Thursday, June 26, 2025

*ಮಾಡರ್ನ್ ಕವನ* – *ಮಾತೆಯೊಂದಿಗೆ ಯುದ್ಧ*

ಪದೇ ಪದೇ
ತೊಂದರೆ ಕೊಟ್ಟಾಗಲೂ
ಸುಮ್ಮನಿದ್ದ ನಿಸರ್ಗ ಮಾತೆ
ಇಂದು ಯುದ್ಧಕ್ಕೆ ನಿಂತಳು..!

ಅದಾಗಲೇ ಶೀತಲ ಸಮರ ಏರ್ಪಟ್ಟಿತ್ತು..
ಆಗಾಗ ಅವಳು
ಯುದ್ಧ ಸಾರಿದ್ದಳು.
ಹೌದು ಅಲ್ಲಲ್ಲಿ
ಭೂಕಂಪ ,ಸುನಾಮಿ, ನೆರೆ, ಬಿರುಗಾಳಿ
ಹೀಗೆ ಹಲವು ರೀತಿಯಲ್ಲಿ
ಸಣ್ಣ ಪುಟ್ಟ ಯುದ್ಧ ಕೈ ಗೊಂಡಿದ್ದಳು.
ಸೋತರು ಮಾನವನಿಗೆ ಬುದ್ಧಿ ಬರಲಿಲ್ಲ..!

ನೆರೆ ಬಂದರೆ ನಗರದೊಳಗೆ
ನುಗ್ಗದಂತೆ ಮಾಡಿದನು..!
ಸುನಾಮಿಯ ತಡೆಯುವ ಗೋಡೆಯನ್ನೇ ಸೃಷ್ಟಿಸಿದನು..!
ಭೂಕಂಪಕ್ಕೆ ಅಲುಗಾಡದ ಕಟ್ಟಡವನ್ನೇ ಕಟ್ಟಿದನು..!
ಅಷ್ಟೇ ಅಲ್ಲ
ಭೂಕಂಪದ ಮುನ್ಸೂಚನೆ
ಸುನಾಮಿಯ ಕ್ಷಣ ಗಣನೆ
ಎಲ್ಲಾ ಮೊದಲೇ ತಿಳಿಯುತ್ತಿತ್ತು..!

ಈಗ ಮತ್ತೆ ಸಿಟ್ಟುಗೊಂಡಳು
ಆಮ್ಲಜನಕ ನಿಲ್ಲಿಸಿಬಿಟ್ಟಳು
ಕೆರೆ ಭಾವಿ ನದಿ ಸಿಹಿನೀರನ್ನೇ ಆವಿಯಾಗಿಸಿದಳು..!

ಇದು ಮೊದಲೇ ತಿಳಿದಿತ್ತು ಮಾನವನಿಗೆ..!
ಕೃತಕ ಆಮ್ಲಜನಕ ಸೃಷ್ಟಿಸಿದ್ದ
ಈಗ ಬೆನ್ನಿಗೊಂದು
ಆಮ್ಲಜನಕದ ಚೀಲ ಸಾಮಾನ್ಯವಾಗಿತ್ತು..!
ಸಮುದ್ರದ ನೀರನ್ನೇ ಸಿಹಿಯಾಗಿಸಿದ..!
ಸಮುದ್ರದಂಡೆಯಲ್ಲಿ ಅಲ್ಲಲ್ಲಿ ಸಿಹಿ ನೀರ ಕೇಂದ್ರಗಳು..!

ಅವಳು ಮತ್ತೆ ಸೋತಳು..!
ಗೆದ್ದೆನೆಂದು ಬೀಗಿದವನು ಮೊದಲೇ ಸೋತಿದ್ದ…!
ತಿಳಿಯಲಿಲ್ಲ ಅಷ್ಟೇ…

ಅವಳನ್ನು
ಪ್ರೀತಿಯಿಂದ ಗೆಲ್ಲಬಹುದಿತ್ತು..!

 

✍ಯತೀಶ್ ಕಾಮಾಜೆ

More from the blog

ವಿಟ್ಲ: ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ವಿಟ್ಲ ವರ್ತಕರ ಸಂಘದಿಂದ ತಯಾರಿಸಲಾದ ಪ್ಲಾಸ್ಟಿಕ್ ನಿಷೇಧದ ಸ್ಟಿಕ್ಕರ್ ನ್ನು ವರ್ತಕರ ಸಂಘದ ಸಹಕಾರದೊಂದಿಗೆ ವಿಟ್ಲ ಪೇಟೆಯ...

Installation Ceremony : ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ..

ಬಂಟ್ವಾಳ : ವಕೀಲರ ಸಂಘ (ರಿ ) ಬಂಟ್ವಾಳ ಇದರ 2025-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜೂ.26 ರಂದು ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ...

ಸತತ 3ನೇ ಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕೀರ್ತಿ ಆಯ್ಕೆ..

ವಿಟ್ಲ : ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಮನೆ ಶ್ರೀಮತಿ ವನಿತಾ ಲಕ್ಷ್ಮಣ ಗೌಡ ದಂಪತಿಯ ಪುತ್ರಿ ಕೀರ್ತಿ ಇವರು ಸತತ 3ನೇ ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಮಾದರಿ ಹಿರಿಯ ಪ್ರಾಥಮಿಕ...

Crop Insurance : ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಿಮಿಯಂ ಪ್ರಾರಂಭ..

ಬಂಟ್ವಾಳ : ಕರಾವಳಿಯ ದಕ್ಸಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಾಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ...