ಕೊಕ್ಕಡ: ಕೊಕ್ಕಡದಲ್ಲಿ ಬಸ್ ಪಲ್ಟಿಯಾಗಿ ಶಾಲಾ ಮಕ್ಕಳು ಗಾಯಗೊಂಡು ಆಸ್ಪತ್ರೆ ಗೆ ದಾಖಲಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಕೊಕ್ಕಡ ಸಮೀಪದ ಕಾಪಿನಬಾಗಿಲಿನ ಬಳಿ ಎಂಬಲ್ಲಿ ಪ್ರವಾಸಕ್ಕೆಂದು ಬಂದ ಮಕ್ಕಳ ಶಾಲಾ ಬಸ್ ಪಲ್ಟಿಯಾದ ಘಟನೆ ನಡೆದಿದೆ.
ಘಟನೆಯಲ್ಲಿ 13 ವಿದ್ಯಾರ್ಥಿಗಳ ಸಹಿತ ಇಬ್ಬರು ಶಿಕ್ಷಕರು ಗಾಯಗೊಂಡಿದ್ದಾರೆ.
ಧರ್ಮಸ್ಥಳ ಹಾಗೂ ಬೇಲೂರು ಪ್ರವಾಸಕ್ಕೆಂದು ಬಂದ ಬೆಳಗಾವಿ ಮೂಲದ ಶಾಲಾ ಮಕ್ಕಳು. ಧರ್ಮಸ್ಥಳ ದಿಂದ ಬೇಲೂರು ಕಡೆ ಹೋಗುವ ದಾರಿಯಲ್ಲಿ ಘಟನೆ ನಡೆದಿದೆ.
40 ವಿದ್ಯಾರ್ಥಿಗಳ ಬಸ್ ಪ್ರವಾಸಕ್ಕೆಂದು ಹೊರಟಿತ್ತು.
ಬೆಳಗಾವಿ ಮೂಲದ ಹುಕ್ಕೆರಿ ತಾಲೂಕಿನ ಎಮಕನಮರಡಿ ಶಾಲಾ ಮಕ್ಕಳ ಬಸ್, ಎದುರಿಗೆ ಬಂದ ಕಾರನ್ನು ತಪ್ಪಿಸಲು ಹೋಗಿ ಈ ದುರ್ಘಟನೆ ನಡೆದಿದೆ.
ಅದೃಷ್ಠವಶಾತ್ ಬಸ್ ನಲ್ಲಿದ್ದ ಶಾಲಾ ಮಕ್ಕಳು ಸಣ್ಣ ಪುಟ್ಟ ಗಾಯಗಳೊಂದಿಗೆ ಹಾಗೂ ಬಸ್ ಚಾಲಕ ಅಪಾಯದಿಂದ ಪಾರಾಗಿದ್ದಾರೆ.13 ಮಕ್ಕಳು ಸೇರಿ 2 ಶಿಕ್ಷಕರಿಗೆ ಗಾಯಗಳಗಿವೆ. ಗಾಯಗೊಂಡ ಶಾಲಾ ಮಕ್ಕಳ ಸಹಿತ ಶಿಕ್ಷಕರನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಾಲಿಸಲಾಗಿದೆ. ಉಪ್ಪಿನಂಗಡಿ ಎಸ್ ಐ ಈರಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.














