Friday, July 4, 2025

*ಮಾಡರ್ನ್ ಕವನ* *ದಡ್ಡನಾಗಬೇಕು*

ಬುದ್ಧಿವಂತಿಕೆ
ಜಾಸ್ತಿಯಾಗಿ ಎಲ್ಲವನ್ನೂ
ಸೃಷ್ಟಿ ಮಾಡಲಾಗುತ್ತಿದೆ
ನೆಮ್ಮದಿಗಾಗಿ ಹುಡುಕಾಟ ನಡೆಯುತ್ತಲೇ ಇದೆ…!

ಅವನು ಇವನು ನಾನು
ಶ್ರೇಷ್ಠನಾರೆನ್ನುವ ಸಂಶೋಧನೆ
ಚಪ್ಪಾಳೆ ಗಿಟ್ಟಿಸಿ
ಬೆನ್ನುತಟ್ಟಿದಾಗ ಉಬ್ಬಿ ಹೋಗುವುದು
ಬುದ್ಧಿವಂತ ನೆಂಬ ಭ್ರಮೆಯಲ್ಲಿ..!

ದ್ವೇಷ ಹೆಚ್ಚಿದಂತೆ
ಶಕ್ತಿ ತೋರಿಸುವ ತವಕ
ಕೈಯಲ್ಲಿ ಮಾಡಿದ ಬಾಂಬಿನಿಂದ
ಕೈ ಮುಟ್ಟದೆ ಬಾಂಬ್ ತಯಾರಿಸಿದ್ದು
ಬಲವಾಗಿ ಎಸೆದ ಬಾಂಬ್ ನಿಂದ
ಸಾವಿರ ಕಿಲೋಮೀಟರ್ ಸ್ವಶಕ್ತಿಯಿಂದ ಸಾಗಿದ್ದು
ಶತ್ರು ಸತ್ತು ಸೋತಾಗ
ಗೆದ್ದೆನೆಂದು ಬೀಗಿದರಲ್ಲೆ
ಸಂತೋಷ ಇರುವುದೆಂದು ಕೊಂಡದ್ದು
ಎಲ್ಲಾವೂ ಬುದ್ಧಿವಂತನಾದ ಮೇಲೆ

ಆ ಯುನಿವರ್ಸಿಟಿ ಈ ಯುನಿವರ್ಸಿಟಿ
ಎಲ್ಲಾ ಬುದ್ಧಿವಂತಾನಾಗಿಸಲು
ಕಲಿತ ಪಾಠ ಜೇಬು ತುಂಬಿಸಲು ಹೇಳಿತು
ಜೀವನದ ಪಾಠಗಳೇ ಬೇರೆ ಇತ್ತು
ತಿಳಿಯುವ ವೇಳೆಗೆ ಮರಣ ಅಪ್ಪಿತ್ತು

ದಡ್ಡನಾಗಿರಬೇಕಿತ್ತು
ಬೆಂಕಿಗೂ ಹೂವಿಗೂ ವ್ಯತ್ಯಾಸ
ಗೊತ್ತಿರಬಾರದಿತ್ತು
ಮುಟ್ಟಿದ್ದಾಗಲೇ ಅನುಭವ ಆಗಬೇಕಿತ್ತು..!

ನಕ್ಕಾಗ ನಕ್ಕು
ಅತ್ತಾಗ ಅತ್ತು
ಬೇಕೆಂದಾಗ ಕುಣಿದು
ಲೋಕದ ಅರಿವಿಲ್ಲದೆ ಮಲಗಬೇಕು
ದ್ವೇಷಕ್ಕೆ ನೆನಪುಗಳಿರಬಾರದು
ಆಸೆಗೆ ನಿರಾಸೆಗಳಿರಬಾರದು
ನನ್ನದು, ನಾನು ಎನ್ನುವ ಅಹಂಗಳಿರಬಾರದು
ತನ್ನದೆ ಜೊಲ್ಲನ್ನು ತಾನೇ ತೆಗೆಯುವಷ್ಟು
ಯೋಚನೆಗಳಿರಬಾರದು…!

