Tuesday, July 15, 2025

*ಮಾಡರ್ನ್ ಕವನ* – *ನೀರಿಗಾಗಿ*

ನೀರಿಲ್ಲದೆ ಪ್ರಾಣಿ ಪಕ್ಷಿ
ಸತ್ತಾಗ
ಮಾನವನ
ಕಣ್ಣೀರ ಧಾರೆ..!

ಜಲಸಂರಕ್ಷಣೆ ಅಧ್ಯಯನ ಮಾಡಿ
ಡಿಗ್ರಿ ಪಡೆದು
ಪಾಠ ಮಾಡಿದವನ ಕೈಯಲ್ಲಿ
ಇತ್ತು ಬಿಸ್ಲೇರಿ ಬಾಟಲ್
ಜಲಸಂರಕ್ಷಣೆ ಕಾನೂನು ಪಾಸ್ ಮಾಡಿದ
ಸರಕಾರಿ ಅಧಿಕಾರಿ ಮನೆಯಲ್ಲಿ
ಇತ್ತು ಬೋರ್‌ವೆಲ್
ಕೇಳಿಸಿಕೊಂಡವರ ಊರ
ಪಕ್ಕದಲ್ಲಿ
ಇತ್ತು ಬತ್ತಿ ಹೋದ ರಿವರ್

ದಿಕ್ಕೆಟ್ಟು ತಲೆ ತಿರುಗಿ ಬಿದ್ದ ಪಕ್ಷಿಯದ್ದು
ನೀರು ಅರಸುತ್ತ ಊರೊಳಗೆ
ನುಗ್ಗಿ ಬಂದ ಪ್ರಾಣಿಗಳದ್ದು
ಕಷ್ಟ ಕೇಳೊರು ಯಾರಿರಲಿಲ್ಲ..!

ಅಲ್ಲಲ್ಲಿ ಕ್ಯಾಮರಾ ಹಿಡಿದು
ಬಿಸಿ ಬಿಸಿ ಸುದ್ದಿ
“ಈ ಬಿಸಿಲಿಗೆ
ಕಾಡು ಬಿಟ್ಟು ನಾಡಿಗೆ ಬರೋ ಪ್ರಾಣಿಗಳು”
‘ಇದೇ ಬ್ರೇಕಿಂಗ್ ನ್ಯೂಸ್’
ಎಂದ ಆ್ಯಂಕರ್.
ಕೈಯಲ್ಲಿ ನೀರು ಬಾಟಲಿ ಹಿಡಿದು
ನೀರಿಲ್ಲದೆ ಸಾಯೋ ಪ್ರಾಣಿಯ
ಕೊನೆಯ ಕ್ಷಣವ ಝೂಮ್ ಮಾಡಿದ ಕ್ಯಾಮರಾ ಮ್ಯಾನ್
‘ಅಯ್ಯೋ ದೇವರೇ’ ಎಂದು ಅತ್ತು
ನೋಡೋ ವೀಕ್ಷಕರು..!

ಮನೆ ಕಟ್ಟಲು ಮರ ಕಡಿದರು
ಕಟ್ಟಡ ಕಟ್ಟಲು ಗುಡ್ಡೆ ಜರಿದರು
ಜಾಗ ಸಾಕಗಲ್ಲ ಎಂದು
ನದಿಗೆ ಮಣ್ಣು ಹಾಕಿದರು
ಬಿದ್ದ ಮರಕಿಷ್ಟು
ಮಾಡಿದ ಸೈಟಿಗಿಷ್ಟು
ರೇಟ್ ಫಿಕ್ಸ್ ಮಾಡಿ ಮಾರಿದ್ದೇ ಮಾರಿದ್ದು
ಈಗ ಮಲೆ ಮಳೆ ಎರಡೂ ಇಲ್ಲ
ಬಂತು ನೀರಿಗೂ ಒಂದಿಷ್ಟು ಬೆಲೆ…

ಕಡಿದು ಕುಡಿದು ತೇಗಿ
ಈಗ ಜಲಸಂರಕ್ಷಣೆಯ ನೆನಪು ಕಾಡುತ್ತಿದೆ..
ಊರೆಲ್ಲ ಬರಗಾಲ..!

 

✍ಯತೀಶ್ ಕಾಮಾಜೆ

More from the blog

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ನಿಧನ.. 

'ಅಭಿನಯ ಸರಸ್ವತಿ' ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೋರ್ವರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ...

ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ..

ಮಂಗಳೂರು : ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ...

ಶ್ರೀ ಕ್ಷೇ.ಧ.ಗ್ರಾ.ಯೋ.ಬಿ.ಸಿ ಟ್ರಸ್ಟ್ ಮಾಣಿ ವಲಯದ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ..

ಬಂಟ್ವಾಳ : ಬಂಟ್ವಾಳ ತಾಲೂಕಿನ ನೆಟ್ಲ ಮುಡ್ನೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಏಮಾಜೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ (ರಿ.) ವಿಟ್ಲ ಇದರ ಮಾಣಿ...