Tuesday, July 1, 2025

ಕುಕ್ಕಾಜೆ ಎಸ್. ಎಸ್. ಎಫ್. ಹಾಗೂ ಎಸ್. ವೈ. ಎಸ್. ಇದರ ಬದ್ರ್ ಮೌಲೂದ್ ನ 25ನೇ ವಾರ್ಷಿಕ ಹಾಗೂ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮ

ಕುಕ್ಕಾಜೆ: ಮಂಚಿ ಕುಕ್ಕಾಜೆ ಎಸ್. ಎಸ್. ಎಫ್. ಹಾಗೂ ಎಸ್. ವೈ. ಎಸ್. ಇದರ 25ನೇ ವಾರ್ಷಿಕ ಪ್ರಯುಕ್ತ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ  ಸಯ್ಯಿದ್ ಮುಹ್ಸಿನ್ ತಂಙಳ್ ಕಲ್ಲೇರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.  ಧರ್ಮ ಅಳಿಯದೆ ಜಗತ್ತು ಉಳಿಯಬೇಕು,ಅದಕ್ಕಾಗಿ ಪ್ರೀತಿ ಸೌಹಾರ್ದತೆಯನ್ನು ಕಾಪಾಡಿಕೊಳ್ಳಬೇಕು, ಸಾಮಾಜಿಕ ಕಾರ್ಯಕ್ರಮ ನಡೆಸಿ ಮಾನವಿಯತೆಯಿಂದ ಬದುಕು ನಡೆಸಿ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಂಚಿ ಉಸ್ತಾದ್, ಇಸ್ಲಾಮಿನ ನೈಜ ಆದರ್ಶ ಕೈ ಬಿಡದೆ ಜೀವನ ನಡೆಸಿ ಎಂಬ ಸಂದೇಶ ನೀಡಿದರು.


ಅಬೂಬಕರ್ ಸಿದ್ದೀಖ್ ಮಹ್ಮೂದಿ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ದ.ಕ. ಜಿ.ಪಂ. ಸದಸ್ಯ ಯಂ. ಎಸ್. ಮುಹಮ್ಮದ್, ಬಂಟ್ವಾಳ ತಾ.ಪಂ. ಉಪಾಧ್ಯಕ್ಷ ಅಬ್ಬಾಸ್ ಅಲೀ, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಖ್ ಕುಕ್ಕಾಜೆ ಶುಭ ಹಾರೈಸಿ ಮಾತನಾಡಿದರು.


ಮಂಚಿ ಗ್ರಾ.ಪಂ. ಸದಸ್ಯ ಜಿ.ಯಂ. ಇಬ್ರಾಹಿಮ್, ಬದ್ರುದೀನ್ ಮಂಚಿ, ಸಮೀವೂಲ್ಲ ಕುಕ್ಕಾಜೆ, ಕುಕ್ಕಾಜೆ ಶರಪುಲ್ ಕಮಿಟಿ  ಅಧ್ಯಕ್ಷ ಝೈನುದ್ದೀನ್, ಕುಕ್ಕಾಜೆ ಶೈನ್ ಗೈಸ್ ಅಧ್ಯಕ್ಷ ಅಬ್ದುಲ್ ಘಫಾರ್, ಜಿ. ಎಸ್. ಇ. ಆರ್. ಅಧ್ಯಕ್ಷ ಶರೀಪ್ ಕುಕ್ಕಾಜೆ, ಕೊಲ್ನಾಡ್ ಗ್ರಾ. ಪಂ. ಸದಸ್ಯ ಎ.ಬಿ. ಅಬ್ದುಲ್ಲ ಉಸ್ಮಾನ್ ಕುಕ್ಕಾಜೆ, ಕುಕ್ಕಾಜೆ ದ.ಕ.ಹಿ.ಪ್ರಾ.ಶಾಲೆ ಅಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್ ಕುಕ್ಕಾಜೆ, ಅಬೂಬಕರ್ ಲತೀಫಿ ಸುನ್ನಿ ಮಹಲ್ ಕಯ್ಯೂರ್ ಬಿ. ಎ. ಇಬ್ರಾಹಿಮ್ ಸಖಾಫಿ ದಾವಣಗೆರೆ, ಎಸ್ ಎಸ್ ಎಫ್ ದ ಕ ಜಿಲ್ಲಾ ಅಧ್ಯಕ್ಷ ಇಬ್ರಾಹಿಮ್ ಸಖಾಫಿ ಸೆರ್ಕಳ ಕುಕ್ಕಾಜೆ ಎಸ್ ಎಸ್ ಎಫ್ ಶಾಖ ಅಧ್ಯಕ್ಷ ಮುಹಮ್ಮದ್ ಶರೀಪ್ ಮೊದಲಾದವರು ಉಪಸ್ಥಿತರಿದ್ದರು.


