ಕಾರಣೀಕ ದೈವ ಶ್ರೀ ಕೊರಗಜ್ಜ ನ ಬಗ್ಗೆ ಪ್ರಸ್ತುತ ದಿನಗಳಲ್ಲಿ ಯಾರಿಗಿಲ್ಲ ಭಯ ಭಕ್ತಿ.

ಬೇರೆ ಬೇರೆ ರೀತಿಯಲ್ಲಿ ಸಂಗೀತ ಕಾರರು ಹೊಸ ರೂಪದಲ್ಲಿ ಹಾಡಿದ ಕೊರಗಜ್ಜನ ಹಾಡು ರಿಲೀಸ್ ಕೂಡ ಆಗಿದೆ.
ಸಣ್ಣ ಬಾಲಕನಿಂದ ಹಿಡಿದು ಬಹುತೇಕ ಎಲ್ಲಾ ಸಿಂಗರ್ ಗಳು ಕೊರಗಜ್ಜನ ಹಾಡು ಹಾಡಿ ಪ್ರಸಿದ್ದಿ ಪಡೆದಿದ್ದಾರೆ.
ಆದರೆ ಇಲ್ಲೊಬ್ಬರು ಮುಸ್ಲಿಂ ಸಮುದಾಯದ ಯುವಕ ಕೊರಗಜ್ಜನ ಹಾಡಿನ ಬಗ್ಗೆ ಅಪಾರವಾದ ಗೌರವ ಹಾಗೂ ಇಷ್ಟ ಪಟ್ಟು ಹಾಡು ಹಾಡಿ ಜನಪ್ರಿಯತೆ ಗಳಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಕೂಡ ಆಗಿದೆ.
ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ರಶೀದ್ ಎನ್ ಅವರು ಹಾಡುಗಾರಿಕೆಯ ಜೊತೆಗೆ ಕಲಾವಿದ ಕೂಡ ಹೌದು.
ರಶೀದ್ ಅವರು ಹಾಡಿದ ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೆ ಅವರಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ್ದಾರೆ.
ಅವರು ಈ ಒಂದು ಹಾಡು ಅಲ್ಲದೆ ಅನೇಕ ಹಾಡಿನ ಮೂಲಕ ಜನರ ಮನಸ್ಸು ಗೆದ್ದವರು.
ಇತ್ತೀಚಿನ ದಿನಗಳಲ್ಲಿ ಸೌಹಾರ್ದ ದತೆ ಕೊರತೆಯೂ ಸೇರಿದಂತೆ ಮನುಷ್ಯ ರ ಜೊತೆ ಪ್ರೀತಿ ವಿಶ್ವಾಸ ಬೇಕು ಎಂಬ ನಿಟ್ಟಿನಲ್ಲಿ ನಾನು ಇಷ್ಟವಾದ ಹಾಡನ್ನು ಹಾಡಿದ್ದೇನೆ.
ನನಗೆ ಕೊರಗಜ್ಜನ ಹಾಡು ಅಂದರೆ ಇನ್ನಿಲ್ಲದ ಪ್ರೀತಿ.
ಹಾಗಾಗಿ ಹಾಡು ಹಾಡಿದ್ದೇನೆ. ಈ ಹಾಡು ಹಾಡಿದ ನನಗೆ ನನ್ನ ಎಲ್ಲಾ ಸಮುದಾಯ ದ ಸ್ನೇಹಿತರು ವೈಯಕ್ತಿಕ ಸ್ಟೇಟ್ಸ್ ನಲ್ಲಿ ಹಾಕಿ ಅಭಿನಂದನೆ ಸಲ್ಲಿಸಿದ್ದಾರೆ.
ಇದಕ್ಕಿಂತ ದೊಡ್ಡ ಗೌರವ ನನಗೆ ಬೇಡ…
ನನ್ನ ಹಾಡಿಗೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದ ನೀಡುತ್ತೇನೆ.
*ರಶೀದ್ ಎನ್*

