Wednesday, February 4, 2026

*ಮಾಡರ್ನ್ ಕವನ*-*ವಾಸ್ತು ಪ್ರಕಾರ*

ವಾಸ್ತು ಶಾಸ್ತ್ರಜ್ಞ

ಹೇಳಿದಂತೆ

ಮನೆ ಕಟ್ಟಿಕೊಟ್ಟ

ಇಂಜಿನಿಯರ್…

 

ದೇವ ಮೂಲೆ

ಅಗ್ನಿಮೂಲೆ,ವಾಯುಮೂಲೆ

ಎಷ್ಟೊಂದು ಮೂಲೆಗಳು…

ಈಶಾನ್ಯದಲ್ಲಿ ಅಡುಗೆಕೋಣೆ

ವಾಯುವ್ಯದಲ್ಲಿ ಸ್ನಾನ ಗೃಹ

ಪೂರ್ವದಲ್ಲಿ ದೇವರ ಕೋಣೆ

ದಕ್ಷಿಣಕ್ಕೆ ಹಾಸಿಗೆ

ದಿಕ್ಕಿಗೊಂದು ಕೋಣೆ..

 

ಒಂದು ದಿಕ್ಕು ಹಣ ಹರಿದು ಬರಲು

ಇನ್ನೊಂದು ಸುಖ ನೆಮ್ಮದಿಗೆ

ಆರೋಗ್ಯಕ್ಕೂ ದಿಕ್ಕಿದೆ..

 

ಆದರೆ…

 

ಅಪ್ಪ ಬಂದಾಗ

ಮಗನ ಮುಖ

ಅಣ್ಣನ ಕಂಡಾಗ ತಮ್ಮನ ಮುಖ

ಅಕ್ಕನ ,ತಂಗಿಯ

ಅಮ್ಮನ,ಅತ್ತೆಯ, ಸೊಸೆಯ

ಮುಖಗಳು

ಒಬ್ಬರನ್ನೊಬ್ಬರು ಕಂಡಾಗ

ಒಂದೊಂದು ದಿಕ್ಕಿಗೆ ತಿರುಗುವುದು..

ಇದು ಕೂಡಾ ವಾಸ್ತು ಪ್ರಕಾರ

ಮನೆಯಲ್ಲಿ…

 

ಮನೆಯ ವಾಸ್ತು

ನೋಡುವ ಮೊದಲೊಮ್ಮೆ

ಮನೆಯವರ ವಾಸ್ತು

ನೋಡಬೇಕು..!

 

✍ಯತೀಶ್ ಕಾಮಾಜೆ

More from the blog

ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೊಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ ಇಲ್ಲ – ಸಿಪಿಐಎಂ

ಬೆಳ್ತಂಗಡಿ : ತಾಲೂಕಲ್ಲಿ ಅತ್ಯಾಚಾರ, ಕೊಲೆ, ಅಪಹರಣ, ದರೋಡೆ ಏನೇ ಆದರೂ ಪತ್ತೆಯಾಗದ ಪ್ರಕರಣಗಳಾಗುತ್ತಿರುವುದು ಸರಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಮತ್ತು ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೋಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...