ಕೊರೊನ ಸಮಯದಲ್ಲಿ ಅವಿರತವಾಗಿ ದುಡಿದು ಜನರ ಸೇವೆಗೈದು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಪರರ ಆರೋಗ್ಯವೇ ತಮ್ಮ ಆರೋಗ್ಯ ಎಂಬ ಉದ್ದೇಶದಿಂದ ಸೇವೆ ಗೈದ ಆಶಾ ಕಾರ್ಯಕರ್ತರ ಸೇವೆ ಶ್ಲಾಘನೀಯ ಈ ನಿಟ್ಟಿನಲ್ಲಿ ಕುಕ್ಕಿಪಾಡಿ ಪಂಚಾಯತ್ ವ್ಯಾಪ್ತಿಯ ಆಶಾ ಕಾರ್ಯ ಕರ್ತರಾದ ಪುಷ್ಪಲತಾ, ಭಾರತಿ, ರಂಜಿನಿ, ನಳಿನಿ ಇವರನ್ನು ಕುಕ್ಕಿಪಾಡಿ ಪಂಚಾಯತ್ ವತಿಯಿಂದ ಅಧ್ಯಕ್ಷರಾದ ಸುಜಾತ ಆರ್ ಪೂಜಾರಿ ಇವರ ಸಮ್ಮುಖದಲ್ಲಿ ಅಭಿನಂದಿಸಲಾಯಿತು, ಈ ಕಾರ್ಯ ಕ್ರಮ ದಲ್ಲಿ ಉಪಾಧ್ಯಕ್ಷ ರಾದ ಯೊಗೀಶ ಆಚಾರ್ಯ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ತುಳಸಿನಿ, ಸದಸ್ಯರುಗಗಳಾದ ಲಿಂಗಪ್ಪ ಪೂಜಾರಿ, ಶ್ರೀಮತಿ ಬೇಬಿ ದೇವಸ, ಶ್ರೀಮತಿ ಗೀತಾ, ಶ್ರೀಮತಿ ಪೂರ್ಣಿಮಾ, ಶ್ರೀಮತಿ ಪ್ರತಿಭಾ ಶೆಟ್ಟಿ, ಶ್ರೀಮತಿ ಪುಷ್ಪ, ಶೇಖರ್ ಶೆಟ್ಟಿ, ಪಂಚಾಯತ್ ಸಿಬ್ಬಂದಿಗಳು ಹಾಗೂ ಇನ್ನಿತರ ರು ಹಾಜರಿದ್ದರು


