Thursday, February 13, 2025

*ಮಾಡರ್ನ್ ಕವನ* *ಹಸಿವಿಗೊಂದು ಮದ್ದು*

ಕೊನೆಗೂ
ಸಿಕ್ಕೆ ಬಿಟ್ಟಿತ್ತು
ಹಸಿವಿಗೊಂದು ಮದ್ದು..!

ಹಸಿವಿಂದ ಬೆಂದು ನೊಂದವನೇ
ನಿದ್ದೆ ಬಿಟ್ಟು ಕಂಡು ಹಿಡಿದದ್ದು
ಹಸಿವು ಮುಕ್ತ ಮಾನವ
ಆಗಬೇಕುನ್ನುವ ಮಹದಾಸೆ ಅವನದು
ಪೋಲಿಯೋ ಲಸಿಕೆ ಕೊಡುವ ಹೊತ್ತಲ್ಲೇ
ಈ ಮದ್ದನ್ನು ಎರಡು ಹನಿ ಬಿಡಲಾಗುತ್ತಿತ್ತು
ಮತ್ತೆ ಸಾಯುವ ವರೆಗೆ ಹಸಿವಿಲ್ಲ.
ಹೀಗಾದರೂ ನೆಮ್ಮದಿ ಇರಲೆನ್ನುವ ಬಯಕೆ..
ಕೊನೆಗೂ ಹಸಿವು ಮುಕ್ತ ಮಾನವ..!

ಈಗ ದೇವಸ್ಥಾನಗಳಲ್ಲಿ ಭಿಕ್ಷೆ ಬೇಡುವಂತಿಲ್ಲ
ಹಸಿವಿನ ನೆಪ ನೀಡುವಂತಿಲ್ಲ
ತರಕಾರಿ ಅಂಗಡಿಗಳಿಲ್ಲ
ಬೆಳೆಯುವವರಿಲ್ಲ
ಕೃಷಿ ಬೇಕಾಗಿಲ್ಲ
ರೈತ ಆತ್ಮಹತ್ಯೆ ಪೇಪರ್ ಟೀವಿಯಲ್ಲಿ
ಹೆಡ್ಡಿಂಗ್ ಲೈನ್ ಕಾಣಸಿಗುವುದಿಲ್ಲ..!

ಅದೆಷ್ಟೋ ರೈತರಿಗೆ
ಆಹಾರ ಉತ್ಪನ್ನ ಕಾರ್ಮಿಕರಿಗೆ
ಕೆಲಸಗಳಿಲ್ಲ
ಆದರೂ ಚಿಂತೆ ಇಲ್ಲ
ಏಕೆಂದರೆ ಹಸಿವಿಲ್ಲ..!
ಉದ್ಯೋಗ ಬೇಕಾಗಿಲ್ಲ
ಮನೆಯೊಂದಿದ್ದರೆ ಸಾಕು..!

ಮಕ್ಕಳು ಹಸಿವಿನಿಂದ ಅಳೋದಿಲ್ಲ
ಚಂದಮಾಮನ ತೋರಿಸಬೇಕಾಗಿಲ್ಲ
ಬೆವರು ಸುರಿಸಿ ದುಡಿಯಬೇಕಿಲ್ಲ
ಹಣ್ಣು ಹಂಪಲು ಬೇಕಾಗಿಲ್ಲ
ಮಾವಿನ ಕಾಯಿಗೆ ಕಲ್ಲು ಬಿಸಾಡೋದು ಇಲ್ಲ..!
ಯಾವುದೇ ಆಹಾರ ನೀಡುವ
ಮರದ ಆಗತ್ಯವೇ ಇಲ್ಲ…!

ಆದರೂ
ಆಸೆ ಮುಗಿಯಲಿಲ್ಲ
ಈಗ ಒಂದೇ ಚಿಂತೆ ಮನೆ ಬೇಕು
ಇಲ್ಲದವನಿಗೆ
ಬಿಸಿಲು ಮಳೆ ಚಳಿಯಿಂದ
ರಕ್ಷಣೆ ಪಡೆಯಲು
ಇದ್ದವನಿಗೆ ತನ್ನ ಅಂತಸ್ತು ತೋರಿಸಲು
ಈಗ
ಭಿಕ್ಷುಕ ಭಿಕ್ಷೆ ಬೇಡುವುದು
ಮನೆ ಕಟ್ಟುವ ನೆಪದಿ..
ಉದ್ಯೋಗ ಅರಸಿ ಹೋಗುವುದು
ಮನೆ ಕಟ್ಟಲು
ಆತ್ಮಹತ್ಯೆಯೂ ಹಾಗೆ
ಮನೆ ಕಟ್ಟಿ ಸಾಲ ಕಟ್ಟಲಾಗದೇ..!
ಹಸಿವು ಇಲ್ಲದಿದ್ದರು ನೆಮ್ಮದಿ ಇಲ್ಲ..!

ಹಸಿವು ಎಂದರೆ
ಹೊಟ್ಟೆಗೆ ಸಂಬಂಧಿಸಿದ್ದು
ಮಾತ್ರ ಅಲ್ಲ..!

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...