Thursday, June 26, 2025

ಜನತಾಕರ್ಪ್ಯೂ ಗೆ ಬೆಂಬಲ: ಬಂಟ್ವಾಳ ಸಂಪೂರ್ಣ ಸ್ತಬ್ದ

ಚಿತ್ರ: ಸದಾಶಿವ ಕೈಕಂಬ

ಬಂಟ್ವಾಳ: ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಯವರ ಕರೆಗೆ ಓಗೊಟ್ಟು ಸ್ತಬ್ಧ ವಾದ ಬಂಟ್ವಾಳ.

ಜಗತ್ತಿನ ನಿದ್ದೆಗೆಡಿಸಿದ ಡೆಡ್ಲಿ ವೈರಸ್ ಕೊರೊನೊ ವನ್ನು ತಡೆಗಟ್ಟುವ ಸಲುವಾಗಿ ಮಾ.22 ರಂದು ಆದಿತ್ಯವಾರ ಬೆಳಿಗ್ಗೆ 7ರಿಂದ ರಾತ್ರಿ 9 ಗಂಟೆಯ ವರಗೆ ಜನತಾಕರ್ಪ್ಯೂ ಪಾಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದರು.
ಈ ಕರೆಯನ್ನು ಜನತೆ ಸ್ವೀಕರಿಸಿ ಮನೆಯಿಂದ ಹೊರಬರದೆ ಜಾಗೃತಿ ಗಾಗಿ ಕೈಜೋಡಿಸಿದರು.
ಬೆಳಿಗ್ಗೆ ಯಾದ ತಕ್ಷಣ ಬ್ಯೂಸಿಯಾಗುತ್ತಿದ್ದ ಬಿಸಿರೋಡು ಪೇಟೆ ಜನರಿಲ್ಲದೆ ಸೊರಗುತ್ತಿತ್ತು.
ಮುಂಜಾನೆಯೇ ರಸ್ತೆಗಿಳಿಯುವ ಅಟೋ ರಿಕ್ಷಾ ಗಳು ಮನೆಯಿಂದ ಗೇಟ್ ದಾಟಿಲ್ಲ, ಖಾಸಗಿ ಬಸ್ ಗಳು ರಸ್ತೆಗಿಳಿಯುವ ಸಾಹಸ ಮಾಡಿಲ್ಲ. ಸ್ವಯಂಪ್ರೇರಿತ ರಾಗಿ ಪ್ರತಿಯೊಬ್ಬರು ಮನೆಯಲ್ಲಿದ್ದು ಮೋದಿಯವರ ಜನತಾಕರ್ಪ್ಯೂ ಗೆ ಬೆಂಬಲ ನೀಡಿ ಪಾಲಿಸಿದರು.
ರಸ್ತೆಯ ಲ್ಲಿ ಬೆರಳೆಣಿಕೆಯಲ್ಲಿ ಪೋಲಿಸರು ಅತ್ತಿಂದಿತ್ತ ಓಡಾಟ ನಡೆಸುವುದು ಬಿಟ್ಟರೆ ಉಳಿದಂತೆ ಬಸ್ ನಿಲ್ದಾಣ ಜನರಿಲ್ಲದೆ ಬಿಕೋ ಅನ್ನುತ್ತಿತ್ತು.ಎಲ್ಲಾ ಅಂಗಡಿಗಳು ಶಟರ್ ಎಳೆದು ಬೀಗ ಹಾಕಲಾಗಿತ್ತು.
ಸಂಘಟನೆಗಳು ಕರೆಕೊಡುವ ಬಂದ್ ಗಳಿಗಿಂತ ಇದು ವಿಭಿನ್ನವಾಗಿ ಕಾಣುತ್ತಿತ್ತು.
ಎರಡು ದಿನಗಳ ಮುಂಚಿತವಾಗಿ ಜನತಾಕರ್ಪ್ಯೂ ಗೆ ಕರೆ ನೀಡಿದ್ದರ ಹಿನ್ನೆಲೆಯಲ್ಲಿ ಒಂದು ವಾರಗಳಿಗೆ ಮನೆಗೆ ಬೇಕಾದ ಎಲ್ಲಾ ಅಗತ್ಯ ವಸ್ತುಗಳನ್ನು ಶನಿವಾರ ರಾತ್ರಿವೇಳೆ ಖರೀದಿಸುವ ಭರಾಟೆ ಕಂಡು ಬಂದಿತ್ತು.
ಅಂತೂ ಮಹಾಮಾರಿ ಕೊರೊನೊ ವೈರಸ್ ಹೊಡೆದು ಓಡಿಸಲು ಪ್ರಧಾನಿ ಜೊತೆಗೆ ಎಲ್ಲರೂ ಕೈಜೋಡಿಸಿದಂತೆ ಭಾಸವಾಗುತ್ತಿದೆ.
ಭಾರತ ಕೊರೊನೊ ದಿಂದ ಮುಕ್ತಿಯಾಗಲಿ ಎಂಬುದೇ ನಮ್ಮ ನಿಮ್ಮ ಪ್ರಾರ್ಥನೆ ಯಾಗಲಿ…

More from the blog

School Holiday : ಭಾರೀ ಮಳೆ ಮುನ್ಸೂಚನೆ : ನಾಳೆ ಬೆಳ್ತಂಗಡಿ ತಾಲೂಕಿನ ಶಾಲೆಗಳಿಗೆ ರಜೆ..

ಬೆಳ್ತಂಗಡಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಯ ಹಿನ್ನಲೆ ಬೆಳ್ತಂಗಡಿ ತಾಲೂಕಿನ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಖಾಸಗಿ ವಿದ್ಯಾಸಂಸ್ಥೆಗಳಿಗೆ ಜೂನ್ 26ರಂದು ರಜೆ ಘೋಷಣೆ ಮಾಡಲಾಗಿದೆ. ಮುಂಜಾಗೃತ ಕ್ರಮವಾಗಿ ತಹಶೀಲ್ದಾರ್ ರವರ ತಾಲೂಕು ವಿಪತ್ತು...

Bantwal Police :ಜೂನ್ 26 ರಂದು ” ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ” ಅಭಿಯಾನ 2025 ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಇಲಾಖೆಯ ವತಿಯಿಂದ ಬಿಸಿರೋಡಿನಲ್ಲಿ ಜೂನ್ 26 ರಂದು " ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ " ಅಭಿಯಾನ 2025 ಕಾರ್ಯಕ್ರಮ ನಡೆಯಲಿದೆ...

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...

ಇಡ್ಕಿದು ಗ್ರಾ. ಪಂ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅನುಮತಿ ವಿಚಾರ : ಪಿಡಿಒ ಅಮಾನತು

ವಿಟ್ಲ: ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ರಾಜಕೀಯ ಸಭೆ ನಡೆಸಲು ಅವಕಾಶ ನೀಡಿದ‌ ಆರೋಪದ ಹಿನ್ನೆಲೆ ಯಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ ರವರನ್ನು ಅಮಾನತು...