ವಿಟ್ಲ: ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನೆರವು ಹಾಗೂ ಸದಸ್ಯರ ಗೌರವಧನದ ಮೂಲಕ 20 ಕಿಂಟ್ವಾಲ್ ಅಕ್ಕಿಯನ್ನು ಗ್ರಾಮದಲ್ಲಿ ಗುರುತಿಸಿದ ಸುಮಾರು 200 ಮನೆಗಳಿಗೆ ವಿತರಿಸುವ ಕಾರ್ಯಕ್ಕೆ ಸೋಮವಾರ ಕೇಪು ಸುಬ್ರಾಯ ದೇವಸ್ಥಾನದಲ್ಲಿ ಚಾಲನೆ ನೀಡಲಾಯಿತು.
ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ ಕುಕ್ಕೆಬೆಟ್ಟು, ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ ನೆಕ್ಕರೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಜಯಶ್ರೀ ಕೋಡಂದೂರು, ಗ್ರಾಮ ಪಂಚಾಯಿತಿ ಸದಸ್ಯರಾದ ಪುಷ್ಪಾಕರ ರೈ ಚೆಲ್ಲಡ್ಕ, ವಿಠಲ ನಾಯ್ಕ ಕೆ, ದಯಾನಂದ ಬಿ., ದಿವ್ಯ, ರೇಖಾ, ಶ್ರೀಲತಾ, ಮಾಲತಿ, ಎಂ. ಕೇಶವ ಉಪಾಧ್ಯಾಯ, ಶಶಿಕಲಾ ಕೆ., ಅಬ್ದುಲ್ ಕರೀಮ್ ಕೆ., ಹರೀಶ ಎನ್., ರತ್ನ, ನಿರಂಜನ, ಬಿಜೆಪಿ ದ ಕ ಜಿಲ್ಲಾ ರೈತ ಮೋರ್ಚಾ ಮಾಜಿ ಅಧ್ಯಕ್ಷ ರಾಜೀವ ಭಂಡಾರಿ, ಕ್ಷೇತ್ರ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಕೇಪು ಗ್ರಾಮ ಸಮಿತಿ ಅಧ್ಯಕ್ಷ ಪುರುಷೋತ್ತಮ ಕಲ್ಲಂಗಳ, ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಮತ್ತಿತರರು ಉಪಸ್ಥಿತರಿದ್ದರು.














