Thursday, February 13, 2025

*ಮಾಡರ್ನ್ ಕವನ* *ಹತ್ತಿರದ ಮನೆ*

ನನ್ನದು ಅವನದು
ಮನೆಯ ಅಂತರ ಕಡಿಮೆ ಆದಂತೆ
ಮನಸ್ಸು ದೂರವಾಗಿತ್ತು..!

ಅವತ್ತು ನಮ್ಮದು ಹುಲ್ಲಿನ ಮನೆ
ನಾಲ್ಕು ಮಣ್ಣಿನ ಗೋಡೆಗೆ
ಹುಲ್ಲ ಹಾಸಲು
ಅವನಿಗೆ ನಾನು
ನನಗೆ ಅವನು
ಸಹಾಯ ಮಾಡಿದ್ವಿ
ಅವನ ಮನೆ ಒಂದಷ್ಟು ದೂರ
ಒಂದ್ಹತ್ತು ಹೆಜ್ಜೆ ದೂರದಲ್ಲಿ
ಆದರೂ ನಾವು ಹತ್ತಿರದ ಗೆಳೆಯರು

ನಾನು ಹಂಚಿನ ಮನೆ ಕಟ್ಟಿದೆ
ಅವನಿಗೂ ಸಲಹೆ ಕೊಟ್ಟೆ
ವರ್ಷ ವರ್ಷ ಬದಲಾಯಿಸಬೇಕಿಲ್ಲ
ಹತ್ತು ವರ್ಷಕೊಮ್ಮೆ ರಿಪೇರಿ ಮಾಡಿದರೆ ಸಾಕು
ಅವನು ಕಟ್ಟಿದ ಸ್ವಲ್ಪ ಹತ್ತಿರದಲ್ಲಿ
ಕೂಗಿ ಕರೆಯುವಷ್ಟು ದೂರದಲ್ಲಿ
ಈಗಲೂ ನಾವು ಗೆಳೆಯರು..

ಅವನು ಟೆರೇಸ್ ಮನೆ ಮಾಡಿದ
ನನ್ನ ಮನೆ ಪಕ್ಕದಲ್ಲೇ
ಅವನ ಮನೆಯ ಪಾತ್ರೆ ಸದ್ದು
ನಮ್ಮನೆಗೆ ಕೇಳುವಷ್ಟು..!
ನಾನು ಕಟ್ಟಿದೆ
ಸ್ವಲ್ಪ ಡಿಸೈನ್ ಆಗಿ, ಎತ್ತರವಾಗಿ..!
ಈಗಲೂ ಗೆಳೆಯರು…!

ಹುಲ್ಲು ಹಾಸಿದ ಮನೆಯಿದ್ದಾಗ
ಗಾಳಿ ಮಳೆ ಬಂದರೆ ಇಬ್ಬರಲ್ಲಿ
ಒಂದು ಮನೆಗೆ ಸೇರುತ್ತಿದ್ದೆವು
ಧೈರ್ಯ ಹೇಳಿ ಸಮಾಧಾನಿಸುತ್ತಿದ್ದೆವು
ಹಂಚು ಮನೆಯಿದ್ದಾಗ
ಒಬ್ಬರಿಗೊಬ್ಬರ ಹಂಚುತ್ತಿದ್ದೆವು
ಸುಖ ಕಷ್ಟಗಳ
ಆಗೊಮ್ಮೆ ಈಗೊಮ್ಮೆ ಹೋಗಿ ಬಂದು..
ಟೆರೇಸ್ ಮನೆ ಆದಾಗ
ಎದುರು ಸಿಕ್ಕಾಗ ನಗೆ ಬೀರುತ್ತಿದ್ದೆವು
ಕಷ್ಟ ಸುಖ ಮಾತಾಡಲು ಪ್ರೆಸ್ಟಿಜ್ ಅಡ್ಡ ಬರುತ್ತಿತ್ತು

ಜೀವನ ಕ್ರಮದಲ್ಲಿ ಬದಲಾವಣೆ
ಆದಂತೆ
ಸಂಬಂಧದಲ್ಲೂ ಬದಲಾವಣೆಯಾಗುತ್ತಿದೆ..
ಬಿರುಕು ಬಿಡುವ
ಮಣ್ಣ ಗೋಡೆಯ ಮಧ್ಯೆ
ಸಂಬಂಧಗಳು ಗಟ್ಟಿಯಾಗಿತ್ತು
ಕಾಂಕ್ರೀಟ್ ಮನೆಗಳಲ್ಲಿ
ಸಂಬಂಧಗಳು
ಬಿರುಕು ಬಿಡುತ್ತಿತ್ತು….!

ಎಲ್ಲಾ ಇದೆ ಎಂದಾಗಲೇ
ಅಹಂ
ಎದೆಯ ಆವರಿಸಿತು…!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...