Tuesday, January 27, 2026

*ಮಾಡರ್ನ್ ಕವನ*- *ಮರುಹುಟ್ಟು*

ಈ ಜಗತ್ತೊಮ್ಮೆ
ನಾಶವಾಗಿ
ಮರುಹುಟ್ಟಬೇಕು..!

ಮುಗಿಲೆತ್ತರದ ಬಿಲ್ಡಿಂಗ್
ಸಾವಿರಾರು ವೆಹಿಕಲ್
ಮಾರುದ್ದ ಬ್ರಿಡ್ಜ್
ಹೀಗೆ ಎಲ್ಲಾ ಮಾನವನಿರ್ಮಿತ
ಇದ್ದಕ್ಕಿದ್ದಂತೆ ಮಣ್ಣಾಗಿಬಿಡಬೇಕು
ಏನು ಎತ್ತ ಅರಿವಾಗುವ ಮುನ್ನ
ಈ ಭೂಮಿಯಲ್ಲಿ
ಮಾನವನಿದ್ದ ಸಣ್ಣ ಕುರುಹುಗಳು
ಇರಬಾರದು

ಎಲ್ಲಾ ಕಡೆಯಲ್ಲಿ
ಮರ ಗಿಡಗಳು ಹುಟ್ಟಬೇಕು
ನದಿಗಳು ಸ್ವತಂತ್ರವಾಗಿ
ಹರಿಯಬೇಕು
ಗಾಳಿಗಳು ಹಿತವಾಗಿ ಬೀಸಬೇಕು
ಹೊಸ ಜೀವಿಗಳು ಹುಟ್ಟಬೇಕು
ಜೊತೆಗೆ ಮಾನವನೂ ಮರುಹುಟ್ಟು
ಪಡೆಯಬೇಕು

ಆದರೆ…
ಮಾನವ ಎಲ್ಲಾ ಪ್ರಾಣಿಗಳಂತಿರಬೇಕು
ಬುದ್ಧಿ ಅಭಿವೃದ್ಧಿ ಹೊಂದಲೇ ಬಾರದು
ನಾಳೆಯ ಚಿಂತೆ ಇರಬಾರದು
ಸುಖಕ್ಕಾಗಿ ಕೂಡಿಡಬಾರದು

ಪ್ರಾಣಿಯಂತೆ ಬೇಟೆಯಾಡಿ
ಬದುಕಿದರು ಪರವಾಗಿಲ್ಲ
ಸ್ವಾರ್ಥಕ್ಕಾಗಿ ಕೊಲ್ಲಬಾರದು
ರಾಜ್ಯಭಾರ ಮಾಡುವ ಕನಸು ಬೀಳಬಾರದು
ಪರಿಸರದ ಜೊತೆ ಹೊಂದಿಕೊಂಡು
ಬದುಕಿದರೆ ಸಾಕು
ಆವಿಷ್ಕಾರಗಳ ಶಕ್ತಿಯೇ ಇರಬಾರದು

ಒಟ್ಟಾರೆ ತಾನು ಬದುಕುವ
ಹುಂಬತನದಲ್ಲಿ
ಪರಿಸರಕ್ಕೆ ಕಟುಕನಾಗಬಾರದು..!

 

✍ಯತೀಶ್ ಕಾಮಾಜೆ

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...