ಹೌದು ದಡ್ಡನಾಗಿರಬೇಕಿತ್ತು
ಮುಗ್ಧನಾಗಿರಬೇಕಿತ್ತು…!!?

 

✍ಯತೀಶ್ ಕಾಮಾಜೆ

More from the blog

ಬ್ರೋಕರ್ ಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ: ಬೇಬಿ ಕುಂದರ್….

ಬಂಟ್ವಾಳ : ಬ್ರೋಕರ್ ಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಜನರ ಸಮಸ್ಯೆ ಪರಿಹಾರ ಮಾಡುತ್ತೇನೆ, ಭ್ರಷ್ಟಾಚಾರ ರಹಿತ ಕೆಲಸಕ್ಕೆ ಒತ್ತು ನೀಡುವುದಾಗಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ‌ಕುಂದರ್ ತಿಳಿಸಿದ್ದಾರೆ. ನಗರ ಯೋಜನಾ ಪ್ರಾಧಿಕಾರದ...

ಅನಂತಾಡಿ : ಸ್ವಚ್ಛತಾ ನೌಕರರಿಗೆ ಸ್ವಚ್ಛತಾ ಪರಿಕಾರ ಸಮೇತ ಸಮವಸ್ತ್ರ,’ಸ್ವಚ್ಛ ಸಖಿ’ ನಾಮಕರಣ..

ಬಂಟ್ವಾಳ : ಅನಂತಾಡಿ ಗ್ರಾಮ ಪಂಚಾಯತ್ ನ ಘನ ತ್ಯಾಜ್ಯ ಘಟಕದ ಸ್ವಚ್ಛತಾ ಸಿಬ್ಬಂದಿಗಳಿಗೆ ಸ್ವಚ್ಛತಾ ಪರಿಕಾರ ಸಮೇತ ಸಮವಸ್ತ್ರ ವಿತರಿಸಿ "ಸ್ವಚ್ಛಸಖಿ" ಎಂದು ನಾಮಕರಣ ಮಾಡುವ ಬ್ರಾಂಡಿಂಗ್ ಕಾರ್ಯಕ್ರಮ ಜು. 4ರಂದು...

ದ. ಕ ಜಿಲ್ಲೆಯಲ್ಲಿ ಆ್ಯಂಟಿ ಕಮ್ಯೂನಲ್ ಫೋರ್ಸ್ ರಚನೆ – ಸಿಎಂಗೆ ಬಿ. ರಮಾನಾಥ ರೈ ಅಭಿನಂದನೆ..

ಬೆಂಗಳೂರು :  ದ.ಕ.ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆದ ಸರಣಿ ಕೊಲೆಗಳು ಮತೀಯ ಸಂಘರ್ಷಣೆಗಳನ್ನು ಮಟ್ಟ ಹಾಕುವ ಸಲುವಾಗಿ ಕರ್ನಾಟಕ ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ದ.ಕ.ಜಿಲ್ಲೆಯಲ್ಲಿ ಆ್ಯಂಟಿ ಕಮ್ಯೂನಲ್...

ಅಡಿಕೆ ವ್ಯಾಪಾರಿಯಿಂದ ವಂಚನೆ ಪ್ರಕರಣ  : ನ್ಯಾಯಕ್ಕಾಗಿ ಶಾಸಕ ರಾಜೇಶ್ ನಾಯ್ಕ್ ಗೆ ಮನವಿ

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ನ್ಯಾಯಕ್ಕಾಗಿ ಶಾಸಕ ರಾಜೇಶ್ ನಾಯ್ಕ್ ಅವರನ್ನು ಬೇಟಿಯಾಗಿ ಮನವಿ ನೀಡಿದ್ದಾರೆ. ಬಳಿಕ...