Thursday, February 13, 2025

*ಮಾಡರ್ನ್ ಕವನ* – *ಆಕಾಶಕ್ಕೊಂದು ಏಣಿ*

ಇದು ಆಕಾಶಕ್ಕೆ ಏಣಿ ಹಾಕಲು
ಅಸಾಧ್ಯ ಎಂದ ಮಾತನ್ನು
ಸುಳ್ಳಾಗಿಸಿದ ಕಥೆ

ಸಾವಿರಾರು ಗಗನ ಚುಂಬಿ
ಕಟ್ಟಡಗಳಲ್ಲಿ
ಇತ್ತೊಂದು ಆಕಾಶ ದಾಟಿದ
ಕಟ್ಟಡ
ಆ ಕಟ್ಟಡದ ತುದಿಯಲ್ಲಿ
ನಿಂತರೆ
ಚಂದಿರ ಸೂಜಿಯಷ್ಟೆ ಅಂತರ
ನಕ್ಷತ್ರ ಎಣಿಸಲು ಸಾಧ್ಯ
ನವಗ್ರಹಗಳ ಚಲನೆಯನ್ನು ನೋಡಲೂ ಬಹುದು..!

ಅಲ್ಲಿ ಹೆಚ್ಚು ಹಣ ಕೊಟ್ಟರೆ ಸ್ಪೀಡ್ ಲಿಫ್ಟ್ ಇದೆ
ಕೆಲವೇ ಗಂಟೆಯಲ್ಲಿ ತಲುಪಬಹುದು
ಅದರ ತುದಿಗೆ..!
ಸ್ವಲ್ಪ ಹಣ ಕೊಟ್ಟರೆ ಸ್ಲೋ ಲಿಫ್ಟ್ ಇದೆ
ಒಂದು ವಾರ ಬೇಕಾದಿತು
ಇನ್ನೂ ನಡೆದು ಕೊಂಡು
ಹೋಗುವ ವ್ಯವಸ್ಥೆಯು ಇದೆ.,
ಆರೇಳು ತಿಂಗಳು ಬೇಕಾಗಬಹುದು
ಎಂಟ್ರಿ ಫೀಸ್ ಕೊಟ್ಟರೆ ಸಾಕು..!

ಅದೊಂದು
ಟೂರಿಸ್ಟ್ ಪ್ಲೇಸ್
ಹಲವಾರು ಸೈಂಟಿಸ್ಟ್
ವಿಜ್ಞಾನ ಕಲಿಯುವ ಸ್ಟೂಡೆಂಟ್ಸ್
ಕೊನೆಯ ಕ್ಷಣದ ಆಸೆ ಹೊತ್ತ ಪೇಷಂಟ್
ಗಲ್ಲಿಗೇರಿ ಸಾಯೋ ಕ್ರಿಮಿನಲ್
ವೈಜ್ಞಾನಿಕ ಸಿನಿಮಾ ರಚಿಸೋ ಚಿತ್ರತಂಡ
ಹೀಗೆ ಹಲವಾರು ಟೂರಿಸ್ಟ್ ಗಳು
ಭೇಟಿ ಕೊಡುತ್ತಿದ್ದರು..!!

ಇಲ್ಲಿ ಎಲ್ಲವೂ ಸಾಧ್ಯ
ಅಸಾಧ್ಯ ಅನ್ನೋದು ಯಾವುದಿಲ್ಲ..!
ದುಡ್ಡೊಂದು ಬೇಕಷ್ಟೆ..!
ಆದರೂ ಅಲ್ಲೊಂದು ಬೋರ್ಡ್ ನೇತು ಹಾಕಿದ್ದರು..!?

“ನಿಮ್ಮ ಪ್ರಾಣಕ್ಕೆ
ನೀವೇ ಜವಾಬ್ದಾರರು..!”

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...