Wednesday, February 12, 2025

*ಮಾಡರ್ನ್ ಕವನ* – *ಮಾತೆಯೊಂದಿಗೆ ಯುದ್ಧ*

ಪದೇ ಪದೇ
ತೊಂದರೆ ಕೊಟ್ಟಾಗಲೂ
ಸುಮ್ಮನಿದ್ದ ನಿಸರ್ಗ ಮಾತೆ
ಇಂದು ಯುದ್ಧಕ್ಕೆ ನಿಂತಳು..!

ಅದಾಗಲೇ ಶೀತಲ ಸಮರ ಏರ್ಪಟ್ಟಿತ್ತು..
ಆಗಾಗ ಅವಳು
ಯುದ್ಧ ಸಾರಿದ್ದಳು.
ಹೌದು ಅಲ್ಲಲ್ಲಿ
ಭೂಕಂಪ ,ಸುನಾಮಿ, ನೆರೆ, ಬಿರುಗಾಳಿ
ಹೀಗೆ ಹಲವು ರೀತಿಯಲ್ಲಿ
ಸಣ್ಣ ಪುಟ್ಟ ಯುದ್ಧ ಕೈ ಗೊಂಡಿದ್ದಳು.
ಸೋತರು ಮಾನವನಿಗೆ ಬುದ್ಧಿ ಬರಲಿಲ್ಲ..!

ನೆರೆ ಬಂದರೆ ನಗರದೊಳಗೆ
ನುಗ್ಗದಂತೆ ಮಾಡಿದನು..!
ಸುನಾಮಿಯ ತಡೆಯುವ ಗೋಡೆಯನ್ನೇ ಸೃಷ್ಟಿಸಿದನು..!
ಭೂಕಂಪಕ್ಕೆ ಅಲುಗಾಡದ ಕಟ್ಟಡವನ್ನೇ ಕಟ್ಟಿದನು..!
ಅಷ್ಟೇ ಅಲ್ಲ
ಭೂಕಂಪದ ಮುನ್ಸೂಚನೆ
ಸುನಾಮಿಯ ಕ್ಷಣ ಗಣನೆ
ಎಲ್ಲಾ ಮೊದಲೇ ತಿಳಿಯುತ್ತಿತ್ತು..!

ಈಗ ಮತ್ತೆ ಸಿಟ್ಟುಗೊಂಡಳು
ಆಮ್ಲಜನಕ ನಿಲ್ಲಿಸಿಬಿಟ್ಟಳು
ಕೆರೆ ಭಾವಿ ನದಿ ಸಿಹಿನೀರನ್ನೇ ಆವಿಯಾಗಿಸಿದಳು..!

ಇದು ಮೊದಲೇ ತಿಳಿದಿತ್ತು ಮಾನವನಿಗೆ..!
ಕೃತಕ ಆಮ್ಲಜನಕ ಸೃಷ್ಟಿಸಿದ್ದ
ಈಗ ಬೆನ್ನಿಗೊಂದು
ಆಮ್ಲಜನಕದ ಚೀಲ ಸಾಮಾನ್ಯವಾಗಿತ್ತು..!
ಸಮುದ್ರದ ನೀರನ್ನೇ ಸಿಹಿಯಾಗಿಸಿದ..!
ಸಮುದ್ರದಂಡೆಯಲ್ಲಿ ಅಲ್ಲಲ್ಲಿ ಸಿಹಿ ನೀರ ಕೇಂದ್ರಗಳು..!

ಅವಳು ಮತ್ತೆ ಸೋತಳು..!
ಗೆದ್ದೆನೆಂದು ಬೀಗಿದವನು ಮೊದಲೇ ಸೋತಿದ್ದ…!
ತಿಳಿಯಲಿಲ್ಲ ಅಷ್ಟೇ…

ಅವಳನ್ನು
ಪ್ರೀತಿಯಿಂದ ಗೆಲ್ಲಬಹುದಿತ್ತು..!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...