Thursday, February 13, 2025

*ಮಾಡರ್ನ್ ಕವನ*-*ಮುಖವಾಡ*

ಪಕ್ಕ ಪ್ರಾಕ್ಟಿಕಲ್
ಆಗಲು
ಹೊರಟೆ
ಇದ್ದುದನ್ನು ಇದ್ದಂಗೆ
ಹೇಳಿ ಬಿಟ್ಟೆ

ಈ ಸೂಳೆ ಮಗನಿಗೆ
ಸನ್ಮಾನ
ಅದೂ ನನ್ನಿಂದ
ಅಂದಿದ್ದ ನಿನ್ನೆ
ಸನ್ಮಾನ ಹೊತ್ತಿನಲ್ಲಿ
ನಿಮ್ಮಂಥ ಧೀರನಿಗೆ
ಸನ್ಮಾನ ಮಾಡಿದ್ದು ನನ್ನ ಅದೃಷ್ಟ ಅಂದ
ನಾ ನಿಜ ಅಂದೆ
ಒದ್ದು ಹೊರ ಹಾಕಲಾಯಿತು ನನ್ನ.

ಈ ಮಾರಿ ಮುಂಡೆ ಅದೇನು
ಮೋಡಿ ಮಾಡಿ
ಮಗನ ಬುಟ್ಟಿಗೆ ಹಾಕಿದ್ಳೋ
ನಾಯಿ ತರ ಹಿಂದೆ ಸುತ್ತಾನೆ.
ಸೊಸೆ ಬಂದಾಗ
ನಿನ್ನಂತ ಹೆಂಡ್ತಿ ಪಡೆಯೋಕೆ
ನನ್ನ ಮಗ
ಪುಣ್ಯ ಮಾಡಿರಬೇಕಂದಳು
ನಾ ನಿಜ ಅಂದೆ
ಅತ್ತೆ ಸೊಸೆ ಮಧ್ಯೆ ಹುಳಿ
ಹಿಂಡ್ತಿಯೇನೋ
ಅಂದು ಪೊರಕೆ ತೋರಿಸಿದರು.

ಸತ್ಯ
ಬಿಟ್ಟು ಬಿಟ್ಟೇ

ನಿಮಗೆ ಸನ್ಮಾನ ಮಾಡುವ
ಅವಕಾಶ ಸಿಕ್ಕಿದ್ದು
ಪುಣ್ಯ ಅಂತಿದ್ದರು ಅಂದೆ
ಅವನ ಜೊತೆ ನಂಗೂ ಸನ್ಮಾನ
ಮಾಡಲಾಯಿತು
ನಿನ್ನಂತ ಸೊಸೆ
ಎಲ್ಲಾ ಅತ್ತೆಯಂದಿರಿಗು ಸಿಗಲಿ
ಅನ್ನುತ್ತಿದ್ದರು ಅಂದೆ
ಪಾಯಸದ ಊಟ ನೀಡಲಾಯಿತು.

ಮುಖವಾಡ
ಬೇಕು
ಈ ಭೂಮಿಯಲ್ಲಿ
ನಾವು ನೀವು ಬದುಕಬೇಕಾದರೆ..!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...