Tuesday, February 3, 2026

*ಮಾಡರ್ನ್ ಕವನ* *ಹೋಟೆಲ್*

ಇಲ್ಲಿಗೆ ಹಸಿವಾದಾಗಲೇ

ಬರಬೇಕೆಂದಿಲ್ಲ..

ಟೈಮ್ ಪಾಸ್ ಗು

ಬೈ ಟು ಕಾಫಿ ಕುಡಿಯಲೂ

ಬರಬಹುದು..

 

ಅತ್ತ ಫ್ಯಾಮಿಲಿ ರೂಮ್..

ಇತ್ತ ಇರುವುದು ಸಿಂಗಲ್ ಗೆ ಎಂದೇನಿಲ್ಲ..

ಎಲ್ಲಿ ಬೇಕಾದರೂ ಯಾರ ಜೊತೆಯಾದರೂ

ಕೂರಬಹುದು..

ಹಸಿವಾದವರು..

ಏನಾದರು ತಿನ್ನುವ ಅಂದು ಕೊಂಡವರು

ಯಾರು ಬೇಕಾದರೂ

ಒಳ ಬರಬಹುದು

ರೊಕ್ಕ ಇರಬೇಕಷ್ಟೇ..

 

ಜಾತಿ,ಧರ್ಮ ತೋರಿಸಿ

ಒಳ ಬರಬೇಕಿಲ್ಲ…

ಹಸಿವು ಕೂಡಾ ಹಾಗೆ ಅಲ್ಲವೇ..

 

ಸಂತೃಪ್ತಿಯಲ್ಲಿ

ತಿನ್ನುವವರ ಮಧ್ಯೆ

ಯಾರೋ ಒಬ್ಬ ಅತೃಪ್ತಿಯಲ್ಲಿ

ತಿನ್ನುತ್ತಿರಬಹುದು..

ಅಥವಾ ಇದಕ್ಕೆ ವಿರುದ್ಧವಾಗಿಯೂ

ಇರಬಹುದು..

ಹಸಿವ ನೀಗಿಸಲು ಬೇಕಾದಷ್ಟು

ದುಡ್ಡಿಲ್ಲದೆ

ಒಂದು ಕಾಫಿಗೆ ಮೊರೆ ಹೋಗಿರಬಹುದು

ಹಸಿವೆ ಇಲ್ಲದೆ ದುಡ್ಡಿದ್ದು

ಸಮಯ ಮುಂದೂಡಲು

ಅದೇ ಕಾಫಿಗೆ ಆರ್ಡರ್

ಮಾಡಿರಬಹುದು..

ಅಥವಾ ಚಟಕ್ಕೂ ಆಗಿರಬಹುದು..

ಒಟ್ಟಾರೆ

ಕಿಸೆಯಲ್ಲೆಸ್ಟಿದೆಯೋ

ಅಷ್ಟೇ ಹೊಟ್ಟೆ ತುಂಬಿಸಬಹುದು..

 

ಇದು ಹೊಟ್ಟೆ

ತುಂಬಿಸುವ ಹೋಟೆಲ್..

ಇಲ್ಲಿ ಕಾಸಿದ್ದರೆ ಮಾಲ್..

✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...