Saturday, February 8, 2025

ಮಾಡರ್ನ್ ಕವನ-ಸತ್ತಮೇಲೆ

ಸತ್ತೇ ಬಿಟ್ಟಳು
ಅಲ್ಲಿವರೆಗೆ ಹಿಡಿದಿಟ್ಟ
ಪ್ರಾಣವ ಬಿಟ್ಟು..!

ಈಗ ಶುರು
ವಿಧಿ ವಿಧಾನಗಳು
ಒಬ್ಬೊಬ್ಬರಾಗಿ
ರಾಶಿ ಹಾಕಿದರು ಊದುಬತ್ತಿಗಳ.,
ಬಿಳಿ ಬಟ್ಟೆಯ,
ಬಗೆ ಬಗೆಯ ಹೂವಾ..

ಸ್ನಾನ ಮಾಡಿಸಿ ಇಟ್ಟರು ಶೃಂಗಾರಕ್ಕೆ
ನಿನ್ನೆಯವರೆಗೆ ಒಂದೇ ಬಟ್ಟೆಯಲ್ಲಿದ್ದಳು
ತೊಡಿಸುವವರಾರಿರಲಿಲ್ಲ..!
ಒಬ್ಬೊಬ್ಬರಾಗಿ ನೀರು ಬಿಟ್ಟರೂ.
ಬಾಯಾರಿಕೆಗೆ ನೀರು ಕೊಟ್ಟವರಾರಿರಲಿಲ್ಲ..!
ಹೂ ಮೇಲಿಂದ ಮೇಲೆ ಹಾಕಿದರು.
ಹೂವಂತೆ ಮಾತಾಡಿದವರು ಯಾರಿಲ್ಲ..!

ಇಟ್ಟ ಕಟ್ಟಿಗೆ
ಸುಡಲು ಹಿಂದು ಮುಂದು ನೋಡಲಿಲ್ಲ..
ಸತ್ತ ಜೀವಕ್ಕೆ ಸುಡುವ ಮಾತಿನಷ್ಟು
ನೋವು ನೀಡಲಿಲ್ಲ.!
ಏರಿ ಬಂದ ಚಟ್ಟ ನಿದ್ದೆಯಿಂದ ಏಳಿಸಲಿಲ್ಲ..
ಜೀವ ಇದ್ದಾಗ ನಿದ್ದೆಗೂ ಬಿಡಲಿಲ್ಲ.!

ಅವಳದೆಲ್ಲ ಸುಡಲಾಯಿತು.
ಚಿನ್ನವ ತೆಗೆದಿರಿಸಲಾಯಿತು.!
ಅವಳನ್ನೂ ಸುಡಲಾಯಿತು.
ನೆನಪುಗಳನ್ನು ಅಳಿಸಲಾಯಿತು..!

ಸುಟ್ಟದರ ಪ್ರಶ್ನೆ ಅಲ್ಲ.,
ಸತ್ತಾಗ ಕೇಳದನ್ನೆಲ್ಲ ಕೊಟ್ಟವರಿಗೆ
ಜೀವದಲ್ಲಿರುವಾಗ ಯಾಕೆ ಕೊಡಲಾಗಲಿಲ್ಲ…!?

✍ಯತೀಶ್ ಕಾಮಾಜೆ

More from the blog

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...

ಬೋಗೋಡಿ ಸಲ್-ಸಬೀಲ್ ಸಂಸ್ಥೆಯ 11ನೇ ವಾರ್ಷಿಕ ಮಹಾಸಭೆ : ಅಧ್ಯಕ್ಷರಾಗಿ ಜಮಾಲ್ ಬಂಗ್ಲೆಗುಡ್ಡೆ ಆಯ್ಕೆ

ಪಾಣೆಮಂಗಳೂರು : ಸಲ್-ಸಬೀಲ್ ಸ್ಟೂಡೆಂಟ್ಸ್ ಎಸೋಸಿಯೇಶನ್ ಬೋಗೋಡಿ ಇದರ 11ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಝೋಮ್ ಮೀಟಿಂಗ್‌ನಲ್ಲಿ ನಡೆಯಿತು. ಸಂಸ್ಥೆಯ ಅಧ್ಯಕ್ಷರಾಗಿ ಜಮಾಲ್ ಬಂಗ್ಲಗುಡ್ಡೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ರಿಲ್ವಾನ್ ಮೆಲ್ಕಾರ್ ಅವಿರೋಧವಾಗಿ...

ದಿವ್ಯಾಂಗತೆಯ ಕುರಿತು ಜಾಗೃತಿ ಕಾರ್ಯಕ್ರಮ

ಬಂಟ್ವಾಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ‌ಮೂಡ, ಅಜ್ಜಿಬೆಟ್ಟು, ಬಿ ಸಿ ರೋಡ್, ಬಂಟ್ವಾಳ ತಾಲೂಕು ಇಲ್ಲಿ ದಿವ್ಯಾಂಗತೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವು ಜ.22ರಂದು ಜರಗಿತು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ವಿಕಾಸಂ...