ಮುಂಬಯಿ: ಕಳೆದ 35 ವರ್ಷಗಳಿಂದ ಕುವೈಟ್ನಲ್ಲಿ ಸೇವಾ ನಿರತ ಭಾರತ ರಾಷ್ಟ್ರದ, ಕರ್ನಾಟಕ ರಾಜ್ಯ ಮೂಲದ ಸಾಮಾಜಿಕ, ಸಾಂಸ್ಕೃತಿಕ ಸಂಸ್ಥೆಯಾದ ಕುವೈಟ್ ಕನ್ನಡ ಕೂಟದ (ಕು.ಕ.ಕೂ.) ತನ್ನ ವಾರ್ಷಿಕ ಮಹಾಸಭೆಯನ್ನು ಇತ್ತೀಚೆಗೆ ಇಲ್ಲಿನ ಖೈತಾನ್ನ ಭಾರತೀಯ ಸಮುದಾಯ ಶಾಲೆಯಲ್ಲಿ ನಡೆಸಿತು.
ಮಹಾಸಭೆಯ ಜೊತೆಗೆ ವಿವಿಧ ವಿನೋದಾವಳಿಯನ್ನೊಳಗೊಂಡ ಕಾರ್ಯಕ್ರಮದಲ್ಲಿ, 2020ರ ಕೂಟದ ನಿರ್ವಹಣೆಯ ಮೇಲ್ವಿಚಾರಣೆ ನಡೆಸಲು ಹೊಸ ಕಾರ್ಯಕಾರಿ ಸಮಿತಿ ಆಯ್ಕೆ ಮಾಡಲಾಯಿತು. ಸಿಎ| ಗುರುರಾಜ್ ರಾವ್ ಚುನಾವಣಾಧಿಕಾರಿ ಆಗಿದ್ದು, ಚುನಾವಣಾ ಪ್ರಕ್ರಿಯೆ ನಿರ್ವಹಿಸಿ ಸರ್ವಾನುಮತದಿಂದ ಚುನಾಯಿತರಾದ ಸದಸ್ಯರನ್ನು ಘೋಷಿಸಿದರು.

ರಾಜೇಶ ವಿಟ್ಟಲ್ (ಅಧ್ಯಕ್ಷ), ಸಂದೀಪ್ ಚಬ್ಬಾ (ಉಪಾಧ್ಯಕ್ಷ), ಪ್ರವೀಣ್ಕುಮಾರ್ ಶೆಟ್ಟಿ (ಕಾರ್ಯದರ್ಶಿ), ಪ್ರದೀಪ್ ರಾವ್ ಆಳುಗ್ಗೇಲು (ಖಜಾಂಚಿ) ಚುನಾಯಿತರಾದ ಸದಸ್ಯರು 2020ರ ವರ್ಷಕ್ಕೆ ಕುವೈತ್ ಕನ್ನಡ ಕೂಟದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಸಭೆಯಲ್ಲಿ ಅಧಿಕಾರ ಪದಗ್ರಹಣದ ಬಳಿಕ ನೂತನ ಕಾರ್ಯಕಾರಿ ಸಮಿತಿಗೆ ನೆರೆದ ಸದಸ್ಯರು ಶುಭ ಹಾರೈಸಿದರು.

