Wednesday, February 12, 2025

*ಮಾಡರ್ನ್ ಕವನ* – *ಸೊಳ್ಳೆ*

ಗುಂಯ್ ಎನ್ನುವ ಸೊಳ್ಳೆಗೆ
ರಕ್ತ ಹೀರುವ
ಕೆಲಸ ಒಂದೇ ಜೀವನಕ್ಕೆ ಆಧಾರ…!

ರಾತ್ರಿಯಾದರೆ ಸಾಕು
ಮನೆಯೊಳಗೆ ಮುತ್ತಿಗೆ..!
ಆಷಾಢ ಮಾಸದಲ್ಲಿ ಹೆಂಡತಿ ಕಾಟ ತಪ್ಪಿದರು
ಯಾವ ಕಾಲದಲ್ಲೂ ಸೊಳ್ಳೆ ಕಾಟ ತಪ್ಪದು ನಮಗೆ..!
ಫ್ಯಾನ್, ಕಾಯಿಲ್,ಆಲ್ ಔಟ್,
ಗುಡ್ ನೈಟ್
ಅದಂತೆ ಇದಂತೆ
ನಾನಾ ಶಸ್ತ್ರಾಸ್ತ್ರಗಳು
ಸೊಳ್ಳೆಯ ಕೊಲೆಗೆ…!

ರಕ್ತ ಹೀರಿ ಹರಡಿ ಹೋಗುತ್ತೆ ಕಾಯಿಲೆ
ಮಲೇರಿಯಾ, ಡೆಂಗ್ಯೂ,ಚಿಕನ್ ಗುನ್ಯಾ…,
ಅದೇನೇನೋ ಕಾಯಿಲೆ
ಕಾರಣ ಸೊಳ್ಳೆಯಂತೆ..!
ಹುಟ್ಟಡಗಿಸಬೇಕು, ಎಚ್ಚರವಹಿಸಬೇಕು..
ಇಲ್ಲವೆಂದಾದರೆ ಮಸಣದಲ್ಲಿ ಜಾಗ ಕಾದಿರಿಸಬೇಕು..!

ಜಾಗ್ರತೆ ವಹಿಸಿ
ರಕ್ತ ಹೀರುವವರಿದ್ದಾರೆ..!
ಸೊಳ್ಳೆಯಂತೆ..!
ಚರಂಡಿ ಕ್ಲೀನ್ ಮಾಡಿ
ಮನೆ, ಮನದ ಸುತ್ತ..!
ನೀರು ನಿಲ್ಲಲು ಬಿಡಬೇಡಿ..
ಅಲ್ಲಿ ಇಲ್ಲಿ ,ಎದೆಯಲ್ಲಿ..!
ಸೊಳ್ಳೆ ಪರದೆ ಎಳೆಯಿರಿ
ಮನೆ ಕಿಟಕಿಗೆ,ಸುಳ್ಳು ಸುದ್ದಿಗೆ..!
ಬೆಂಕಿ ಹಚ್ಚಿಡಿ
ಸೊಳ್ಳೆ ಬತ್ತಿಗೆ,ಕೆಟ್ಟ ಯೋಚನೆಗೆ..!

ರಕ್ತ ಹೀರಲು ಬಿಡಬೇಡಿ
ರಕ್ತ ಹೀರಲು ಬೇಡಿ..!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...