ಬಂಟ್ವಾಳ: ಸಿದ್ಧಕಟ್ಟೆ ವಲಯದ ನೇಸರ ಜ್ಞಾನ ವಿಕಾಸ ಕೇಂದ್ರದ ತಿಂಗಳ ಮಾಹಿತಿ ಕಾರ್ಯಕ್ರಮ ಪುಷ್ಪಾ ಅವರ ಅಧ್ಯಕ್ಷತೆಯಲ್ಲಿ ಮಾವಿನಕಟ್ಟೆಯಲ್ಲಿ ಜರಗಿತು.


ಪತ್ರಕರ್ತ ಮತ್ತು ರಾಜ್ಯಮಟ್ಟದ ಸಂಪನ್ಮೂಲ ವ್ಯಕ್ತಿ ಗೋಪಾಲ ಅಂಚನ್ ಆಲದಪದವು ಅವರು ಆಕ್ಯುಪ್ರೆಷರ್ ಚಿಕಿತ್ಸೆ ಮತ್ತು ಕೊರೋನ ಸೋಂಕು ಹಿಮ್ಮೆಟ್ಟಿಸುವ ಮುಂಜಾಗೃತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಸುಝುಕಿ ಶಕ್ತಿ ಸೇಲ್ಸ್ ಮಾಲಕ ಕರ್ಪೆ ಬಾವ ಗುತ್ತು ಮನೆ ಶ್ರೀಕಾಂತ್ ಅವರು ಜ್ಞಾನವಿಕಾಸ ಕೇಂದ್ರ ಸದಸ್ಯರಿಗೆ ಮಾಸ್ಕ್ ತರಿಸಿ ಉಪಯೋಗಿಸುವ ಬಗ್ಗೆ ತಿಳಿಸಿದರು.
ತಾಲೂಕು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಸಪ್ನಾ, ಸಿದ್ಧಕಟ್ಟೆ ವಲಯ ಮೇಲ್ವಿಚಾರಕಿ ಹರಿಣಾಕ್ಷಿ ರೈ ಮತ್ತು ಸ್ಥಳೀಯ ಸೇವಾ ಪ್ರತಿನಿಧಿ ಹೇಮಲತಾ ಉಪಸ್ಥಿತರಿದ್ದರು.

