Saturday, January 31, 2026

*ಮಾಡರ್ನ್ ಕವನ* *ಹತ್ತಿರದ ಮನೆ*

ನನ್ನದು ಅವನದು
ಮನೆಯ ಅಂತರ ಕಡಿಮೆ ಆದಂತೆ
ಮನಸ್ಸು ದೂರವಾಗಿತ್ತು..!

ಅವತ್ತು ನಮ್ಮದು ಹುಲ್ಲಿನ ಮನೆ
ನಾಲ್ಕು ಮಣ್ಣಿನ ಗೋಡೆಗೆ
ಹುಲ್ಲ ಹಾಸಲು
ಅವನಿಗೆ ನಾನು
ನನಗೆ ಅವನು
ಸಹಾಯ ಮಾಡಿದ್ವಿ
ಅವನ ಮನೆ ಒಂದಷ್ಟು ದೂರ
ಒಂದ್ಹತ್ತು ಹೆಜ್ಜೆ ದೂರದಲ್ಲಿ
ಆದರೂ ನಾವು ಹತ್ತಿರದ ಗೆಳೆಯರು

ನಾನು ಹಂಚಿನ ಮನೆ ಕಟ್ಟಿದೆ
ಅವನಿಗೂ ಸಲಹೆ ಕೊಟ್ಟೆ
ವರ್ಷ ವರ್ಷ ಬದಲಾಯಿಸಬೇಕಿಲ್ಲ
ಹತ್ತು ವರ್ಷಕೊಮ್ಮೆ ರಿಪೇರಿ ಮಾಡಿದರೆ ಸಾಕು
ಅವನು ಕಟ್ಟಿದ ಸ್ವಲ್ಪ ಹತ್ತಿರದಲ್ಲಿ
ಕೂಗಿ ಕರೆಯುವಷ್ಟು ದೂರದಲ್ಲಿ
ಈಗಲೂ ನಾವು ಗೆಳೆಯರು..

ಅವನು ಟೆರೇಸ್ ಮನೆ ಮಾಡಿದ
ನನ್ನ ಮನೆ ಪಕ್ಕದಲ್ಲೇ
ಅವನ ಮನೆಯ ಪಾತ್ರೆ ಸದ್ದು
ನಮ್ಮನೆಗೆ ಕೇಳುವಷ್ಟು..!
ನಾನು ಕಟ್ಟಿದೆ
ಸ್ವಲ್ಪ ಡಿಸೈನ್ ಆಗಿ, ಎತ್ತರವಾಗಿ..!
ಈಗಲೂ ಗೆಳೆಯರು…!

ಹುಲ್ಲು ಹಾಸಿದ ಮನೆಯಿದ್ದಾಗ
ಗಾಳಿ ಮಳೆ ಬಂದರೆ ಇಬ್ಬರಲ್ಲಿ
ಒಂದು ಮನೆಗೆ ಸೇರುತ್ತಿದ್ದೆವು
ಧೈರ್ಯ ಹೇಳಿ ಸಮಾಧಾನಿಸುತ್ತಿದ್ದೆವು
ಹಂಚು ಮನೆಯಿದ್ದಾಗ
ಒಬ್ಬರಿಗೊಬ್ಬರ ಹಂಚುತ್ತಿದ್ದೆವು
ಸುಖ ಕಷ್ಟಗಳ
ಆಗೊಮ್ಮೆ ಈಗೊಮ್ಮೆ ಹೋಗಿ ಬಂದು..
ಟೆರೇಸ್ ಮನೆ ಆದಾಗ
ಎದುರು ಸಿಕ್ಕಾಗ ನಗೆ ಬೀರುತ್ತಿದ್ದೆವು
ಕಷ್ಟ ಸುಖ ಮಾತಾಡಲು ಪ್ರೆಸ್ಟಿಜ್ ಅಡ್ಡ ಬರುತ್ತಿತ್ತು

ಜೀವನ ಕ್ರಮದಲ್ಲಿ ಬದಲಾವಣೆ
ಆದಂತೆ
ಸಂಬಂಧದಲ್ಲೂ ಬದಲಾವಣೆಯಾಗುತ್ತಿದೆ..
ಬಿರುಕು ಬಿಡುವ
ಮಣ್ಣ ಗೋಡೆಯ ಮಧ್ಯೆ
ಸಂಬಂಧಗಳು ಗಟ್ಟಿಯಾಗಿತ್ತು
ಕಾಂಕ್ರೀಟ್ ಮನೆಗಳಲ್ಲಿ
ಸಂಬಂಧಗಳು
ಬಿರುಕು ಬಿಡುತ್ತಿತ್ತು….!

ಎಲ್ಲಾ ಇದೆ ಎಂದಾಗಲೇ
ಅಹಂ
ಎದೆಯ ಆವರಿಸಿತು…!

 

✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...