ಧಾರ್ಮಿಕ ಕೇಂದ್ರದಗಳಿಗೆ ಸ್ಥಳ ದಾನ ಮಾಡಿದ ಕೆ. ಸಿ. ಯಫ್ ಜಿದ್ದಾ ಬನೂಮಾಲಿಕ್ ಘಟಕದ ಅಧ್ಯಕ್ಷ ಅಬ್ಬಾಸ್ ಹಾಜಿ ಕಾಪಿಕ್ಕಾಡ್ ಕುಕ್ಕಾಜೆ ಹಾಗೂ ಕೆ. ಸಿ ಯಫ್ ಜಿದ್ದಾ ಬನೂಮಾಲಿಕ್ ಘಟಕದ ಸದಸ್ಯ ಮುಹಮ್ಮದ್ ರಫೀಖ್ ಕುಕ್ಕಾಜೆ ಇವರನ್ನು ಸನ್ಮಾನಿಸಲಾಯಿತು.
ಎಸ್. ವೈ. ಎಸ್. ಅಧ್ಯಕ್ಷ ಮಹ್ಮೂದ್ ಸಅದಿ ಸ್ವಾಗತಿಸಿ, ಎಸ್ ಎಸ್ ಎಫ್ ಕುಕ್ಕಾಜೆ ಶಾಖಾ ಕಾರ್ಯದರ್ಶಿ ಸಫ್ವಾನ್ ವಂದಿಸಿದರು. ಕೆ.ಯಂ ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು.

More from the blog

ಕರಾವಳಿ ಮರಳು ನೀತಿ ರೂಪಿಸಲು ಒತ್ತಾಯಿಸಿ AICCTU ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ.

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಮತ್ತು ಕೆಂಪು ಕಲ್ಲು ಗಣಿಗಾರಿಕೆಯನ್ನು ಪೂರ್ತಿಯಾಗಿ ನಿಷೇಧ ಮಾಡಿರುವುದನ್ನು ಪ್ರಗತಿಪರ ದ.ಕ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ...

ನೆತ್ತರಕೆರೆ: ನವೋದಯ ಮಿತ್ರ ಕಲಾ ವೃಂದ (ರಿ) ನೂತನ ಅಧ್ಯಕ್ಷರಾಗಿ ಜಗದೀಶ್ ಎನ್ ಆಯ್ಕೆ..

ಬಂಟ್ವಾಳ : ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆ, ನವೋದಯ ಮಿತ್ರ ಕಲಾ ವೃಂದ (ರಿ) ನೆತ್ತರಕೆರೆ ಇದರ ವಾರ್ಷಿಕ ಮಹಾಸಭೆಯು ಜೂ 29ರಂದು ಸಂಘದ ಸಭಾಭವನದಲ್ಲಿ ನಡೆದು...

ಕೊಲೆಯತ್ನ ಪ್ರಕರಣ : 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ..

ಬಂಟ್ವಾಳ : ಕೊಲೆಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಲಾಗಿದೆ. ಬಂಟ್ವಾಳದ ಬಿ ಮೂಡ ಗ್ರಾಮ ನಿವಾಸಿ ಅಕ್ಬರ್ ಸಿದ್ದಿಕ್ ಬಂಧಿತ ಆರೋಪಿ. 2011ನೇ ಸಾಲಿನಲ್ಲಿ ಬಂಟ್ವಾಳ ತುಂಬೆ ಗ್ರಾಮದ ಅರ್ಬನಗುಡ್ಡೆ ಎಂಬಲ್ಲಿ...

‘ಅಂತರಂಗದ ಕೃಷಿ, ಆಧ್ಯಾತ್ಮದ ಕೃಷಿ ಜತೆಗೆಯಾಗಿ ನಡೆಯಬೇಕು’- ಒಡಿಯೂರು ಶ್ರೀ

ವಿಟ್ಲ: ಕೃಷಿ ಎಂಬುದು ಶ್ರೇಷ್ಠವಾಗಿದ್ದು, ಹೃದಯಕ್ಕೂ, ಭೂಮಿಯಲ್ಲಿಯೂ ಕೃಷಿ ನಡೆಯಬೇಕು. ಪ್ರತಿಯೊಂದಕ್ಕೂ ಸಂಸ್ಕಾರ ನೀಡುವ ಕಾರ್ಯವಾದಾಗ ಸುಸೂತ್ರವಾಗಿ ನಡೆಯುತ್ತದೆ. ಅಂತರಂಗದ ಕೃಷಿ, ಆಧ್ಯಾತ್ಮದ ಕೃಷಿ ಜತೆಗೆಯಾಗಿ ನಡೆಯಬೇಕು. ಆಧ್ಯಾತ್ಮದ ಜಾಗೃತಿಯಿಂದ ಬದುಕು ಸುಂದರವಾಗುತ್ತದೆ. ಕಲೆ,...