Wednesday, February 12, 2025

ನಾವು ತಿನ್ನುವ ಆಹಾರದಲ್ಲಿ ವಿಷ ಬೆರೆತಿದೆ: ಕೃಷ್ಣ ರಾವ್

ಪುತ್ತೂರು: ನಾವು ತಿನ್ನುವ ಆಹಾರದಲ್ಲಿ ಒಂದಲ್ಲ ಒಂದು‌ ವಿಷ ಬೆರೆತಿರುವುದರಿ‌ಂದಲೇ,ಅತೀ ಹೆಚ್ಚು ಜನ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ,
ತಿನ್ನುವ ಆಹಾರದ ಬಗ್ಗೆ ಕಾಳಜಿ ವಹಿಸುವುದೊಂದೇ ಕ್ಯಾನ್ಸರ್ ನಿಯಂತ್ರಣಕ್ಕೆ‌ ಮದ್ದು ಎಂದು ಲೇಖಕ- ಅಂಕಣಕಾರ, ಸಾಮಾಜಿಕ ಹೋರಾಟಗಾರ ಅಡ್ಡೂರು ಕೃಷ್ಣರಾವ್ ಹೇಳಿದರು.


ದರ್ಬೆ ವಿದ್ಯಾನಗರದ ಬಹುವಚನಂ ಆಶ್ರಯದಲ್ಲಿ ಭಾನುವಾರ ನಡೆದ ತಿಂಗಳ ಕಾರ್ಯಕ್ರಮದಲ್ಲಿ “ಆಹಾರದಲ್ಲಿ ವಿಷ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
1945 ರಿಂದ ಭಾರತದಲ್ಲಿ ಆಹಾರಕ್ಕೆ ವಿಷ ಬೀಳತೊಡಗಿದ್ದು,
ಬೆಳೆಯ ರಕ್ಷಣೆಗೆ ತೋಟ, ಗದ್ದೆಗಳಿಗೆ, ಗಿಡಮರಗಳಿಗೆ ಹಾಕಿದ ವಿಷ ಎಲ್ಲೆಡೆ ವ್ಯಾಪಿಸುತ್ತಿದೆ.
ಮಾರಣಾಂತಿಕ ಕಾಯಿಲೆ ಸಿಡುಬು ವಿರುದ್ಧ ಗೆದ್ದಿದ್ದೇವೆ ಎಂದುಕೊಳ್ಳುತ್ತೇವೆ ಆದರೆ, ಅದು ಬೇರೆ ಬೇರೆ ರೂಪದಲ್ಲಿ ಮರುಕಳಿಸುತ್ತಿದೆ ಎಂದವರು ಆತಂಕ ವ್ಯಕ್ತಪಡಿಸಿದರು.
ಅಮೇರಿಕಾದಲ್ಲಿ 1972 ರಲ್ಲಿ ಡಿಡಿಟಿ ಬ್ಯಾನ್ ಆಗಿದೆ, ಆದರೆ ಭಾರತದಲ್ಲಿ ಹೊಸ ಹೊಸ ಡಿಡಿಟಿ ಫ್ಯಾ ಕ್ಟರಿ ಗಳು ತಲೆ ಎತ್ತುತ್ತಿವೆ.
ಡಿಡಿಟಿಗಿಂತ ಹೆಚ್ಚು ವಿಷಕಾರಿ ಕೀಟನಾಶಕವನ್ನು ಕ್ಯಾಬೇಜ್, ಕ್ಯಾಲಿಫ್ಲವರ್ ನಂತಹ ತರಕಾರಿ ಗಳಿಗೆ ಬಳಸಲಾಗುತ್ತಿರುವುದು ದುರಂತ ಎಂದರು.
ಹಸಿರು ಕ್ರಾಂತಿಯ ಹೆಸರಿನಲ್ಲಿ ಪಂಜಾಬ್ ನ ಗದ್ದೆ, ತೋಟಗಳಿಗೆ
