Monday, January 26, 2026

ಕರಾರಸಾನಿಗಮದ ಸಹಾಯಕ ಕಾರ್ಯ ಅಧೀಕ್ಷಕರಿಗೆ ಬೀಳ್ಕೋಡುಗೆ

ಬಂಟ್ವಾಳ : ಕಳೆದ 35 ವರ್ಷಗಳಿಂದ ಕ.ರಾ.ರ.ಸಾ.ನಿಗಮದಲ್ಲಿಸೇವೆ ಸಲ್ಲಿಸಿ ಇದೀಗ ನಿವೃತ್ತರಾದ ಪುತ್ತೂರು ವಿಭಾಗದ ಬಿ.ಸಿ.ರೋಡ್ ಘಟಕದಲ್ಲಿ ಸಹಾಯಕ ಕಾರ್ಯ ಅಧೀಕ್ಷಕರಾಗಿದ್ದ ಅಂತೋನಿ ಲಿಯೋ ತಾವ್ರೋ ರವರ ಬೀಳ್ಕೊಡುಗೆ ಸಮಾರಂಭ ಕ.ರಾ.ರ.ಸಾ.ನಿಗಮದ ಬಿ.ಸಿ.ರೋಡು ಘಟಕದಲ್ಲಿ  ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಘಟಕದ ವ್ಯವಸ್ಥಾಪಕರಾದ ಶ್ರೀಷ್ ಭಟ್ ವಹಿಸಿ ತಾವ್ರೋ ಅವರು ಕಳೆದ 35 ವರ್ಷದ ತಮ್ಮ ಸೇವೆಯಲ್ಲಿ ದಕ್ಷ,ಪ್ರಾಮಾಣಿಕತೆ ಹಾಗೂ ತಂಡ ಮನೋಭಾವದ ಮೂಲಕ  ನಿರ್ವಹಿಸಿದ್ದು,  ಅವರ ಈ ಸೇವೆ ತಮಗೆಲ್ಲರಿಗೂ ಮಾದರಿಯಾಗಿದೆ ಎಂದು ಅಭಿನಂದಿಸಿದರು.ಈ ಸಂದರ್ಭದಲ್ಲಿ ನಿಗಮದ ಬಿ.ಸಿ.ರೋಡು ಘಟಕದ ಸಿಬ್ಬಂದಿಗಳ ವತಿಯಿಂದ ಅಂತೋನಿ ಲಿಯೋ ತಾವ್ರೋ ದಂಪತಿಯನ್ನು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಮಂಗಳೂರು ವಿಭಾಗದ ಅಂಕಿ ಅಂಶ ಅಧಿಕಾರಿ ಪಿ.ಇಸ್ಮಾಯಿಲ್ ಅತಿಥಿಯಾಗಿ ಭಾಗವಹಿಸಿ ತಾವ್ರೋ ಅವರ ಸೇವೆಯನ್ನು ಶ್ಳಾಘಿಸಿದರು.ಘಟಕದ ಸಿಬಂದಿಗಳಾದ ಜಯರಾಮ್,ಸಂತೋಷ್ ಭಟ್,ರಮೇಶ್,ಅತಾವುಲ್ಲಾ,ಗಣೇಶ್ ಅವರು ಸಮಯೋಚಿತವಾಗಿ ಮಾತನಾಡಿ ಶುಭಹಾರೈಸಿದರು. ಸಂಚಾರ ನಿರೀಕ್ಷಕ ಗಣೇಶ್ ಪೈ ಸ್ವಾಗತಿಸಿ,ಪ್ರಸ್ತಾವಿಸಿದರು.ಸುರೇಶ್ ರೈ ವಂದಿಸಿದರು.ಕೆ.ರಮೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...

ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ, ಉಗ್ರಾಣ ಮುಹೂರ್ತ

ವಿಟ್ಲ: ಜ.27 ಮತ್ತು 28 ರಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ -ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ, ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಸಿರುವಾಣಿ...

ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ : ತಹಶೀಲ್ದಾರ್ ಜಿ. ಮಂಜುನಾಥ್

ಬಂಟ್ವಾಳ : ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರನ್ನು ಒಳಗೊಂಡ ಸಮೃದ್ಧ ಭಾರತವನ್ನು ಸಂವಿಧಾನದ ಶಕ್ತಿಯಜೊತೆ ನಿರ್ಮಿಸೋಣ ಎಂದು ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಜಿ ಮಂಜುನಾಥ್ ಹೇಳಿದರು. ಬಂಟ್ವಾಳ ತಾಲೂಕು ರಾಷ್ಟ್ರೀಯ...