Saturday, January 31, 2026

*ಮಾಡರ್ನ್ ಕವನ* – ನಾಲಗೆ

ಒಂದು ಅಲ್ಲ

ಎರಡು ಅನ್ನುವುದು

ಕೂಡಾ ಸುಳ್ಳು

ಒಬ್ಬನಿಗೆ ನೂರಾರು..

 

ಆಗ ಮಾತಾಡಿದ್ದು

ಈಗ ಮಾತಾಡಿದ್ದು

ಬೇರೆ ಬೇರೆಯೇ

ನಿನ್ನೆ ಹೇಳಿದ್ದು

ಇವತ್ತು ಅಂದದ್ದು

ಅದೂ ಬೇರೆ ಬೇರೆಯೇ

ನಾಳೆಯ ಕಥೆಯೂ ಬೇರೆ..

 

ನಾನು ನಿಂತ ದಿಕ್ಕು

ಆ ಸಮಯ

ನನ್ನಿಂದ ಎಂತಹ ಮಾತನ್ನು

ಆಡಿಸಬಹುದು..

ಸತ್ಯ ಅಂದದ್ದೇ ಸುಳ್ಳಾಗಿರಬಹುದು.,

ಸುಳ್ಳೇ ಸತ್ಯವಾಗಿರಬಹುದು..

ಕೇಳಿದ್ದೊಂದು, ಆಡಿದ್ದೊಂದು.

ನಾಲಗೆ ಹೇಗೆ ಬೇಕಾದರೂ

ತಿರುಗುವುದು..!?

 

ನಗಿಸುವುದು

ಅಳಿಸುವುದು

ಪ್ರೇರೇಪಿಸಿವುದು

ಎಲ್ಲಾ ತಿಳಿದಿದೆ..

ಬಣ್ಣ ಹಚ್ಚಿದ್ದು,

ದ್ವೇಷ ಹುಟ್ಟಿಸಿದ್ದು,

ಮೋಸ,ಪ್ರೀತಿ

ಎಲ್ಲಾ ಇದೇ ನಾಲಗೆಯಲ್ಲಿ

 

ಬಿಡಿ

ಇದು ಮುಗಿಯದ ಕಥೆ

ಎಲುಬಿಲ್ಲದ ನಾಲಗೆ..!

ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...