ವಿಟ್ಲ: ದ.ಕ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ವಿಟ್ಲ ವಲಯ ಇದರ ವತಿಯಿಂದ ಕನ್ಯಾನ ಭಾರತ್ ಸೇವಾಶ್ರಮ ನಿವಾಸಿಗಳೊಂದಿಗೆ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ದ.ಕ ಗ್ಯಾರೇಜ್ ಮಾಲಕರ ಸಂಘ ಮಂಗಳೂರು ಇವರು ಆಶ್ರಮಕ್ಕೆ ಕೊಡುಗೆಯಾಗಿ ನೀಡಿದ 200 ಸ್ಟೀಲ್ ಬಟ್ಟಲು ಮತ್ತು 1 ಕ್ವಿಂಟಾಲ್ ಅಕ್ಕಿಯನ್ನು ಹಾಗೂ ರವಿನಾರಾಯಣ ಬಲ್ಪ ಮಂಜಲಗಿರಿ ಇವರು ನೀಡಿದ ಮಿಕ್ಸಿಯನ್ನು ವಿಟ್ಲ ವಲಯದ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಮತ್ತು ಕಾರ್ಯದರ್ಶಿ ಪ್ರಕಾಶ್ ಅಣ್ಣಡ್ಕ ಆಶ್ರಮದ ಕಾರ್ಯದರ್ಶಿ ಈಶ್ವರ ಭಟ್ ಅವರಿಗೆ ಹಸ್ತಾಂತರಿಸಿದರು.

