Thursday, February 13, 2025

*ಮಾಡರ್ನ್ ಕವನ* *ಬುದ್ಧಿ*

ಬುದ್ಧಿಯೇ ಇರಬಾರದು
ಈ ಮಾನವನಿಗೆ
ಪ್ರಾಣಿಗೂ ಇವನಿಗೂ
ವ್ಯತ್ಯಾಸವೇ ಇರಬಾರದಿತ್ತು..!

ಆಗ ಬಟ್ಟೆಯ ಗೊಡವೆಯೇ ಇರುತ್ತಿರಲಿಲ್ಲ
ಬಟ್ಟೆಯಲ್ಲೇ ಶ್ರೀಮಂತಿಕೆಯ ಅಳೆಯುತ್ತಿರಲಿಲ್ಲ
ನಾಳೆಯ ರುಚಿಯೇ ಮುಖ್ಯವಾಗುತ್ತಿರಲಿಲ್ಲ
ನೂರಾರು ಪ್ಲೇವರ್ ಗಳು ಹುಟ್ಟುತ್ತಲೇ ಇರಲಿಲ್ಲ
ಇರಲೊಂದು ಸುಂದರ ಮನೆಬೇಕೆಂಬ
ಆಸೆ ಬೆಳೆಯುತ್ತಿರಲಿಲ್ಲ
ಆಸೆ ಪೂರೈಕೆಗೆ ಪ್ರಕೃತಿಯ ನಾಶವಾಗುತ್ತಿರಲಿಲ್ಲ
ನಿದ್ದೆಗೊಂದು ತಲೆದಿಂಬಿನ ಬೇಡಿಕೆ ಇಡುತ್ತಿರಲಿಲ್ಲ
ನನಸಾಗಿಸುವ ಪ್ರಯತ್ನದ ಕನಸುಗಳು ಹುಟ್ಟುತ್ತಿರಲಿಲ್ಲ..!

ಸಾವಿರಾರು ದೇವರು
ಊರಿಗೊಂದು ಹೆಸರು
ಜಾತಿ ಗೀತಿ
ಬಡವ ಬಲ್ಲಿದ
ವಿದ್ಯಾವಂತ ಅವಿದ್ಯಾವಂತ
ಯಾವುದು ಕಾಣಸಿಗುತ್ತಿರಲಿಲ್ಲ..!

ತಿಂದು ಮಲಗೋದು ಜೀವನ
ಸಸ್ಯಹಾರಿಯಾದರೆ ಆಯ್ದು ತಿನ್ನೊದು
ಮಾಂಸಹಾರಿಯಾದರೆ ಬೇಟೆಯಾಡೋದು
ಸ್ವಾರ್ಥ ಗಳಿಲ್ಲ
ಮುಗಿಲೆತ್ತರದ ಆಸೆಗಳಿಲ್ಲ
ಸತ್ತಾಗಲು ತಿಥಿ ಬೇಕಾಗಿಲ್ಲ
ಸತ್ತ ಹೆಣವು ಹದ್ದಿಗೋ ನರಿಗೋ
ಹೊಟ್ಟೆ ತುಂಬಿಸುತ್ತಿತ್ತು
ಅಂತೂ ಬೂದಿಯಾಗಿ ಹೋಗುತ್ತಿರಲಿಲ್ಲ..!

ಅವನಂತೆ ನಾನಾಗಬೇಕು
ಊರಿಗೆ ಅರಸನಾಗಬೇಕು
ಚಂದ್ರನ ಮೇಲೆ ಲಗ್ಗೆ ಇಡಬೇಕು
ಭೂಮಿಯನ್ನು ಅಳೆಯಬೇಕು
ಸಮುದ್ರವನ್ನ ಈಜಬೇಕು
ಈ ಯಾವ ಮಹದಾಸೆಗಳು ಇರುತ್ತಿರಲ್ಲ…

ಪ್ರಕೃತಿಯಲ್ಲಿ
ಸುಖದ ಬೆನ್ನಟ್ಟುವ
ದುಃಖಿ ಜೀವಿ ನಾನಾಗುತ್ತಿರಲ್ಲಿಲ್ಲ…!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...