ಬಂಟ್ವಾಳ : ಕುರಿಯಾಳ ದುರ್ಗಾನಗರ ನೂತನ ನಿರ್ಮಿತ ಶ್ರೀ ಓಂಕಾರೇಶ್ವರಿ ದೇವಿ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವ ಆಮಂತ್ರಣ ಪತ್ರವನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನ.21ರಂದು ಬಿಡುಗಡೆ ಮಾಡಿದರು.



ಬಳಿಕ ಮಾತನಾಡಿ ಹಳ್ಳಿ ಮತ್ತು ನಗರ ಪ್ರದೇಶದಲ್ಲಿ ನಮ್ಮ ಸಂಸ್ಕೃತಿ, ಪರಂಪರೆ, ವಿಚಾರಧಾರೆ, ಜಾನಪದ ಕಟ್ಟುಕಟ್ಟಲೆ , ಧಾರ್ಮಿಕ ನಂಬಿಕೆ ಉಳಿದು ಬರಲು ಭಜನಾ ಮಂದಿರಗಳು ಕಾರಣವಾಗಿದೆ ಎಂದರು.
ಪತ್ರಕರ್ತ ರಾಜಾ ಬಂಟ್ವಾಳ್ ಮಾತನಾಡಿ ಭಜನಾ ಮಂದಿರ ಆರಂಭಕಾಲ, ಅದರ ಬೆಳವಣಿಗೆ ಬಗ್ಗೆ ತಿಳಿಸಿದರು.
ನಿವೃತ್ತ ಶಿಕ್ಷಕ ವೇದಾನಂದ ಕಾರಂತ ಶುಭ ಹಾರೈಸಿದರು.
ವೇದಿಕೆಯಲ್ಲಿ ಜೀರ್ನೋದ್ದಾರ ಸಮಿತಿ ಅಧ್ಯಕ್ಷ ವಸಂತಕುಮಾರ್ ವಿ. ಮಣಿಹಳ್ಳ, ಆಡಳಿತ ಸಮಿತಿ ಅಧ್ಯಕ್ಷ ಜಗದೀಶ ಸುವರ್ಣ ಪಾಪುದಡ್ಕ, ಪ್ರದೀಪ್ ಮಾರ್ಲ ಕುಟಿಲ, ಸತೀಶ್ ಶೆಟ್ಟಿ. ಶೇಖರ್ ಸಾಮಾನಿ,
ರೂಪೇಶ್ ಕುಟಿಲ, ಸುಹಾಸಿನಿ ಪಾಪುದಡ್ಕ, ಸುಜಾತಾ ಕುಕ್ಕಾಜೆ, ವನಿತಾ ದುರ್ಗಾನಗರ, ಜಗದೀಶ್ ಭಂಡಾರಿ, ಜಗದೀಶ್ ರೈ, ಮಿಥುನ್ ಸಾಮಾನಿ, ಧರ್ಮಣ್ ಬಂಗೇರ ದುರ್ಗಾನಗರ, ರೋಹಿದಾಸ್ ಕುಂದರ್, ಶಶಿ ಕಿರಣ್ bellore, ಅರ್ಚಕರಾದ ಹೊನ್ನಪ್ಪ ಪೂಜಾರಿ ಮತ್ತು ಪ್ರಮುಖರು ಉಪಸ್ಥಿತರಿದ್ದರು.
ಡಿ. 24ರಿಂದ 27ರ ತನಕ ವಿವಿಧ ಧಾರ್ಮಿಕ, ವೈದಿಕ,ಸಾಂಸ್ಕ್ರೀತಿಕ ಕಾರ್ಯಕ್ರಮಗಳು ನಡೆಯಲಿದೆ.
ಜೀರ್ಣೋದ್ದಾರ ಸಮಿತಿ ಪ್ರಧಾನ ಕಾರ್ಯದರ್ಶಿ ಹರೀಶ್ ಶೆಟ್ಟಿ ಪಡು ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

