Thursday, February 5, 2026

*ಮಾಡರ್ನ್ ಕವನ* – *ಆಕರ್ಷಣೆ*

ಇದ್ದಕ್ಕಿದ್ದಂತೆ ಭೂಮಿ
ತನ್ನ ಗುರುತ್ವಾಕರ್ಷಣೆ
ಕಳೆದುಕೊಂಡಿತು….!

ರಸ್ತೆಯಲ್ಲಿ ಹೋಗುತ್ತಿದ್ದ ಸಾವಿರಾರು ವಾಹನಗಳು
ಅಲ್ಲಲ್ಲಿ ಬಿದ್ದ ಕಸ ಕಡ್ಡಿಗಳು
ಕನಸುಗಳೆಂದು ಕಟ್ಟಿದ ಮನೆಗಳು
ನೂರಾರು ಉಪಕರಣಗಳು
ಮನುಷ್ಯನ ಆಹಾರಗಳು
ಹರಿಯುತ್ತಿದ್ದ ನೀರು
ಅಷ್ಟೇ ಯಾಕೆ ಮನುಷ್ಯ ಮತ್ತು ಪ್ರಾಣಿಗಳು
ಎಲ್ಲಾ ತೇಲಿಕೊಂಡವು…!

ವಸ್ತುಗಳು
ಒಂದಕ್ಕೊಂದು ಡಿಕ್ಕಿ ಒಡೆಯುತ
ಮತ್ತೆ ಚೂರುಗಳಾಗಿ
ತೇಲುತ್ತಿದ್ದವು
ಪ್ರಾಣಿಗಳು ಚೀರಾಡುತ್ತಿದ್ದವು
ಮಾನವ ಹೊಸ ಸಮಸ್ಯೆಗೆ
ಭಯಗೊಂಡ..
ಯಾವುದೂ ಮನುಷ್ಯನ ಹಿಡಿತದಲ್ಲಿ ಇರಲಿಲ್ಲ..!

ನನ್ನದು ನನ್ನದು ಎಂದು
ಕೂಡಿಟ್ಟ ಆಸ್ತಿಗಳು
ಅವರಿವರ ತಲೆ ಹೊಡೆದು
ಮಾಡಿದ ಗಂಟುಗಳು
ಊರೆಲ್ಲ ಮಾಡಿಟ್ಟ ಹೆಸರು
ಯಾವುದು ಸಹಾಯಕ್ಕೆ ಬರುತ್ತಿರಲಿಲ್ಲ…!

ಮನುಷ್ಯ ತೆಲಾಡಿ ಒಬ್ಬರ ಕೈ ಒಬ್ಬರು
ಹಿಡಿದು ಎಲ್ಲಾ
ಜೊತೆಯಾದರು..
ಸಮಸ್ಯೆಯ ಅವಲೋಕನೆ, ಚರ್ಚೆ
ಹೀಗೆ ಎಲ್ಲಾ ನಡೆಯಿತು
ಪರಿಹಾರ ಇಲ್ಲ..
ಸೈಂಟಿಸ್ಟ್ ಇದಕ್ಕೆಲ್ಲ ಕಾರಣ ನಾವೇ ಎಂದ..!
ಭೂಮಿಯ ಬಳಸಿದ ರೀತಿಯೇ ತಪ್ಪೆಂದ
ಯಾವ ದೇವರಿಗೂ ಪರಿಹರಿಸಲಾಗದೆಂದು ತಿಳಿದಿದ್ದ..!

ಸತ್ಯ ತಿಳಿಯುವ ಹೊತ್ತಿಗೆ
ಪ್ರಾಣಿಗಳ ಜೊತೆ ಮನುಷ್ಯನು
ಆಹಾರ ತಯಾರಿಸಲಾಗದೆ
ಸತ್ತು ಹೋದನು
ಸತ್ತರೂ ತೇಲುತ್ತಿದ್ದನು..!
ಭೂಮಿಯು ಚಂದ್ರನಂತೆ
ಜೀವಿಗಳೇ ಇಲ್ಲದೆ ಬರಡಾಯಿತು..!

ಆದರೆ
ಭೂಮಿಯೊಳಗೆ ಅದೆಷ್ಟೋ
ಕಸ ಕಡ್ಡಿಗಳು ತೇಲುತ್ತಿತ್ತು…!
ಆ ಕಸ ಕಡ್ಡಿಗಳಲ್ಲಿ ಮಾನವನ ದೇಹವೂ ಒಂದು..!

 

✍ಯತೀಶ್ ಕಾಮಾಜೆ

More from the blog

ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೊಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ ಇಲ್ಲ – ಸಿಪಿಐಎಂ

ಬೆಳ್ತಂಗಡಿ : ತಾಲೂಕಲ್ಲಿ ಅತ್ಯಾಚಾರ, ಕೊಲೆ, ಅಪಹರಣ, ದರೋಡೆ ಏನೇ ಆದರೂ ಪತ್ತೆಯಾಗದ ಪ್ರಕರಣಗಳಾಗುತ್ತಿರುವುದು ಸರಕಾರಕ್ಕೆ ಒಂದು ಕಪ್ಪು ಚುಕ್ಕೆಯಾಗಿದೆ ಮತ್ತು ಅಪರಾಧಿಗಳ ಪತ್ತೆ ಮಾಡಲು ಅಶಕ್ತವಾದ ಪೋಲೀಸ್ ಇಲಾಖೆ ಬೆಳ್ತಂಗಡಿಗೆ ಅಗತ್ಯ...

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...