Wednesday, January 28, 2026

*ಮಾಡರ್ನ್ ಕವನ* *ಮುಕ್ತನಾಗುವುದು ಯಾವಾಗ.?*

ಹುಟ್ಟಿದಾಗಿನ

ಸಂಭ್ರಮ

ಸಾವಿನಲ್ಲೂ ಹುಟ್ಟಬೇಕಿತ್ತು..!

 

ಮಗ ಹುಟ್ಟಿದ ಖುಷಿಗೆ

ಊರೆಲ್ಲ ಲಡ್ಡು

ಹಂಚಿದ ಅಪ್ಪ…

ಅವ್ವನೂ ಅಷ್ಟೇ

ಎದ್ದು ಓಡಾಡಲಾಗದಿದ್ದರೂ

ಆಗಾಗ ಪುಟ್ಟ ಮಗುವ

ತಲೆ ಸವರುತ್ತಲೇ

ಊರೇನು ಲೋಕವೇ

ಸುತ್ತಿ ಬಂದಿರುತ್ತಾಳೆ…!

 

ಅವತ್ತು ಮನೆಗೆ ಸಿಂಗಾರ,

ಅಡುಗೆ ಮನೆಯಲ್ಲಿ ಸಡಗರ,

ಮನಸ್ಸಂತು ವಿಶಾಲ ಸಾಗರ..!

 

ಸತ್ತಾಗ ಇಷ್ಟೇ ಸಂಭ್ರಮ ಯಾಕಿಲ್ಲ..!?

ಬಿಗಿದ ಮುಖ

ನೀರು ಸುರಿಸುವ ಕಣ್ಣು

ಮಾತಾಡಲಾಗದ ನಾಲಿಗೆ

ಹೆಜ್ಜೆ ಇಡಲಾಗದ ಕಾಲು..

ಎಲ್ಲಾ ಭಾರ ಭಾರ..!

 

ಹುಟ್ಟಿದಾಗಲೇ

ಸಾವು ಬೆನ್ನಿಗೆ ಅಂಟಿಕೊಂಡದ್ದು

ತಿಳಿದಿದೆಯಲ್ಲವೇ..?

ಸಾವೆನ್ನುವುದು

ಜೀವನದ ಸುಖ-ದುಃಖಕ್ಕೆ

ಮುಕ್ತಿಯಲ್ಲವೇ..?

ಕ್ಷಣಿಕ ನಿದ್ದೆಯ ಬಿಟ್ಟು

ಚಿರ ನಿದ್ದೆಗೆ ಜಾರುವುದು

ಒಂದು ಯೋಗವಲ್ಲವೇ..

ಇವೆಲ್ಲವನ್ನೂ ತಿಳಿದು ತಿಳಿದು

ಸಂಭ್ರಮಿಸಲಾಗದೇ..!?

 

ಹುಟ್ಟು ಮತ್ತು ಸಾವನ್ನು

ಒಂದೇ ರೀತಿ ಸ್ವೀಕರಿಸುವುದು

ಯಾವಾಗ..?

ಯಾವುದರಿಂದ ಮುಕ್ತನಾದಾಗ..!?

 

ಯತೀಶ್ ಕಾಮಾಜೆ

More from the blog

ಒಡಿಯೂರಿನಲ್ಲಿ ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಭಾರತ ವಿಶ್ವದ ಉಸಿರಾಗಿದ್ದು, ಯಾವ ಸೆಳೆತಕ್ಕೂ ಒಳಗಾಗಿಲ್ಲ. ವಂದೇ ಮಾತರಂ ಗೀತೆಗೆ ರಾಷ್ಟ್ರಭಕ್ತಿ ಉದ್ದೀಪಿಸುವ ಶಕ್ತಿಯಿದೆ. ಭಾಷೆ ಸಂಸ್ಕೃತಿ ಬಹಳ ದೊಡ್ಡದಾಗಿದ್ದು, ಇದರ ಉಳಿವಿಗೆ ಒಗ್ಗಟ್ಟಾಗುವ ಅಗತ್ಯವಿದೆ. ವಿಶ್ವ ವಿದ್ಯಾಲಯಗಳಲ್ಲಿ ತುಳು...

ವಿದ್ಯಾರ್ಜನೆ ಪಡೆದ ಸಂಸ್ಥೆಗೆ ನೀಡುವ ಸಹಾಯಸ್ತ ದೇವತಾ ಕಾರ್ಯಕ್ಕೆ ಸಮಾನ : ಪ್ರಭಾಕರ ಪ್ರಭು

ಬಂಟ್ವಾಳ : ಬಾಲ್ಯದಲ್ಲಿ ಬಾಹ್ಯ ಪ್ರಪಂಚದಲ್ಲಿನ ಆಗುಹೋಗುಗಳ ಬಗ್ಗೆ ಪರಿಚಯಿಸಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷನವನ್ನು ನೀಡುತ್ತಿರುವ ಅಂಗನವಾಡಿಗಳ ಮೂಲಭೂತ ಸೌಕರ್ಯಗಳಿಗೆ ನೀಡುವ ಸಹಾಯಸ್ತಾವು ದೇವತಾ ಕಾರ್ಯಕ್ಕೆ ಸಮಾನವಾಗಿರುತ್ತದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ...

ಮಣಿಹಳ್ಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಆಶ್ರಯದಲ್ಲಿ ಎಳ್ಳು ಗಂಟು ದೀಪೋತ್ಸವ..

ಬಂಟ್ವಾಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಆಶ್ರಯದಲ್ಲಿ ವಿಶ್ವ ಶಾಂತಿಗಾಗಿ, ಲೋಕ ಕಲ್ಯಾಣಾರ್ಥವಾಗಿ, ಶನಿದೋಷ ಪರಿಹಾರಕ್ಕಾಗಿ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಜ. 24ರಂದು ಶನಿವಾರ ನಡೆದ ಸತತ 14...

ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಉಪಟಳ : ದಾಳಿಗೆ ನಾಯಿ, ಕಾಡುಹಂದಿ ಬಲಿ

ಬಂಟ್ವಾಳ : ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ. ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಪು ಬಣ್ಣದ...