Thursday, February 13, 2025

*ಮಾಡರ್ನ್ ಕವನ*-*ಮಾತ್ರೆ*

ಮಾನವ ಉಸಿರು ಬಿಡಲು
ತಯಾರಿರಲಿಲ್ಲ
ಬದುಕುವ ಆಸೆ ಬರಗಾಲದಲ್ಲೂ
ಚಿಗುರುತ್ತಿತ್ತು..!

ಪ್ರಪಂಚದಾದ್ಯಂತ ಬರಗಾಲ..
ನೀರು ಆವಿಯಾಗಿ ಹೋಗಿದೆ.
ಮಣ್ಣು ಫಲವತ್ತತೆ ಕಳೆದು ಕೊಂಡಿದೆ.
ಮಳೆ ನೋಡದೆ ಭೂಮಿ ವರುಷಗಳೇ ಕಳೆದಿದೆ
ಮರ ಗಿಡಗಳು ಉಸಿರು ನಿಲ್ಲಿಸಿದೆ..!

ಕೃತಕ ಗಾಳಿಯಿಂದ ಉಸಿರಾಟ
ಅಳಿದುಳಿದ ಧಾನ್ಯದ ಮಾರಾಟ
ಅವ ಸಾಫ್ಟ್‌ವೇರ್ ಇವ ಹಾರ್ಡವೇರ್
ಅವಳು ಡಾಕ್ಟರ್ ಇವಳು ಟೀಚರ್
ಎಲ್ಲೂ ಇಲ್ಲ ಫಾರ್ಮರ್..!

ಈಗಲೇ ಹಸಿವಿಗೊಂದು ಮಾತ್ರೆ
ಬಾಯಾರಿಕೆಗೊಂದು ಮಾತ್ರೆ
ಕಂಡು ಹಿಡಿಯಲೇ ಬೇಕಾದದ್ದು,
ಕಂಡು ಹಿಡಿದದ್ದು..!
ಒಂದು ಮಾತ್ರೆ ತಿಂದರೆ ಆ ದಿನ
ಹಸಿವಿಲ್ಲ
ಅದು ಹಸಿವನ ಮಾತ್ರೆ
ಇನ್ನೊಂದು ಬಾಯಾರಿಕೆಯಿಂದ ಸೋತ್ರೆ ತಿಂದರಾಯ್ತು
ಆ ದಿನ ಬಾಯಾರಿಕೆ ಇಲ್ಲ..!

ಮಾರುಕಟ್ಟೆ ಹೋಗಿ
ಯಾವ ತರಕಾರಿ ಬೇಕು,
ಇವತ್ತೇನು ಅಡಿಗೆ
ಚಿಂತಿಸಬೇಕಿಲ್ಲ..!
ಹೊಟೇಲ್ ಗೆ ಹೋಗಿ
ಏನ್ ಆರ್ಡರ್ ಮಾಡೋದು,
ನಿಂಗೇನಿಷ್ಟ,
ವೆಜ್-ನಾನ್‌ವೆಜ್ ಏನು ಬೇಕು
ಏನು ಕೇಳುವ ಹಾಗಿಲ್ಲ..!
“ಹಸಿವನ ಮಾತ್ರೆ ಕೊಡಿ…”
ಕೇಳಿದರಾಯ್ತು
“ಹೆಚ್ಚೆಂದರೆ ಯಾವ ಫ್ಲೇವರ್ ಎಂದು ಕೇಳಬಹುದಷ್ಟೆ..!

ಹಾಟ್ ಆರ್ ಕೂಲ್ ಡ್ರಿಂಕ್ಸ್ ಯಾವುದು..?
ಸಾಫ್ಟ್ ಡ್ರಿಂಕ್ಸ್ ಇದ್ಯಾ,
ಏನ್ ಜ್ಯೂಸ್,
ಏನು ಬೇಡ
ಒಂದು ಬಾಟಲ್ ಪೂರಿಫೈಡ್ ನೀರು ಸಾಕು..
ಹೇಳುವಂತಿಲ್ಲ
ದಾಹಕ್ಕೆ ಒಂದೇ ಮಾತ್ರೆ
ಹೆಚ್ಚೆಂದರೆ ಕಂಪೆನಿ ಕೇಳಬಹುದಷ್ಟೇ..!

ತಟ್ಟೆಯ ಅನ್ನ
ಮಾತ್ರೆಯಾಗುವ ಮುನ್ನ..
ಹೊರಬಂದುಬಿಡಿ ಕಲ್ಪನೆಯ ಶ್ರೀಮಂತಿಕೆಯಿಂದ..!

✍ ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...