Saturday, July 12, 2025

*ಮಾಡರ್ನ್ ಕವನ* *ಹತ್ತಿರದ ಮನೆ*

ನನ್ನದು ಅವನದು
ಮನೆಯ ಅಂತರ ಕಡಿಮೆ ಆದಂತೆ
ಮನಸ್ಸು ದೂರವಾಗಿತ್ತು..!

ಅವತ್ತು ನಮ್ಮದು ಹುಲ್ಲಿನ ಮನೆ
ನಾಲ್ಕು ಮಣ್ಣಿನ ಗೋಡೆಗೆ
ಹುಲ್ಲ ಹಾಸಲು
ಅವನಿಗೆ ನಾನು
ನನಗೆ ಅವನು
ಸಹಾಯ ಮಾಡಿದ್ವಿ
ಅವನ ಮನೆ ಒಂದಷ್ಟು ದೂರ
ಒಂದ್ಹತ್ತು ಹೆಜ್ಜೆ ದೂರದಲ್ಲಿ
ಆದರೂ ನಾವು ಹತ್ತಿರದ ಗೆಳೆಯರು

ನಾನು ಹಂಚಿನ ಮನೆ ಕಟ್ಟಿದೆ
ಅವನಿಗೂ ಸಲಹೆ ಕೊಟ್ಟೆ
ವರ್ಷ ವರ್ಷ ಬದಲಾಯಿಸಬೇಕಿಲ್ಲ
ಹತ್ತು ವರ್ಷಕೊಮ್ಮೆ ರಿಪೇರಿ ಮಾಡಿದರೆ ಸಾಕು
ಅವನು ಕಟ್ಟಿದ ಸ್ವಲ್ಪ ಹತ್ತಿರದಲ್ಲಿ
ಕೂಗಿ ಕರೆಯುವಷ್ಟು ದೂರದಲ್ಲಿ
ಈಗಲೂ ನಾವು ಗೆಳೆಯರು..

ಅವನು ಟೆರೇಸ್ ಮನೆ ಮಾಡಿದ
ನನ್ನ ಮನೆ ಪಕ್ಕದಲ್ಲೇ
ಅವನ ಮನೆಯ ಪಾತ್ರೆ ಸದ್ದು
ನಮ್ಮನೆಗೆ ಕೇಳುವಷ್ಟು..!
ನಾನು ಕಟ್ಟಿದೆ
ಸ್ವಲ್ಪ ಡಿಸೈನ್ ಆಗಿ, ಎತ್ತರವಾಗಿ..!
ಈಗಲೂ ಗೆಳೆಯರು…!

ಹುಲ್ಲು ಹಾಸಿದ ಮನೆಯಿದ್ದಾಗ
ಗಾಳಿ ಮಳೆ ಬಂದರೆ ಇಬ್ಬರಲ್ಲಿ
ಒಂದು ಮನೆಗೆ ಸೇರುತ್ತಿದ್ದೆವು
ಧೈರ್ಯ ಹೇಳಿ ಸಮಾಧಾನಿಸುತ್ತಿದ್ದೆವು
ಹಂಚು ಮನೆಯಿದ್ದಾಗ
ಒಬ್ಬರಿಗೊಬ್ಬರ ಹಂಚುತ್ತಿದ್ದೆವು
ಸುಖ ಕಷ್ಟಗಳ
ಆಗೊಮ್ಮೆ ಈಗೊಮ್ಮೆ ಹೋಗಿ ಬಂದು..
ಟೆರೇಸ್ ಮನೆ ಆದಾಗ
ಎದುರು ಸಿಕ್ಕಾಗ ನಗೆ ಬೀರುತ್ತಿದ್ದೆವು
ಕಷ್ಟ ಸುಖ ಮಾತಾಡಲು ಪ್ರೆಸ್ಟಿಜ್ ಅಡ್ಡ ಬರುತ್ತಿತ್ತು

