Monday, February 2, 2026

ಮಾಡರ್ನ್ ಕವನ- ಹಗಲಾಗದಿದ್ದರೆ

ರಾತ್ರಿ ಹಗಲಾಗಲಿಲ್ಲ
ಹಾಗೆ ಮುಸುಕು
ಹಾಕಿ ಮಲಗಿದ್ದು
ಎಚ್ಚರವಾಗಲೂ ಇಲ್ಲ..!

ಹಿಂದಿನ ನೋವುಗಳ
ಪಾಠವಾಗಿಸಿ
ನಾಳೆಗಳ ನೆನೆಯುತ್ತ
ಮಲಗಿದ್ದು ಖಾಲಿ ಹೊಟ್ಟೆಗೆ
ನಿದ್ದೆಯ ಕಟ್ಟಿ…

ಬರೀ ಕನಸುಗಳು
ಇಲ್ಲದನ್ನು ಇದೆಯೆಂದು ಭಾವಿಸಿ
ಮೂರು ಹೊತ್ತು ಬಿರಿಯಾನಿ ತಿಂದಂತೆ
ಕೈಗೊಂದು ಕಾಲಿಗೊಂದು ಆಳಿದ್ದಂತೆ
ಮೈಸೂರು ಪ್ಯಾಲೇಸ್ ನಂತ ಮನೆಯ ಮುಂದೆ
ಆಡಿ ಫೆರಾರಿಯಂತ ಕಾರು..!

ಮುಗಿಯದ ಮುಗಿಲೆತ್ತರದ ಆಸೆಗಳಿಗೆ
ಕನಸೊಂದು ಸಹಕಾರ ನೀಡುತ್ತಿತ್ತು.
ಕನಸ ಬೆನ್ನತ್ತಿ ಹೋದವನಿಗೆ
ನಿದ್ದೆಯ ಮೊರೆ ಹೋಗುವುದೇ
ಖುಷಿ ಎನಿಸಿತು..

ಬಾರದಿರಲಿ ಹಗಲೊಂದು
ಕನಸುಗಳ ಕಟ್ಟುವ ರಾತ್ರಿಗೆ
ಹಸಿವು ಮರೆತು ಹೋಗಲಿ
ಕಣ್ಣಿಗೆ ಕತ್ತಲೆಯೊಂದೇ ಉಳಿಯಲಿ….

 

✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...