Thursday, July 10, 2025

*ಮಾಡರ್ನ್ ಕವನ*- *ಮರುಹುಟ್ಟು*

ಈ ಜಗತ್ತೊಮ್ಮೆ
ನಾಶವಾಗಿ
ಮರುಹುಟ್ಟಬೇಕು..!

ಮುಗಿಲೆತ್ತರದ ಬಿಲ್ಡಿಂಗ್
ಸಾವಿರಾರು ವೆಹಿಕಲ್
ಮಾರುದ್ದ ಬ್ರಿಡ್ಜ್
ಹೀಗೆ ಎಲ್ಲಾ ಮಾನವನಿರ್ಮಿತ
ಇದ್ದಕ್ಕಿದ್ದಂತೆ ಮಣ್ಣಾಗಿಬಿಡಬೇಕು
ಏನು ಎತ್ತ ಅರಿವಾಗುವ ಮುನ್ನ
ಈ ಭೂಮಿಯಲ್ಲಿ
ಮಾನವನಿದ್ದ ಸಣ್ಣ ಕುರುಹುಗಳು
ಇರಬಾರದು

ಎಲ್ಲಾ ಕಡೆಯಲ್ಲಿ
ಮರ ಗಿಡಗಳು ಹುಟ್ಟಬೇಕು
ನದಿಗಳು ಸ್ವತಂತ್ರವಾಗಿ
ಹರಿಯಬೇಕು
ಗಾಳಿಗಳು ಹಿತವಾಗಿ ಬೀಸಬೇಕು
ಹೊಸ ಜೀವಿಗಳು ಹುಟ್ಟಬೇಕು
ಜೊತೆಗೆ ಮಾನವನೂ ಮರುಹುಟ್ಟು
ಪಡೆಯಬೇಕು

ಆದರೆ…
ಮಾನವ ಎಲ್ಲಾ ಪ್ರಾಣಿಗಳಂತಿರಬೇಕು
ಬುದ್ಧಿ ಅಭಿವೃದ್ಧಿ ಹೊಂದಲೇ ಬಾರದು
ನಾಳೆಯ ಚಿಂತೆ ಇರಬಾರದು
ಸುಖಕ್ಕಾಗಿ ಕೂಡಿಡಬಾರದು

ಪ್ರಾಣಿಯಂತೆ ಬೇಟೆಯಾಡಿ
ಬದುಕಿದರು ಪರವಾಗಿಲ್ಲ
ಸ್ವಾರ್ಥಕ್ಕಾಗಿ ಕೊಲ್ಲಬಾರದು
ರಾಜ್ಯಭಾರ ಮಾಡುವ ಕನಸು ಬೀಳಬಾರದು
ಪರಿಸರದ ಜೊತೆ ಹೊಂದಿಕೊಂಡು
ಬದುಕಿದರೆ ಸಾಕು
ಆವಿಷ್ಕಾರಗಳ ಶಕ್ತಿಯೇ ಇರಬಾರದು

ಒಟ್ಟಾರೆ ತಾನು ಬದುಕುವ
ಹುಂಬತನದಲ್ಲಿ
ಪರಿಸರಕ್ಕೆ ಕಟುಕನಾಗಬಾರದು..!

 

✍ಯತೀಶ್ ಕಾಮಾಜೆ

More from the blog

Women missing : ವಿವಾಹಿತ ಮಹಿಳೆ ನಾಪತ್ತೆ – ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ದೂರು ದಾಖಲು

ಬಂಟ್ವಾಳ: ಬಿಸಿರೋಡಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೋರ್ವಳು ಕಾಣೆಯಾಗಿರುವ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಮೂಡಬಿದಿರೆ ತಾಲೂಕಿನ ಪಡುಮಾರ್ನಾಡು ಗ್ರಾಮದ ಅಚ್ಚರಕಟ್ಟೆ ನಿವಾಸಿ ವಸಂತ ನಾಗಣ್ಣ...

Government Hospital : ಸರಕಾರಿ ಆಸ್ಪತ್ರೆಯ ಆವರಣದೊಳಗೆ ಅನಧಿಕೃತವಾಗಿ ವಾಹನಗಳ ಪಾರ್ಕ್ – ರೋಗಿಗಳಿಗೆ ತೊಂದರೆ..

ಬಂಟ್ವಾಳ: ಇಲ್ಲಿನ ಸಾರ್ವಜನಿಕ ಆಸ್ಪತ್ರೆಯ ಅವರಣದ ಒಳಗೆ ರಿಕ್ಷಾ ಸಹಿತ ಇತರೆ ವಾಹನಗಳನ್ನು ‌ಅನಧಿಕೃತವಾಗಿ ಪಾರ್ಕ್ ಮಾಡಲಾಗಿ ಹೋಗುತ್ತಾರೆ, ಇದರಿಂದ ಆಸ್ಪತ್ರೆಗೆ ಬರುವ ರೋಗಿಗಳ ಸಹಿತ ಅಂಬ್ಯುಲೆನ್ಸ್ ವಾಹನಗಳಿಗೆ ಸಂಚಾರಕ್ಕೆ ತೊಡಕುಂಟಾಗಿದೆ ಎಂಬ‌...

ಹಿಂಸಾತ್ಮಕ ರೀತಿಯಲ್ಲಿ ಜಾನುವಾರು ಸಾಗಾಟ, ಹಲ್ಲೆ: ಎರಡು ಪ್ರಕರಣ ದಾಖಲು..

ಬಂಟ್ವಾಳ: ಪಿಕಪ್ ವಾಹನದಲ್ಲಿ ಕೂಡಿ ಹಾಕಿ ಸುಮಾರು ಐದು ಜಾನುವಾರುಗಳನ್ನು ಸಾಗಾಟ ಮಾಡಿದ ಪರಿಣಾಮ ಕರು ಸತ್ತಿದೆ ಎಂಬ ಆರೋಪದ ಮೇಲೆ ಹಾಗೂ ಜಾನುವಾರು ಸಾಗಾಟ ಮಾಡಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಲಾಗಿದೆ...

ಪತ್ರಿಕಾ ದಿನಾಚರಣೆಯ ಪ್ರಯುಕ್ತ ‘ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ’ ಮಾಹಿತಿ ಕಾರ್ಯಾಗಾರ..

ಬಂಟ್ವಾಳ : ಪತ್ರಕರ್ತರ ಸಮಾಜಮುಖೀ ಬರಹಗಳು ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಹೇಳಿದ್ದಾರೆ. ಬಂಟ್ವಾಳ ತಾಲೂಕು...