Wednesday, July 9, 2025

*ಮಾಡರ್ನ್ ಕವನ* *ಒಂದೂರು*

ಊರಲ್ಲದ ಊರಿಗೆ
ದಾರಿ ತಪ್ಪಿ ಸೇರಬೇಕು.
ಆ ಊರು ಹೇಗಿರಬೇಕು
ಗೊತ್ತೆ…!?

ನೆಟ್ವರ್ಕ್ ನ‌ ಅರಿವಿರಬಾರದು
ಗಂಟೆಗೊಮ್ಮೆ ರಿಂಗಾಗುವ
ನೂರಾರು ಮೆಸೇಜ್ ಬರುವ
ದಿನಕ್ಕೆ ಹತ್ತಾರು ಬಾರಿ ನೋಡುವ
ಜಗತ್ತೆ ಅಂಗೈಯೊಳಗಿರಿಸುವ
ಮೊಬೈಲ್ ಇರದೇ
ಬಾರದಲ್ಲಿ
ಹಾರುವ ವಿಮಾನ
ವೇಗದ ವಾಹನ
ಹಳಿಯಲ್ಲಿ ಹೋಗುವ ರೈಲು
ನೀರಲ್ಲಿ ಹೋಗುವ ಬೋಟು
ಯಾವುದಿರಬಾರದು
ತನ್ನ ಊರಿನ ವಿಶಾಲ ವ್ಯಾಪ್ತಿಯೇ
ಮುಕ್ತಾಯ ಎಂದೆನಿಸಬೇಕು.
ತನ್ನ ಕಾಲಿನ ವೇಗವೇ ಕೊನೆಯಾಗಿರಬೇಕು

ಟಿವಿ ಎಂದರೇನು
ಕಂಪ್ಯೂಟರ್‌,
ಈ ರೇಡಿಯೋ, ಸಿ.ಡಿ,ಡಿವಿಡಿ,
ಎಂದರೆ ಗೊತ್ತೇ ಇರಬಾರದು
ಫ್ಯಾನ್ ,ಫ್ರಿಜ್,ಎ.ಸಿ ಹೆಸರೆ ಗೊತ್ತಿರಬಾರದು.
ಹಣದ ಮೌಲ್ಯ, ಕಾಂಕ್ರೀಟ್ ಕಟ್ಟಡ
ಮಾಲ್,ಬಜಾರ್
ಯಾವುದು ತಿಳಿದಿರಬಾರದು..!
ಹೂ ಕೊಟ್ಟು ಹಣ್ಣು ತೊಗೋಬೇಕು
ತರಕಾರಿ ಕೊಟ್ಟು ಅಕ್ಕಿ ಪಡೆಯಬೇಕು
ಈ ಸಂತೃಪ್ತಿಯ ವಿನಿಮಯವೇ
ವ್ಯಾಪಾರ ಆಗಿರಬೇಕು!.
ಹೌದು ಆ ಹಿಂದಿನ ಕಾಡು ಜನರ ಹಾಗೆ.!
ಆದರೆ ಪರಿವರ್ತನೆ ಹೊಂದಬಾರದು..!!

ಆ ಊರಿಗೆ ಭಾಷೆ, ಅಕ್ಷರ
ಯಾವುದು ಇರಬಾರದು
ಜಾತಿಯೂ ಇರಬಾರದು
ಧರ್ಮ ದ ಹೆಸರಲಿ ಜಗಳವೂ ಆಗಬಾರದು
ಒಬ್ಬರಿಗೊಬ್ಬರು ಕಣ್ಣಲ್ಲೇ ಮಾತಾಡಬೇಕು
ಸುಖ-ದುಃಖದ ಅರಿಬಾಗಬೇಕು
ಒಬ್ಬರಿಗೊಬ್ಬರು ಸಹಾಯ ಮಾಡಿ
ಬದುಕುವುದೇ ಧರ್ಮವಾಗಬೇಕು.!

ಆ ಊರಿಗೆ ದಾರಿ ತಪ್ಪಿಹೋದ
ನನ್ನ ಅವರೊಳಗಾಗಿಸಬೇಕು
ಕಣ್ಣಲ್ಲೇ ನನ್ನ ಅಸಹಾಯಕತೆ ಅರಿವಾಗಬೇಕು
ಆ ಕಣ್ಣ ಭಾಷೆ ಕಲಿಸಿ ಕೊಡಬೇಕು..!
ಒಟ್ಟಾರೆ ಸಾವೊಂದೆ ಸತ್ಯ
ಮಿಕ್ಕವೆಲ್ಲ ಮಿಥ್ಯ
ಅರಿವಾಗಬೇಕು..!!