ಜೀವನ ಕ್ರಮದಲ್ಲಿ ಬದಲಾವಣೆ
ಆದಂತೆ
ಸಂಬಂಧದಲ್ಲೂ ಬದಲಾವಣೆಯಾಗುತ್ತಿದೆ..
ಬಿರುಕು ಬಿಡುವ
ಮಣ್ಣ ಗೋಡೆಯ ಮಧ್ಯೆ
ಸಂಬಂಧಗಳು ಗಟ್ಟಿಯಾಗಿತ್ತು
ಕಾಂಕ್ರೀಟ್ ಮನೆಗಳಲ್ಲಿ
ಸಂಬಂಧಗಳು
ಬಿರುಕು ಬಿಡುತ್ತಿತ್ತು….!

ಎಲ್ಲಾ ಇದೆ ಎಂದಾಗಲೇ
ಅಹಂ
ಎದೆಯ ಆವರಿಸಿತು…!

 

✍ಯತೀಶ್ ಕಾಮಾಜೆ

More from the blog

ಗುರು ಪೂರ್ಣಿಮೆಯ ಪ್ರಯುಕ್ತ ನಿವೃತ ಶಿಕ್ಷಕಿ ಲಕ್ಷ್ಮೀ ಅವರಿಗೆ ಗೌರವರ್ಪಣೆ 

ಬಂಟ್ವಾಳ : ಗುರು ಪೂರ್ಣಿಮೆಯ ಪ್ರಯುಕ್ತ ಸಜೀಪ ಮುನ್ನೂರು ಬಿಜೆಪಿ ಗ್ರಾಮ ಸಮಿತಿಯ 4ನೇ ವಾರ್ಡಿನ ಬೊಕ್ಕಸ ನಿವಾಸಿಯಾದ ನಿವೃತ ಶಿಕ್ಷಕಿಯಾದ ಮಾತೃ ವಾತ್ಸಲ್ಯದ ಲಕ್ಷ್ಮೀ ಟೀಚರ್ ಇವರಿಗೆ ಬಿಜೆಪಿ ಮುಖಂಡರು ಮಾಜಿ...

ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ತೊಂದರೆ : ಸಮಸ್ಯೆ ಬಗೆಹರಿಸಲು ಬಿ.ಎಂ.ಎಸ್ ಮನವಿ 

ಬಂಟ್ವಾಳ: ರಾಜ್ಯ ಸರಕಾರವು ಸ್ಪಷ್ಟ ಕಾನೂನು ರೂಪಿಸದ ಪರಿಣಾಮ ಪ್ರಸ್ತುತ ಕೆಂಪುಕಲ್ಲು, ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸವಿಲ್ಲದೆ ಕುಟುಂಬ ಪೋಷಣೆ ಕಷ್ಟವಾಗಿದೆ. ಸಾಲದ ಕಂತು ಪಾವತಿಸುವುದು ಕೂಡ ಸವಾಲಾಗಿದ್ದು, ಶಾಲಾರಂಭದಲ್ಲೇ ಇಂತಹ ಸಮಸ್ಯೆಯಿಂದ...

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...

Government Hospital : ಸರಕಾರಿ ಆಸ್ಪತ್ರೆಯ ಆವರಣದೊಳಗೆ ಅನಧಿಕೃತವಾಗಿ ವಾಹನಗಳ ಪಾರ್ಕ್ – ರೋಗಿಗಳಿಗೆ ತೊಂದರೆ..

ಬಂಟ್ವಾಳ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಅವರಣದ ಒಳಗೆ ರಿಕ್ಷಾ ಸಹಿತ ಇತರೆ ವಾಹನಗಳನ್ನು ‌ಅನಧಿಕೃತವಾಗಿ ಪಾರ್ಕ್ ಮಾಡಲಾಗಿ ಹೋಗುತ್ತಾರೆ, ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಹಿತ ಅಂಬ್ಯುಲೆನ್ಸ್ ವಾಹನಗಳಿಗೆ ಸಂಚಾರಕ್ಕೆ ತೊಡಕುಂಟಾಗಿದೆ ಎಂಬ‌...