ಕೀಟನಾಶಕ ಹೊಡೆದದ್ದೇ ಕ್ಯಾನ್ಸರ್ ರೋಗಿಗಳ ಸೃಷ್ಟಿಗೆ ಕಾರಣವಾಗುತ್ತಿದೆ ಎಂದ ಅವರು, ಅಂಕಿ ಅಂಶವೊಂದರ ಪ್ರಕಾರ ಪಂಜಾಬ್ ನಲ್ಲಿ ದಿನಕ್ಕೆ 18ಮಂದಿ ಕ್ಯಾನ್ಸರ್ ನಿಂದ ಸಾಯುವಂತಾಗಿದೆ.
ಕರಾವಳಿ ಸಹಿತ ನಮ್ಮ ಆಸುಪಾಸಿನಲ್ಲಿ ಎಂಡೋಸಲ್ಫಾನ್ ಸ್ಪ್ರೇ ಯಿಂದ ಆಗಿರುವ ಅನಾಹುತ, ಇಂದಿಗೂ ಅನೇಕ ಜೀವಗಳನ್ನು, ಕುಟುಂಬಗಳ ಜೀವ ಹಿಂಡುತ್ತಿದೆ. ನಾವು ಇದರಿಂದ ಪಾಠ ಕಲಿಯಬೇಕಿತ್ತು, ಆದರೂ ಅಸಹಾಯಕರಂತೆ ಕುಳಿತು ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದೇವೆ. ಇದು ದುರದೃಷ್ಟಕರ ಎಂದರು.
ವಿವಿಧ ಅಂಕಿ ಅಂಶಗಳ ಸಹಿತ ಆಹಾರದಲ್ಲಿನ ವಿಷದ ಪ್ರಮಾಣದ ಕುರಿತಾಗಿ ವಿವರಿಸಿದ ಅವರು, ಮನುಷ್ಯ ಸ್ವಯಂ ಜಾಗೃತನಾಗದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದರು.
ನಮಗೆ ಬೇಕಾದ್ದನ್ನು ನಾವೇ ಬೆಳೆಯುವ ಪರಿಪಾಠ ಬೆಳೆಸಬೇಕು ಮಳೆಯೇ ಸರಿಯಾಗಿ ಬೀಳದ ಇಸ್ರೇಲ್ ನಲ್ಲಿ ಕೃಷಿ ಯಲ್ಲಿ ಕ್ರಾಂತಿ ಮಾಡ್ತಾರಂತೆ, ನಾವು ಫಲವತ್ತಾದ ಮಣ್ಣು ಇಟ್ಕೊಂಡು , ಯಾರೋ ಬೆಳೆದ ವಿಷವನ್ನು ತಿನ್ನುತ್ತಾ, ಮನೆ ಮಕ್ಕಳಿಗೆ ತಿನ್ನಿಸುತ್ತಾ ಬದುಕನ್ನೇ ಹಾಳು ಮಾಡ್ತಾ ಇದ್ದೇವೆ. ಸಾವಯವ ಕೃಷಿಯತ್ತ ಮನಸ್ಸು ಮಾಡೋಣ ಎಂದರು.
ನಿವೃತ್ತ ಶಿಕ್ಷಕ ಸುರೇಶ್ ಶೆಟ್ಟಿಯವರು, ಅಡ್ಡೂರು ಕೃಷ್ಣರಾವ್ ರನ್ನು ಶಾಲುಹೊದಿಸಿ ಸನ್ಮಾನಿಸಿದರು. ಪ್ರಿಯಂವದಾ ಪ್ರಾರ್ಥಿಸಿದರು. ರಂಗಕರ್ಮಿ ಐಕೆ ಬೊಳುವಾರು ಸ್ವಾಗತಿಸಿದರು. ಬಹುವಚನಂ ನ ಡಾ.ಶ್ರೀಶ ಕುಮಾರ್ ಎಂ.ಕೆ. ವಂದಿಸಿದರು.

More from the blog

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...