ಅಂತಹ ಊರಿಗೆ
ದಾರಿತಪ್ಪಿಯಾದರೂ‌
ಸೇರಬಾರದೇ…!

 

✍ಯತೀಶ್ ಕಾಮಾಜೆ

More from the blog

ಪತ್ರಿಕಾ ದಿನಾಚರಣೆಯ ಪ್ರಯುಕ್ತ ‘ವಿದ್ಯಾರ್ಥಿಗಳ ಜೊತೆ ಪತ್ರಕರ್ತರು ಹೀಗೊಂದು ಮಾತುಕತೆ’ ಮಾಹಿತಿ ಕಾರ್ಯಾಗಾರ..

ಬಂಟ್ವಾಳ : ಪತ್ರಕರ್ತರ ಸಮಾಜಮುಖೀ ಬರಹಗಳು ಗ್ರಾಮೀಣ ಪ್ರದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದೆ ಎಂದು ಕಾವಳಪಡೂರು ಸರ್ಕಾರಿ ಪದವಿಪೂರ್ವ ಕಾಲೇಜಿನ‌ ಪ್ರೌಢಶಾಲಾ‌ವಿಭಾಗದ ಶಾಲಾಭಿವೃದ್ಧಿ‌ ಸಮಿತಿ ಅಧ್ಯಕ್ಷ ಪಿ.ಜಿನರಾಜ ಆರಿಗ ಹೇಳಿದ್ದಾರೆ. ಬಂಟ್ವಾಳ ತಾಲೂಕು...

ಪ್ರೀಮಾ ಡಿಸೋಜರವರಿಗೆ ಪಿಎಚ್. ಡಿ. ಪದವಿ..

ಬಂಟ್ವಾಳ : ಮಣಿಪಾಲ ನರ್ಸಿಂಗ್ ಕಾಲೇಜಿನಲ್ಲಿ ಪ್ರಾದ್ಯಾಪಕಿಯಾಗಿ, ನರ್ಸಿಂಗ್ ವಿಭಾಗದಲ್ಲಿ ಸಂಶೋದನೆ ಕೈಗೊಂಡಿದ್ದ ಪ್ರೀಮ ಜೆನೆವಿವ್ ಜ್ಯೋತಿ ಡಿಸೋಜರವರು ಅದೇ ಕಾಲೇಜಿನ ಫಂಡಮೆಂಟಲ್ಸ್ ಆಫ್ ನರ್ಸಿಂಗ್ ವಿಭಾಗದ ಪ್ರಾದ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ....

ಸರಕಾರಿ ಕಿ. ಪ್ರಾ. ಶಾಲೆ ಏಮಾಜೆ : ‘ಅಕ್ಷಯ ಪಾತ್ರೆ’ ಕಾರ್ಯಕ್ರಮ ಉದ್ಘಾಟನೆ..

ಬಂಟ್ವಾಳ : ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ ಸೇವನೆಯ ಅವಶ್ಯಕತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಸರಕಾರವು ಪೋಷಣಾ ಅಭಿಯಾನವನ್ನು ಜಾರಿಗೊಳಿಸಿದೆ. ಆ ಪ್ರಯುಕ್ತವಾಗಿ ಬಂಟ್ವಾಳ ತಾಲೂಕಿನ ನೆಟ್ಲಮುಡ್ನೂರು ಗ್ರಾಮದ ದ. ಕ. ಜಿ....

ಬೊಂಡಾಲದಲ್ಲಿ ಉತ್ಸಾಹಿ ಉಚಿತ ಕಣ್ಣಿನ ತಪಸಣಾ ಶಿಬಿರ..

ಬಂಟ್ವಾಳ :ಉತ್ಸಾಹಿ ತರುಣ ವ್ರೃಂದ(ರಿ) ಬೊಂಡಾಲ ಹಾಗೂ ಕಾಮತ್ ಒಪ್ಟಿಕಲ್ಸ್, ಮಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಕಣ್ಣಿನ ತಪಸಣಾ ಶಿಬಿರ ನಡೆಯಿತು. ಊರಿನ ಅನೇಕ ಹಿರಿಯರು, ಮಹಿಳೆಯರು ಹಾಗೂ ನಾಗರಿಕ ಬಂಧುಗಳು ಇದರ...