Thursday, February 13, 2025

*ಮಾಡರ್ನ್ ಕವನ*-*ಸಾಬೂನು*

ಅದೆಷ್ಟು ಸೋಪ್
ಹೆಸರ ಹೇಳಿದರೆ ಮುಗಿಯದು..!?
ಆದರ ಕಥೆ ಕೇಳಿ…!?

ನಿನ್ನೆ ತನಕ ಎಲ್ಲಿದೆಯೋ ಅಲ್ಲಿದೆ
ಆರೋಗ್ಯ ಅನ್ನುವ ಸಾಬೂನು
ಬಚ್ಚಲು ಮನೆಯಲ್ಲಿ
ಕರಗಿ ಹೋಗುತ್ತಿರುವಾಗ
ವಯಸ್ಸನ್ನೇ ಮರೆಮಾಚುವ ಸೋಪ್
ಬಂದೇ ಬಿಟ್ಟಿತ್ತು…!

ಆ ನಟಿ ಮಣಿಗಳು
ಉಪಯೋಗಿಸುವ ಸಾಬೂನು ಒಂದಾದರೆ,
ಋಷಿ ಮುನಿಗಳ ಪ್ರೇರಣೆಯಲ್ಲಿ
ತಯಾರಿಸಿದ ಸಾಬೂನೊಂದು..
ಆ ಗಿಡ ಈ ಕಾಯಿ ಸೇರಿಸಿ ಮಾಡಿದ ಪುರಾತನ ವಿದ್ಯೆಯ
ತಿಳಿದು ಮಾಡಿದ ಸೋಪು..
ಶಾಸ್ತ್ರೀಯ ವಿದ್ಯೆಗಳ ಜೊತೆ ವೈಜ್ಞಾನಿಕ ವಿದ್ಯೆಯಿಂದ
ತಯಾರದ ಸೋಪು..
ಎಲ್ಲಾ ನಮ್ಮನ್ನು ಉದ್ದಾರ ಮಾಡಲು.!
ನಮ್ಮ ದೇಹದ ಅರೋಗ್ಯ ಕಾಪಾಡಲು..!?

ಬಟ್ಟೆ ಒಗೆಯಲು ಇವೆ ಬೇರೆ ಬೇರೆ ಸೋಪು,
ಇದು ಇದ್ದಲ್ಲಿ ಕೊಳೆಯ ಮಾತೆಲ್ಲಿ,
ಲಿಂಬೆಯಲ್ಲಿದೆ ಹಠಮಾರಿ ಕೊಳೆ ತೆಗೆಯುವ ಶಕ್ತಿ.,
ಪರಿಮಳ ಯುಕ್ತ,
ಕಳೆ ಮುಕ್ತ..
ಹೀಗೆ ಬಟ್ಟೆ ಚಿಂದಿ ಚಿತ್ರಾನ್ನ
ಆಗುವವರೆಗೆ ತೊಳೆಯುವ ಸೋಪು

ಪಾತ್ರೆ ತೊಳೆಯುವ ಸಾಬೂನುಗಳ
ಪಾತ್ರವೇ ಬೇರೆ..
ಎಣ್ಣೆ ಜಿಡ್ಡು ತೆಗೆಯಲು ಒಂದು,
ಕರಿದ ಪದಾರ್ಥಗಳ ಪಾತ್ರೆ ತೊಳೆಯಲೊಂದು.
ಅದಕ್ಕೆ ಲಿಂಬೆಯಂತೆ ,ನೀಮ್ ಅಂತೆ
ಏನೇನೋ ವೈಜ್ಞಾನಿಕ ಆವಿಷ್ಕಾರವಂತೆ…!

ಬರಬಹುದು ಮಾಡಿದ ಪಾಪವ
ಅಳಿಸುವ ಸೋಪ್ ,
ಹರಿದ ಬಟ್ಟೆಯ ಹೊಲಿಯುವ ಸೋಪ್,
ನಜ್ಜಿದ ಪಾತ್ರೆಯ ಮೂತಿ ಸರಿ ಮಾಡುವ ಸೋಪ್..!
ಸ್ವಚ್ಚ ಮಾಡುವ ಸೋಪೇ
ಕಲುಷಿತ ಮಾಡಿತು,
ಪರಿಮಳ ಸೂಸುವ ಸಾಬೂನೇ
ಕೆಟ್ಟ ವಾಸನೇ ಬೀರಿತು,
ಅರೋಗ್ಯ ಕಾಪಾಡುವ ಸಾಬೂನೇ
ರೋಗ ತಂದಿತು..!

ಯಾವ ಸೋಪಲಿ
ಸ್ನಾನ ಮಾಡಲಿ,
ದೇಹದ ಜೊತೆಗೆ ಮನವ
ಶುದ್ಧ ಮಾಡುವ ಸೋಪು ಬರಲಿ…!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...