂಸದ ಕ್ಯಾ.ಚೌಟ

ಮಂಗಳೂರು: ಸಂವಿಧಾನಿಕ ಹುದ್ದೆಯನ್ನು ದುರುಪಯೋಗಪಡಿಸಿ ಸುಳ್ಳಿನ ಕಾರ್ಖಾನೆಯನ್ನೇ ಸೃಷ್ಟಿಸುವ ಕಾಂಗ್ರೆಸ್‌ ಸರ್ಕಾರದ ಪ್ರಯತ್ನ ಸಂಪೂರ್ಣ ವಿಫಲಗೊಂಡಿರುವ ಕಾರಣ ಇದೀಗ ಸಚಿವ ದಿನೇಶ್‌ ಗುಂಡೂರಾವ್‌ ಅವರು ಘನವೆತ್ತ ರಾಜ್ಯಪಾಲರ ನಡೆಯನ್ನು ಟೀಕಿಸುತ್ತಿದ್ದಾರೆ ಎಂದು ದಕ್ಷಿಣ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...

ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ, ಉಗ್ರಾಣ ಮುಹೂರ್ತ

ವಿಟ್ಲ: ಜ.27 ಮತ್ತು 28 ರಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ -ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ, ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಸಿರುವಾಣಿ...