Thursday, July 10, 2025

*ಮಾಡರ್ನ್ ಕವನ* *ಬೆಲೆ*

ಕೊನೆಗೂ
ಅವಳಿಗೆ ಡೈವೋರ್ಸ್ ಕೊಡಲೇಬೇಕಾಯಿತು.,
ಜೊತೆಗೆ ಜೀವನಾಂಶ..!

ಕೋರ್ಟ್ ತೀರ್ಪು ನೀಡಿತು;
‘ಇಬ್ಬರು ಮಕ್ಕಳಲ್ಲಿ
ಮಗ ನನ್ನ ಜೊತೆಗೆ
ಮಗಳು ಅವಳೊಂದಿಗೆ’.
ಸಮಪಾಲು ಮಾಡಿ ಹಂಚಿತು.
ಆಸ್ತಿಯಲ್ಲೂ ಅಷ್ಟೇ
ಇಂತಿಷ್ಟು ಭಾಗ ನೀಡಲೇ ಬೇಕೆಂದಿತು.

ಅವಳಿಗೆ
ಚಂದ್ರನ ಮೇಲಿನ ಸೈಟ್ ಬೇಕಂತೆ,
ಅದು ಕೊಟ್ಟರೆ
ಬೇರೆ ಕೋಟಿ ಬೇಡಂತೆ..!
ಆಗಲೇ ನೆನಪಾದದ್ದು
ಮದುವೆ ಆಗುವ ಮುನ್ನ
ಪಾರಿಜಾತ ಹೂವಿಗೆ ತೃಪ್ತಿ ಪಟ್ಟದ್ದು..
ಆ ಖುಷಿಯಲ್ಲಿ ನಾ ‘ನೀ ಚಂದ್ರನ ಬೇಕಾದರೆ
ಕೇಳು ಅಂದದ್ದು’..!

ಮನೆ ಕಟ್ಟಲಾಗದ ಸೈಟ್ ಅದು.
ಆದರೂ ಪ್ರತಿಷ್ಠೆಗೆ ಪರ್ಚೇಸ್ ಮಾಡಿದ್ದು,
ಚಂದ್ರನ ಮೇಲೆ ಸೈಟ್ ಇದ್ದವರಲ್ಲಿ
ನಾ ನೂರನೆಯವನು..
ಈಗ ಕಳೆದು ಕೊಳ್ಳುವ ಸ್ಥಿತಿಯಲ್ಲಿರುವವನು.!

‘ನೀನೇ ಇಂದ್ರ ,ಚಂದ್ರ’
ಅಂದವಳಿಗೆ ನಿಜ ಚಂದ್ರನೇ ಬೇಕು.
ನಾನು ಬೇಡ..
‘ಚಂದ್ರನನ್ನೇ ನಿನ್ನ ಕಾಲ ಮುಂದೆ
ನಿಲ್ಲಿಸುವೆ’ ಅಂದವನಿಗೆ
ಅವಳು ಬೇಡ..!

ಒಮ್ಮೊಮ್ಮೆ ಹೀಗೆ
ಜೀವ ಇಲ್ಲದ ವಸ್ತುವಿಗೆ ಬೆಲೆ ಇದ್ದಷ್ಟು
ಹೃದಯಕ್ಕಿಲ್ಲ…!

✍ಯತೀಶ್ ಕಾಮಾಜೆ

More from the blog

ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ತೊಂದರೆ : ಸಮಸ್ಯೆ ಬಗೆಹರಿಸಲು ಬಿ.ಎಂ.ಎಸ್ ಮನವಿ 

ಬಂಟ್ವಾಳ: ರಾಜ್ಯ ಸರಕಾರವು ಸ್ಪಷ್ಟ ಕಾನೂನು ರೂಪಿಸದ ಪರಿಣಾಮ ಪ್ರಸ್ತುತ ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಕುಟುಂಬ ಪೋಷಣೆ ಕಷ್ಟವಾಗಿದೆ. ಸಾಲದ ಕಂತು ಪಾವತಿಸುವುದು ಕೂಡ ಸವಾಲಾಗಿದ್ದು, ಶಾಲಾರಂಭದಲ್ಲೇ ಇಂತಹ ಸಮಸ್ಯೆಯಿಂದ...

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...

Government Hospital : ಸರಕಾರಿ ಆಸ್ಪತ್ರೆಯ ಆವರಣದೊಳಗೆ ಅನಧಿಕೃತವಾಗಿ ವಾಹನಗಳ ಪಾರ್ಕ್ – ರೋಗಿಗಳಿಗೆ ತೊಂದರೆ..

ಬಂಟ್ವಾಳ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಅವರಣದ ಒಳಗೆ ರಿಕ್ಷಾ ಸಹಿತ ಇತರೆ ವಾಹನಗಳನ್ನು ‌ಅನಧಿಕೃತವಾಗಿ ಪಾರ್ಕ್ ಮಾಡಲಾಗಿ ಹೋಗುತ್ತಾರೆ, ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಹಿತ ಅಂಬ್ಯುಲೆನ್ಸ್ ವಾಹನಗಳಿಗೆ ಸಂಚಾರಕ್ಕೆ ತೊಡಕುಂಟಾಗಿದೆ ಎಂಬ‌...

ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ, ಹಲ್ಲೆ: ಎರಡು ಪ್ರಕರಣ ದಾಖಲು..

ಬಂಟ್ವಾಳ: ಪಿಕಪ್ ವಾಹನದಲ್ಲಿ ಕೂಡಿ ಹಾಕಿ ಸುಮಾರು ಐದು ಜಾನುವಾರುಗಳನ್ನು ಸಾಗಾಟ ಮಾಡಿದ ಪರಿಣಾಮ ಕರು ಸತ್ತಿದೆ ಎಂಬ ಆರೋಪದ ಮೇಲೆ ಹಾಗೂ ಜಾನುವಾರು ಸಾಗಾಟ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ...