Thursday, February 13, 2025

*ಮಾಡರ್ನ್ ಕವನ* – *ನೀರಿಗಾಗಿ*

ನೀರಿಲ್ಲದೆ ಪ್ರಾಣಿ ಪಕ್ಷಿ
ಸತ್ತಾಗ
ಮಾನವನ
ಕಣ್ಣೀರ ಧಾರೆ..!

ಜಲಸಂರಕ್ಷಣೆ ಅಧ್ಯಯನ ಮಾಡಿ
ಡಿಗ್ರಿ ಪಡೆದು
ಪಾಠ ಮಾಡಿದವನ ಕೈಯಲ್ಲಿ
ಇತ್ತು ಬಿಸ್ಲೇರಿ ಬಾಟಲ್
ಜಲಸಂರಕ್ಷಣೆ ಕಾನೂನು ಪಾಸ್ ಮಾಡಿದ
ಸರಕಾರಿ ಅಧಿಕಾರಿ ಮನೆಯಲ್ಲಿ
ಇತ್ತು ಬೋರ್‌ವೆಲ್
ಕೇಳಿಸಿಕೊಂಡವರ ಊರ
ಪಕ್ಕದಲ್ಲಿ
ಇತ್ತು ಬತ್ತಿ ಹೋದ ರಿವರ್

ದಿಕ್ಕೆಟ್ಟು ತಲೆ ತಿರುಗಿ ಬಿದ್ದ ಪಕ್ಷಿಯದ್ದು
ನೀರು ಅರಸುತ್ತ ಊರೊಳಗೆ
ನುಗ್ಗಿ ಬಂದ ಪ್ರಾಣಿಗಳದ್ದು
ಕಷ್ಟ ಕೇಳೊರು ಯಾರಿರಲಿಲ್ಲ..!

ಅಲ್ಲಲ್ಲಿ ಕ್ಯಾಮರಾ ಹಿಡಿದು
ಬಿಸಿ ಬಿಸಿ ಸುದ್ದಿ
“ಈ ಬಿಸಿಲಿಗೆ
ಕಾಡು ಬಿಟ್ಟು ನಾಡಿಗೆ ಬರೋ ಪ್ರಾಣಿಗಳು”
‘ಇದೇ ಬ್ರೇಕಿಂಗ್ ನ್ಯೂಸ್’
ಎಂದ ಆ್ಯಂಕರ್.
ಕೈಯಲ್ಲಿ ನೀರು ಬಾಟಲಿ ಹಿಡಿದು
ನೀರಿಲ್ಲದೆ ಸಾಯೋ ಪ್ರಾಣಿಯ
ಕೊನೆಯ ಕ್ಷಣವ ಝೂಮ್ ಮಾಡಿದ ಕ್ಯಾಮರಾ ಮ್ಯಾನ್
‘ಅಯ್ಯೋ ದೇವರೇ’ ಎಂದು ಅತ್ತು
ನೋಡೋ ವೀಕ್ಷಕರು..!

ಮನೆ ಕಟ್ಟಲು ಮರ ಕಡಿದರು
ಕಟ್ಟಡ ಕಟ್ಟಲು ಗುಡ್ಡೆ ಜರಿದರು
ಜಾಗ ಸಾಕಗಲ್ಲ ಎಂದು
ನದಿಗೆ ಮಣ್ಣು ಹಾಕಿದರು
ಬಿದ್ದ ಮರಕಿಷ್ಟು
ಮಾಡಿದ ಸೈಟಿಗಿಷ್ಟು
ರೇಟ್ ಫಿಕ್ಸ್ ಮಾಡಿ ಮಾರಿದ್ದೇ ಮಾರಿದ್ದು
ಈಗ ಮಲೆ ಮಳೆ ಎರಡೂ ಇಲ್ಲ
ಬಂತು ನೀರಿಗೂ ಒಂದಿಷ್ಟು ಬೆಲೆ…

ಕಡಿದು ಕುಡಿದು ತೇಗಿ
ಈಗ ಜಲಸಂರಕ್ಷಣೆಯ ನೆನಪು ಕಾಡುತ್ತಿದೆ..
ಊರೆಲ್ಲ ಬರಗಾಲ..!

 

✍ಯತೀಶ್ ಕಾಮಾಜೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...