Thursday, February 13, 2025

*ಮಾಡರ್ನ್ ಕವನ* *ಜಸ್ಟ್ ಟಚ್*

ಒಂದೇ ಒಂದು
ಟಚ್ ಸಾಕು
ಸಾಯಲು ಬದುಕಲು..!

ಆಗ ಶತ್ರು ದೇಶವನ್ನು ಬಡಿಯಬೇಕೆಂದರೆ
ಕತ್ತಿ ಹಿಡಿದು ಕುಸ್ತಿ ಕಲಿಬೇಕಿತ್ತು
ಈಗ ಜಸ್ಟ್ ಒನ್ ಟಚ್ ಸಾಕು
ಕೂತಲ್ಲಿಂದ ಮಿಂಚಿನ ವೇಗದಲ್ಲಿ
ಶತ್ರು ರಾಷ್ಟ್ರಭಸ್ಮವಾಗಬಹುದು..!

ಅತಿಥಿ ಮನೆಗೆ ಬಂದಾಗ
ಕುಳ್ಳಿರಿಸಿ ನಗು ಬೀರಿ
ನೀರು ಕೊಟ್ಟು
ಆಮೇಲೆ ಮಾತು
ಅದು ಪ್ರೀತಿ ತುಂಬಿದ ಮಾತು
ಈಗ ಹಾಗೇನಿಲ್ಲ
ಕೆಲವು ಫಾರ್ಮ್ಯಾಲಿಟಿಗಳಿವೆ
ಬರೋ ಮುನ್ನ ಒಂದು ಮೆಸೇಜ್ ಕೊಡಬೇಕು
ಪಕ್ಕ ಟೈಮ್ ಫಿಕ್ಸ್ ಆಗಿರಬೇಕು
ಬಂದ ತಕ್ಷಣ ನಗು
ಕುಡಿಯಲು ಆರ್ಡರ್ ಕೇಳುವರು
ಜಸ್ಟ್ ಒನ್ ಟಚ್ ಸಾಕು
ಕಾಫಿ ಯಾದರೆ ಕಾಫಿ
ಚಾ ಬೇಕಾದರೆ ಚಾ
ಅದರಲ್ಲೂ ಕೋಲ್ಡ್ ಹಾಟ್
ಏನು ಬೇಕು ಅದು
ಪ್ರೀತಿಗಿಂತ ಹೆಚ್ಚು ಸ್ಟೇಟಸ್ ದೇ ಮಾತು

ಊರ ಹೆಸರ ನೆನಪಿಟ್ಟು
ಅವರಿವರ ಕೇಳಿ
ಊರ ದಾರಿಯ ಕಂಡು ಹಿಡಿಯಬೇಕಿಲ್ಲ
ಜಸ್ಟ್ ಒನ್ ಟಚ್ ಸಾಕು
ಊರ ದಾರಿ ಕಣ್ಣಮುಂದೆ
ನಿನ್ನ ಮನೆ ಪಕ್ಕ ಏನಿದೆ ಎಂದು ಕೇಳಲ್ಲ ಈಗ
ನಿನ್ನ ಲೊಕೇಷನ್ ಕಳಿಸು
ಎಂದರೆ ಸಾಕು

ಜಸ್ಟ್ ಒನ್ ಟಚ್ ನಲ್ಲಿ
ಹುಟ್ಟಲು ಬಹುದು
ನಾವು ಬೂದಿಯಾಗಲೂಬಹುದು
ಊರ ಸೇರಬಹುದು
ಮಸಣ ಸೇರಬಹುದು
ಹಣವನ್ನು ಮಾಡಬಹುದು
ಕಳೆದೂ ಕೊಳ್ಳಬಹುದು
ಏನು ಬೇಕಾದರೂ ಆಗಬಹುದು

ಪ್ರೀತಿಯೊಂದನ್ನು
ಸಂಪಾದಿಸಲಾಗದು..!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...